ಡೋಣಿ ನದಿ ಹೂಳು ತೆರವಿಗೆ ಕ್ರಮ: ನಡಹಳ್ಳಿ
Team Udayavani, Nov 13, 2020, 9:10 PM IST
ತಾಳಿಕೋಟೆ: ಡೋಣಿ ನದಿಯಲ್ಲಿ ತುಂಬಿಕೊಳ್ಳುತ್ತಾಬಂದಿರುವ ಹೂಳು ಮತ್ತು ಮುಳ್ಳುಕಂಠಿಗಳನ್ನು ತೆರವುಗೊಳಿಸಿ ಪ್ರವಾಹದಿಂದ ರೈತರಿಗಾಗುತ್ತಿರುವ ತೊಂದರೆ ನಿವಾರಿಸಲು ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಅಧ್ಯಕ್ಷ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಹೇಳಿದರು.
ಪಟ್ಟಣಕ್ಕೆ ಹೊಂದಿಕೊಂಡು ಹರಿಯುತ್ತಿರುವ ಡೋಣಿ ನದಿ ಯಲ್ಲಿ ಬೆಳೆದಿರುವ ಮುಳ್ಳುಕಂಠಿ ಹಾಗೂ ಹೂಳನ್ನು ಪರಿಶೀಲಿಸಿದ ಅವರು, ತಾಳಿಕೋಟೆ ವ್ಯಾಪ್ತಿಯಲ್ಲಿ ಡೋಣಿ ನದಿ ಪ್ರವಾಹ ಬಂದಾಗಲೆಲ್ಲಾ ಬೊಮ್ಮನಹಳ್ಳಿಗ್ರಾಮದಿಂದ ಬೋಳವಾಡ, ತಾಳಿಕೋಟೆ, ಹರನಾಳ ಗ್ರಾಮದವರೆಗೆ ಸುಮಾರು 500ರಿಂದ 600 ಎಕರೆ ರೈತರ ಜಮೀನುಗಳು ಹಾಳಾಗುತ್ತಾ ಸಾಗಿವೆ. ಇದಕ್ಕೊಂದುಪರಿಹಾರ ಕಂಡುಕೊಳ್ಳಬೇಕೆಂದು ನಾನು ಮತ್ತು ಕೆಬಿಜೆಎನ್ ಎಲ್ ಟೆಕ್ನಿಕಲ್ ಸ್ಪೇಷಾಲಿಸ್ಟ್ ತಾಳಿಕೋಟೆಯ ಸುಧೀರ ಸಜ್ಜನಅವರಿಗೆ ಹೇಳಿದ್ದೇನೆ. ಅವರು ಈ ಪ್ರವಾಹ ಹಾನಿ ತಪ್ಪಿಸಲು ಏನು ಮಾಡಲಿಕ್ಕೆ ಅವಕಾಶಗಳಿವೆ ಎಂಬುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.
ಪರಂ ಶಿವಯ್ಯ ವರದಿಯಲ್ಲಿ ಒಂದು ರಿಪೋರ್ಟ್ ಕೂಡಾ ಈಗಾಗಲೇ ಆಗಿದೆ. ಈ ಮುಳ್ಳುಕಂಠಿ ಮತ್ತು ಹೂಳು ತೆಗೆಸಬೇಕು. ಡೋಣಿ ಹತ್ತಿರ ಹಳೆಯ ಬ್ರಿಜ್ ಇದೆ. ಅದನ್ನು ತೆರವುಗೊಳಿಸಿದರೆ ರೈತರ ಹೊಲಗಳಿಗೆ ಪ್ರವಾಹ ನುಗ್ಗುವುದನ್ನು ತಡೆಯಬಹುದೆಂಬ ಸಲಹೆ ಕೊಟ್ಟಿದ್ದೇನೆ. ಅದರ ಪ್ರಕಾರ ಲೋಕೋಪಯೋಗಿ ಇಲಾಖೆ ಸಚಿವ ಗೋವಿಂದ ಕಾರಜೋಳ ಅವರ ಗಮನಕ್ಕೆ ತರಲಾಗುವುದು. ಈ ಕುರಿತು ಸರ್ಕಾರದಿಂದ ಅನುಮತಿ ಪಡೆದು ಮುಂದಿನ ದಿನಗಳಲ್ಲಿ ಈ ಕೆಲಸವನ್ನು ಪೂರ್ಣಗೊಳಿಸುವಂತಹ ಕೆಲಸ ಮಾಡುತ್ತೇನೆಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ವಾಸುದೇವ ಹೆಬಸೂರ, ರಾಜುಗೌಡ ಗುಂಡಕನಾಳ, ತಾಪಂ ಅಧ್ಯಕ್ಷ ರಾಜುಗೌಡ ಕೊಳೂರ, ಎಂ.ಎಂ. ಪಾಟೀಲ, ಈಶ್ವರ ಹೂಗಾರ, ಮುದಕಣ್ಣ ಬಡಿಗೇರ, ತಾಲೂಕು ತಹಶೀಲ್ದಾರ್ ಅನಿಲಕುಮಾರ ಢವಳಗಿ, ಪಿಎಸ್ಐ ಜಿ.ಜಿ. ಬಿರಾದಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
SSLC ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಗೆ ಎದೆನೋವು… ಆಸ್ಪತ್ರೆಗೆ ದಾಖಲು
Muddebihal: ಆಕಸ್ಮಿಕ ಬೆಂಕಿ: 2 ಲಕ್ಷ ಮೌಲ್ಯದ ಗುಜರಿ ಸಾಮಗ್ರಿ ಬೆಂಕಿಗಾಹುತಿ
BJP; ಜಿಗಜಿಣಗಿ ಹಠಾವೋ, ಬಿಜೆಪಿ ಬಚಾವೋ ಘೋಷಣೆ, ಪ್ರತಿಭಟನೆ
Vijayapura; ಪರೀಕ್ಷೆ ಬರೆಯುವ ಸಹಾಯಕ ಇಲ್ಲದೇ ವಿಕಲಾಂಗ ಪರೀಕ್ಷಾರ್ಥಿ ಪರದಾಟ
Vijayapura; ಚುನಾವಣೆ ಕರ್ತವ್ಯ ಚ್ಯುತಿ: ಶಿಕ್ಷಕ ಮುಲ್ಲಾ ಸಸ್ಪೆಂಡ್
MUST WATCH
ಹೊಸ ಸೇರ್ಪಡೆ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ