ರಸ್ತೆ ಅತಿಕ್ರಮಣ ತೆರವಿಗೆ ಅಡ್ಡಿ -ವಾಗ್ವಾದ
Team Udayavani, Jun 10, 2022, 3:41 PM IST
ಮುದ್ದೇಬಿಹಾಳ: ಪಟ್ಟಣದ ಎಂಜಿಎಂಕೆ ಶಾಲೆ ಮುಂಭಾಗದ ಬಿದರಕುಂದಿ-ತಾರನಾಳ ಸಂಪರ್ಕ ರಸ್ತೆ ಅತಿಕ್ರಮಣ ತೆರವಿಗೆ ಮುಂದಾದ ಪುರಸಭೆ ಸಿಬ್ಬಂದಿ ಜೊತೆ ಅತಿಕ್ರಮಣದಾರರು ಗುರುವಾರ ವಾಗ್ವಾದ ನಡೆಸಿದರು.
ರಸ್ತೆಯ ಎರಡೂ ಬದಿ ಹೋಟೆಲ್, ಖಾನಾವಳಿ ಮುಂತಾದ ಅಂಗಡಿ ಹಾಕಿ ಸುಗಮ ಸಂಚಾರಕ್ಕೆ ಅಡ್ಡಿಯಾಗುವಂತೆ ಮಾಡಿದ್ದನ್ನು ಮತ್ತು ಈ ರಸ್ತೆಯಲ್ಲಿ ಕುಡಿವ ನೀರಿನ ಪೈಪ್ಲೈನ್ ಅಳವಡಿಸಬೇಕಿರುವುದರಿಂದ ಅತಿಕ್ರಮಣ ತೆರವಿಗೆ ಪುರಸಭೆ ಅಧಿಕಾರಿ ವರ್ಗ ಮುಂದಾಗಿತ್ತು. ಆದರೆ 103 ಮತ್ತು 104 ಸಂಖ್ಯೆಯ ಆಸ್ತಿಗಳ ಮಾಲೀಕರು ತಕರಾರು ತೆಗೆದು ರಸ್ತೆ ಜಾಗ ಕುರಿತು ಮೊದಲಿನಿಂದಲೂ ಗೊಂದಲ ಇದೆ. ಆ ಗೊಂದಲ ಬಗೆಹರಿಯುವವರೆಗೂ ಅತಿಕ್ರಮಣ ತೆರವು ಅಥವಾ ಇತರೆ ಕಾಮಗಾರಿ ನಡೆಸದಂತೆ ಒತ್ತಾಯಿಸಿದರು.
ಆದರೆ ಶಾಲೆ ಮುಂದೆ ಮೊದಲಿನಿಂದಲೂ ರಸ್ತೆ ಇದೆ, ಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಈಗ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ನಿವೇಶನಗಳನ್ನು ಬೇರೆಯವರು ಖರೀದಿಸಿದ್ದರಿಂದ ರಸ್ತೆ ಬಿಡುವ ಮತ್ತು ಕಟ್ಟಡ ನಿರ್ಮಿಸುವ ಕುರಿತು ತಕರಾರು ಇದೆ ಎನ್ನುವುದನ್ನು ಮನವರಿಕೆ ಮಾಡಿಕೊಂಡ ಪುರಸಭೆ ಅಧಿಕಾರಿ ವರ್ಗ ಅತಿಕ್ರಮಣ ತೆರವು ಕಾರ್ಯಾಚರಣೆ ಕೈ ಬಿಟ್ಟು ಪೈಪ್ಲೈನ್ ಕಾಮಗಾರಿ ಬದಲಾಯಿಸಿ ರಸ್ತೆ ಮಧ್ಯೆ ಅಗೆದು ಪೈಪ್ಲೈನ್ ಅಳವಡಿಸಲು ಕ್ರಮ ಕೈಗೊಂಡರು.
ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ, ಪುರಸಭೆ ಕಂದಾಯ ಅಧಿಕಾರಿ ಎಂ.ಬಿ. ಮಾಡಗಿ, ಪುರಸಭೆ ಸಿಬ್ಬಂದಿ ಮತ್ತು ನಿವಾಸಿಗಳಾದ ಮುಖೇಶ ಓಸ್ವಾಲ್, ಜಗದೀಶ ಕಂಚ್ಯಾಣಿ, ವಿನಾಯಕ ಝಿಂಗಾಡೆ, ಗಂಗನಗೌಡರ, ಗೋಪಿ ಮಡಿವಾಳರ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru ಗ್ರಾಮಾಂತರದಲ್ಲಿ ಕಾಂಗ್ರೆಸ್ 500 ಕೋಟಿ ರೂ. ಖರ್ಚು’
Congress ಗೆ ದೇಶದಲ್ಲಿ 40 ಸ್ಥಾನ ಸಿಗೋದು ಕಷ್ಟ, ರಾಜ್ಯದಲ್ಲಿ ಬಿಜೆಪಿಗೆ 28 ಸ್ಥಾನ ಸ್ಪಷ್ಟ
2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ
UPSC Result: ವಿಜಯಪುರದ ವಿಜೇತಾಗೆ ಯುಪಿಎಸ್ಸಿಯಲ್ಲಿ 100ನೇ ರ್ಯಾಂಕ್
ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು
Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ
Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ
IPL; ಪಂಜಾಬ್ ಕಿಂಗ್ಸ್-ಮುಂಬೈ ಇಂಡಿಯನ್ಸ್ : ಒಂದೇ ದೋಣಿಯ ಪಯಣಿಗರು
Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ