ಇಜಿಪ್ತ್ ರಾಜಧಾನಿ ಕೈರೋ ದಲ್ಲೂ ದೀಪಾವಳಿ ಸಂಭ್ರಮ


Team Udayavani, Nov 15, 2020, 4:44 PM IST

vp-tdy-2

ಮುದ್ದೇಬಿಹಾಳ: ಇಜಿಪ್ತ್ನ ಕೈರೋದಲ್ಲಿ ವಿಜ್ಞಾನಿ ಚಂದ್ರಶೇಖರ ಬಿರಾದಾರ ಅವರ ನಿವಾಸದಲ್ಲಿ ಅಲ್ಲಿನ ಕನ್ನಡಿಗರು ದೀಪಾವಳಿ ಹಬ್ಬ ಆಚರಿಸಿದರು.

ಮುದ್ದೇಬಿಹಾಳ: ಇಜಿಪ್ತ್ ನ  ರಾಜಧಾನಿ ಕೈರೋದಲ್ಲಿ ವಾಸವಾಗಿರುವ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಢವಳಗಿ ಗ್ರಾಮದ ಚಂದ್ರಶೇಖರ ಬಿರಾದಾರ ಅವರು ತಮ್ಮ ನಿವಾಸದಲ್ಲಿ ಅಲ್ಲಿನ ಕನ್ನಡ ಬಳಗದೊಂದಿಗೆ ದೀಪಾವಳಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸುವ ಮೂಲಕ ವಿದೇಶದಲ್ಲೂ ದೀಪಾವಳಿ ಸೊಗಡನ್ನು ಪಸರಿಸಿದ್ದಾರೆ.

ಕೈರೋದಲ್ಲಿ ನೆಲೆ ನಿಂತು ಕೃಷಿ ವಿಜ್ಞಾನಿಗಳ ತಂಡದ ಮುಖ್ಯಸ್ಥರಾಗಿ ಬೇರೆ ದೇಶಗಳ ವಿಜ್ಞಾನಿಗಳ ಸಂಪರ್ಕ ಹೊಂದಿರುವ ಇವರು ದಸರಾ, ಕನ್ನಡ ರಾಜ್ಯೋತ್ಸವ, ಹೋಳಿ, ದೀಪಾವಳಿ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಸೇರಿ ಭಾರತದ ಹಲವು ಹಬ್ಬಗಳನ್ನು ಆಚರಿಸುವ ಸಂಪ್ರದಾಯ ಪಾಲಿಸುತ್ತಿದ್ದಾರೆ. ಈ ದೀಪಾವಳಿಯಂದು ತಮ್ಮ ಮನೆಯಲ್ಲೇ ಕಚ್ಚಾ ಸಾಮಗ್ರಿ ಬಳಸಿ ಆಕಾಶಬುಟ್ಟಿ, ದೀಪದ ಆಕಾರದ ತೋರಣ ಸೇರಿ ಹಲವು ಅಲಂಕಾರಿಕ ಸಾಮಗ್ರಿಗಳನ್ನು ತಮ್ಮ ಮಕ್ಕಳ ಮೂಲಕವೇ ತಯಾರಿಸಿದ್ದಾರೆ. ಇಜಿಪ್ತ್ನ ಆಕಾಶದಲ್ಲಿ ನಮ್ಮ ದೇಶದ ಸಂಸ್ಕೃತಿ ಬಿಂಬಿಸುವ ಆಕಾಶಬುಟ್ಟಿಯ ಹಾರಾಟ ಆಕರ್ಷಣೆಗೆ ಕಾರಣವಾಗಿದೆ.

ತಮ್ಮ ಮನೆಯ ವರಾಂಡಾ, ಮೇಲ್ಛಾವಣಿ ಸೇರಿದಂತೆ ವಿವಿಧೆಡೆ ಕನ್ನಡದ ನೆಲದ ತರಕಾರಿ, ಹಣ್ಣು ಬೆಳೆದು ಪಕ್ಷಿಗಳಿಗಾಗಿ ಗೂಡನ್ನೂ ನಿರ್ಮಿಸಿ ಪರಿಸರಪ್ರಿಯರೆನ್ನಿಸಿಕೊಂಡಿರುವ ಚಂದ್ರಶೇಖರ ಅವರು ಪರಿಸರ ಪ್ರೇಮಿ ದೀಪಾವಳಿಗೆ ಹೆಚ್ಚು ಮಹತ್ವ ನೀಡಿದ್ದಾರೆ. ಮನೆಯಲ್ಲಿ ರಂಗವಲ್ಲಿ ಹಾಕಿ, ಅಲ್ಲಲ್ಲಿ ದೀಪ ಹಚ್ಚಿ ಇಡಿ ಮನೆಯನ್ನೇ ಹಣತೆಯ ದೀಪಗಳ ಪ್ರಕಾಶಕ್ಕೆ ವ್ಯವಸ್ಥೆ ಮಾಡಿದ್ದಾರೆ. ತಮ್ಮ ಕುಟುಂಬ ಮಾತ್ರವಲ್ಲದೆ ಅಕ್ಕಪಕ್ಕದ ಕನ್ನಡಿಗರ ಕುಟುಂಬಗಳನ್ನು ಮನೆಗೆ ಕರೆಸಿಕೊಂಡು ಎಲ್ಲರೂ ಒಟ್ಟಾಗಿ ದೀಪ ಬೆಳಗಿಸಿ ಹಬ್ಬದ ಸಂಭ್ರಮ ಸವಿದಿದ್ದಾರೆ.

ಈ ಕುರಿತು ಉದಯವಾಣಿಯೊಂದಿಗೆ ಮಾತನಾಡಿದ ಅವರು, ಅಜ್ಞಾನ, ಅಂಧಕಾರದ ಕತ್ತಲೆಯನ್ನು ಹೊಡೆ ದೋಡಿಸುವ ದೀಪಾವಳಿಗೆ ನಾವು ಪರಿಸರಸ್ನೇಹಿ ಸ್ಪರ್ಶ ನೀಡಿದ್ದೇವೆ. ಅಲಂಕಾರ, ಆಹಾರ ಸೇವನೆ, ಕಾಣಿಕೆ ನೀಡುವಿಕೆ ಸೇರಿ ಹಲವು ಸಂಭ್ರಮಗಳನ್ನು ಪರಿಸರಸ್ನೇಹಿಯಾಗಿ ಮಾಡಬಹುದು ಎನ್ನುವುದನ್ನು ನಾವು ಪಾಲಿಸುತ್ತಿದ್ದೇವೆ. ದೀಪಾವಳಿಗೆ ಅಗತ್ಯವಿರುವ ವಸ್ತುಗಳು ಇಲ್ಲಿ ಸಿಗೊಲ್ಲ. ಹಾಗಾಗಿ ಕಚ್ಚಾ ಸಾಮಗ್ರಿಗಳನ್ನು ತಂದು ನಾವೇ ಕುಟುಂಬ ಸಮೇತ ಅಗತ್ಯ ವಸ್ತುಗಳನ್ನು ತಯಾರಿಸಿ ಮನೆಗಳನ್ನು ಅಲಂಕರಿಸಿ ಸಂಭ್ರಮಿಸುತ್ತೇವೆ. ನಮ್ಮ ಮನೆಯ ಹಸಿರಿನ ಪರಿಸರದೊಂದಿಗೆ ದೀಪಗಳ

ಅಲಂಕಾರ ನೋಡುಗರ ಕಣ್ಣಿಗೆ ಉಲ್ಲಾಸ ನೀಡುವಂತಿದೆ. ಇಜಿಪ್ತ್ನಂಥ ರಾಷ್ಟ್ರದಲ್ಲಿ ನಮ್ಮ ಹಬ್ಬಗಳನ್ನು ಆಚರಿಸುವುದು ನಮಗೆ ಖುಷಿ ಕೊಡುವುದರ ಜೊತೆಗೆ ನಮ್ಮ ಸಂಸ್ಕೃತಿ ಅನಾವರಣಕ್ಕೆ ಅವಕಾಶವನ್ನೂ ಸೃಷ್ಟಿಸುತ್ತದೆ. ಇದು ನಮಗೆ ಹೆಮ್ಮೆಯ ಸಂಗತಿ ಎಂದು ತಿಳಿಸಿದ್ದಾರೆ.

 

ವಿಶೇಷ ವರದಿ

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.