ಮಕ್ಕಳ ಸಂಭ್ರಮ ಕಸಿದ ಕೋವಿಡ್ : ವಿದ್ಯಾಗಮ ಯೋಜನೆ ಸ್ಥಗಿತ-ಬೀದಿಗೆ ಬಂದ ಮಕ್ಕಳು

ಮಕ್ಕಳ ದಿನಾಚರಣೆಗೂ ಬ್ರೇಕ್‌

Team Udayavani, Nov 16, 2020, 11:00 PM IST

ಮಕ್ಕಳ ಸಂಭ್ರಮ ಕಸಿದ ಕೋವಿಡ್ : ವಿದ್ಯಾಗಮ ಯೋಜನೆ ಸ್ಥಗಿತ-ಬೀದಿಗೆ ಬಂದ ಮಕ್ಕಳು

ಮುದ್ದೇಬಿಹಾಳ: ವಿದ್ಯಾಗಮ ಬಂದ್‌ ಆಗಿದ್ದರಿಂದ ಗ್ರಾಮೀಣ ಪ್ರದೇಶದ ಮಕ್ಕಳು ಪಟ್ಟಣಕ್ಕೆ ಹಣ್ಣು ಮಾರಲು ಬಂದಿದ್ದರು

ಮುದ್ದೇಬಿಹಾಳ: ಕೋವಿಡ್ ಮತ್ತು ದೀಪಾವಳಿ ಹಬ್ಬ ಮಕ್ಕಳ ಸೃಜನಾತ್ಮಕ ಸಂಭ್ರಮವನ್ನೂ ಕಸಿದುಕೊಂಡಿದ್ದು ಈ ಬಾರಿ ನವೆಂಬರ್‌ 14ರಂದು ನಡೆಯಬೇಕಿದ್ದ ಮಕ್ಕಳ ಹಬ್ಬ ಎಂದೇ ಕರೆಯಲಾಗುವ ಮಕ್ಕಳ ದಿನಾಚರಣೆ ನಿಂತು ಹೋಗಿದೆ. ಮಕ್ಕಳ ಕ್ರಿಯಾಶೀಲತೆಗೆ ವೇದಿಕೆಯಾಗಬೇಕಿದ್ದ ಮಕ್ಕಳ ದಿನಾಚರಣೆ ಈ ಭಾಗದಲ್ಲಿ ಎಲ್ಲೂ ನಡೆಯದಿರುವುದು ಕೊರೊನಾ ಕರಾಳತೆಗೆ ಕನ್ನಡಿ ಹಿಡಿದಂತಾಗಿದೆ.

ಒಂದು ಕಡೆ ಕೋವಿಡ್ ನಿಯಮ, ಮಗದೊಂದು ಕಡೆ ದೀಪಾವಳಿಯ ಸಂಭ್ರಮ ಎರಡೂ ಒಟ್ಟಿಗೆ ಬಂದಿರುವುದು ಇದೇ ಮೊದಲಾಗಿದ್ದು ಮಕ್ಕಳ ದಿನಾಚರಣೆಗೆ ಮಂಕು ಕವಿಯಲು ಕಾರಣ ಎಂದು ಈ ಭಾಗದಲ್ಲಿ ವಿಶ್ಲೇಷಿಸಲಾಗುತ್ತಿದೆ. ಶಿಕ್ಷಣ ತಜ್ಞರೂ ಈ ಬಗ್ಗೆ ಚಕಾರ ಎತ್ತದೆ ಮೌನಕ್ಕೆ ಶರಣಾಗಿರುವುದು ಮಕ್ಕಳ ಭವಿಷ್ಯದ ಉಜ್ವಲತೆಯನ್ನೇ ಸಂಶಯದಿಂದ ನೋಡುವಂತಾಗಿದೆ.

ಕೋವಿಡ್ ಮಹಾಮಾರಿ ಶೈಕ್ಷಣಿಕ ವ್ಯವಸ್ಥೆಯನ್ನೇ ಹಾಳುಗೆಡವಿರುವುದು ಎಲ್ಲರಿಗೂ ಗೊತ್ತು. ಇವತ್ತು, ನಾಳೆ ಸುಧಾರಣೆ ಕಾಣಬಹುದು ಎನ್ನುವ ನಿರೀಕ್ಷೆಯೂ ಕಮರಿದೆ. ಶಾಲೆಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕಿದ್ದ ಮಕ್ಕಳು ಮೊಬೈಲ್‌ ಗೇಮ್‌ಗಳಿಗೆ ಅಂಟಿಕೊಂಡು ಕ್ರಿಯಾಶೀಲತೆಯನ್ನೇ ಕಳೆದುಕೊಳ್ಳತೊಡಗಿದ್ದಾರೆ. ಹೊರಗಿನ ಆಟ ಪಾಠಗಳನ್ನೇಮರೆತಂತೆ ನಡೆದುಕೊಳ್ಳುತ್ತಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ಬಂಧಿ ಯಾಗಿ ಕೃತಕ ಜೀವನಕ್ಕೆ ಅನಿವಾರ್ಯವಾಗಿ ಹೊಂದುಕೊಳ್ಳುವ ಧಾವಂತ ಅವರಲ್ಲಿ ಕಂಡು ಬರತೊಡಗಿದೆ.

ನವೆಂಬರ್‌ 14ನ್ನು ಮಕ್ಕಳ ದಿನವಾಗಿ ಆಚರಿಸುವುದು ಪ್ರತಿ ವರ್ಷ ಶಾಲಾ ಕಾಲೇಜುಗಳಲ್ಲಿ ನಿರಂತರ ನಡೆದುಕೊಂಡು ಬಂದಿತ್ತು. ಸರ್ಕಾರಿ, ಖಾಸಗಿ ಶಾಲೆಗಳು ಮಕ್ಕಳ ಚಟುವಟಿಕೆಗೆ ವೇದಿಕೆ ರೂಪಿಸಿ ಅವರಲ್ಲಿನ ಸೃಜನಾತ್ಮಕ ಚಟುವಟಿಕೆಗಳನ್ನು ಹೊರತರಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದವು. ಅಂದಿನ ದಿವಸ ಮಕ್ಕಳ ಸಂಭ್ರಮಕ್ಕೆ ಮಿತಿ ಇಲ್ಲದಂತಾಗಿರುತ್ತಿತ್ತು. ಕೆಲವು ಖಾಸಗಿ ಸಂಸ್ಥೆಗಳು ಮಕ್ಕಳಿಗಾಗಿ ಹಲವು ಸ್ಪರ್ಧೆ,ಚಟುವಟಿಕೆ ಏರ್ಪಡಿಸುತ್ತಿದ್ದವು. ಸಾಧಕ ಮಕ್ಕಳಿಗೆ ಪ್ರಮಾಣ ಪತ್ರ ನೀಡಿ ಪ್ರೋತ್ಸಾಹಿಸುವುದೂ ನಡೆಯುತ್ತಿತ್ತು. ಆದರೆ ಈ ವರ್ಷ ಮಾತ್ರ ಇವೆಲ್ಲವುಗಳಿಗೂ ಕಡಿವಾಣ ಬಿದ್ದಿದ್ದು ಇಂಥ ಯಾವುದೇ ಕಾರ್ಯಕ್ರಮಗಳು ನಡೆದಿಲ್ಲ. ಇದಕ್ಕೆ ಕೋವಿಡ್ ಆತಂಕ ಕಾರಣ ಎಂದು ಬೇರೆ ಹೇಳಬೇಕಾಗಿಲ್ಲ. ಈ ದಿನದಂದು ಮಕ್ಕಳು ಮಹಾನ್‌ ವ್ಯಕ್ತಿಗಳ, ದೇಶಪ್ರೇಮಿಗಳ, ದೇಶಭಕ್ತರ, ಸೈನಿಕರ, ಪೊಲೀಸರ ಉಡುಗೆ ತೊಡುಗೆ ತೊಟ್ಟು ಸಂಭ್ರಮಿಸುತ್ತಿದ್ದರು. ಹಲವೆಡೆ ಫ್ಯಾನ್ಸಿ ಡ್ರೆಸ್‌ ಸ್ಪರ್ಧೆಗಳೂ ನಡೆಯುತ್ತಿದ್ದವು. ಮಕ್ಕಳಿಗಾಗಿ ಮಕ್ಕಳ ಸಾಹಿತಿಗಳಿಂದ ಉಪನ್ಯಾಸಗಳನ್ನು ಏರ್ಪಡಿಸಿ ಮನರಂಜನೆಯ ಜೊತೆಗೆ ಜ್ಞಾನ ತುಂಬುವ ಕೆಲಸವೂ ನಡೆಯುತ್ತಿತ್ತು. ಮನೆಯಲ್ಲಿ, ಶಾಲೆಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ಬಂದಿಯಾಗಿರುತ್ತಿದ್ದ ಮಕ್ಕಳು ಈ ದಿನ ಮಾತ್ರ ಎಲ್ಲ ಕಟ್ಟಳೆಗಳಿಂದ ಹೊರ ಬಂದು ಸ್ವತಂತ್ರ ಹಕ್ಕಿಗಳಂತೆ ಹಾರಾಡುತ್ತಿದ್ದರು, ನಲಿದಾಡುತ್ತಿದ್ದರು. ಆದರೆ ಇದೆಲ್ಲವೂ ಈ ವರ್ಷ ಮಕ್ಕಳ ಪಾಲಿಗೆ ಇಲ್ಲವಾಯಿತು. ಶಾಲೆಗಳೇ ಪ್ರಾರಂಭಗೊಂಡಿಲ್ಲ ಎಂದ ಮೇಲೆ ಇಂಥ ಆಚರಣೆಗಳಿಗೇ ವೇದಿಕೆಯೇ ಇಲ್ಲದಂತಾದದ್ದು ದುರಂತ ಎನ್ನಿಸಿಕೊಂಡಿದೆ.

ಮಕ್ಕಳ ಮನಸ್ಸು  ವಿಚಲಿತ ;ಮಕ್ಕಳು ಕ್ರಿಯಾಶೀಲತೆ ಕಳೆದುಕೊಳ್ಳಬಾರದು, ಕಲಿಕಾ ಚಟುವಟಿಕೆ ನಿರಂತರವಾಗಿರಬೇಕು ಎನ್ನುವ ಸದುದ್ದೇಶದಿಂದ ಸರ್ಕಾರ ವಿದ್ಯಾಗಮ ಹೆಸರಿನಲ್ಲಿ ವಿನೂತನ ಪ್ರಯೋಗಕ್ಕೆ ಮುಂದಾಗಿತ್ತು. ಇದು ಬಹುತೇಕ ಕಡೆ ಯಶಸ್ವಿಯೂ ಆಗಿ ಜನಪ್ರಿಯತೆ ಪಡೆದುಕೊಳ್ಳತೊಡಗಿತ್ತು. ಆದರೆ ಇದ್ದಕ್ಕಿದ್ದಂತೆಯೇ ವಿದ್ಯಾಗಮ ಬಂದ್‌ ಆಗಿ ಅನೇಕರ ಚಡಪಡಿಕೆಗೆ ಕಾರಣವಾಯಿತು. ಶಿಕ್ಷಕರೇನೋ ನಿರಾಳರಾದರು, ಆದರೆ ಮಕ್ಕಳ ಮನಸ್ಸು ಮಾತ್ರ ವಿಚಲಿತಗೊಂಡಿತು. ಗ್ರಾಮೀಣ ಮಕ್ಕಳು ಇದರಿಂದ ಹೆಚ್ಚು ಭಾದಿತರಾದರು. ಮನೆಯಲ್ಲಿ ಮಕ್ಕಳನ್ನು ಕೂಡಿಸಿ ಪ್ರಯೋಜನವಿಲ್ಲ ಎಂದರಿತ ಕೆಲವು ಬಡವರು, ದುಡಿಯುವ ರ್ಗದ ಪಾಲಕರು ತಮ್ಮ ಮಕ್ಕಳನ್ನು ಸಂಪಾದನೆಗೆ ಬಳಸಿಕೊಳ್ಳಲು ಬೀದಿಗೆ ಬಿಟ್ಟರು. ಇವರಲ್ಲಿ ಬಹುತೇಕರು ಪಟ್ಟಣ ಪ್ರದೇಶಕ್ಕೆ ಬಂದು ತಲೆ ಮೇಲೆ ಹಣ್ಣಿನ ಬುಟ್ಟಿ ಹೊತ್ತು ?ಹಣ್ಣು ಬೇಕೇನ್ರೀ ಹಣ್ಣು, ಸೀತಾಫಲ, ಸೇಬು, ಬಾಳೆಹಣ್ಣು?ಎಂದೆಲ್ಲ ಕೂಗುತ್ತ ಓಣಿ ಓಣಿ ಸಂಚರಿಸತೊಡಗಿದ್ದಾರೆ. ಬಹುತೇಕರು ತಮ್ಮ ಜಮೀನಿನಲ್ಲಿ, ಅವರಿವರ ಜಮೀನಿನಲ್ಲಿ ಕೆಲಸ ಮಾಡಲು ಹೋಗತೊಡಗಿದ್ದಾರೆ. ಮಕ್ಕಳ ದಿನಾಚರಣೆಯಂದಾದರೂ ಇವರ ಕಷ್ಟ ಬಗೆಹರಿದು ಮರಳಿ ಶಾಲೆಗೆ ಬಂದು ದಿನಾಚರಣೆಯನ್ನು ಸಂಭ್ರಮಿಸಬಹುದು ಎನ್ನುವ ನಿರೀಕ್ಷೆ ಹುಸಿಯಾದಂತಾಗಿದೆ. ಮುಂದಿನ ದಿನಗಳಲ್ಲಿ ಶಾಲೆ ಪ್ರಾರಂಭಗೊಂಡರೂ ಮಕ್ಕಳು ಕಳೆದ ವರ್ಷ ಇದ್ದ ಉತ್ಸಾಹ ಪುನರ್‌ ಸ್ಥಾಪಿಸಿಕೊಂಡು ಕ್ರಿಯಾಶೀಲರಾಗಿ ಶಾಲೆಗೆ ಬರಬಹುದೇ ಎನ್ನುವ ಪ್ರಶ್ನೆ ಇದೀಗ ಉದ್ಭವಿಸಲು ಪ್ರಾರಂಭಿಸಿದ್ದು ತಜ್ಞರೇ ಉತ್ತರಿಸಬೇಕಿದೆ.

ಕೋವಿಡ್ ದಿಂದಾಗಿ ಮಕ್ಕಳನ್ನು ಒಂದೆಡೆ ಸೇರಿಸಲು ಅವಕಾಶ ಇಲ್ಲದಂತಾಗಿದೆ. ಮೇಲಾಗಿ ಈ ಬಗ್ಗೆ ಸರ್ಕಾರದಿಂದ ಆದೇಶವೂ ಬಂದಿಲ್ಲ. ಹೀಗಾಗಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಮಕ್ಕಳ ದಿನಾಚರಣೆ ಮುಂದೂಡಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಆದೇಶ ನೋಡಿಕೊಂಡು ಮುಂದುವರೆಯಲಾಗುತ್ತದೆ. – ವೀರೇಶ ಜೇವರಗಿ ಬಿಇಒ, ಮುದ್ದೇಬಿಹಾಳ

ಪ್ರತಿ ವರ್ಷ ಮಕ್ಕಳ ದಿನಾಚರಣೆಯಂದು ಮಕ್ಕಳ ಹಬ್ಬದ ಅದ್ಧೂರಿ ಕಾರ್ಯಕ್ರಮ ಹಮ್ಮಿಕೊಂಡು ಮಕ್ಕಳಲ್ಲಿನ ಸೃಜನಾತ್ಮಕತೆ ಹೊರತರುವಕಾರ್ಯಕ್ರಮ ನಡೆಸುತ್ತಿದ್ದೆವು. ಆದರೆ ಈ ಬಾರಿ ಕೊರೊನಾದ ಕಠಿಣ ನಿಯಮಗಳು ಆಚರಣೆಗೆ ಅವಕಾಶ ನೀಡಿಲ್ಲ. ಸರ್ಕಾರ ನಿಯಮ ಸಡಿಲಿಸಿದಲ್ಲಿ ಆಚರಣೆಗೆ ಮುಂದಾಗಬಹುದು.  ಚಂದ್ರಶೇಖರ ಕಲಾಲ್‌ ಕಾರ್ಯದರ್ಶಿ, ಪ್ರೇರಣಾ ಕಿಂಡರ್‌ಗಾರ್ಡನ್‌ ಶಾಲೆ, ಮುದ್ದೇಬಿಹಾಳ

 

ಡಿ.ಬಿ. ವಡವಡಗಿ

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.