ವಿವಿಧೆಡೆ ಆಹಾರ ಧಾನ್ಯ ಕಿಟ್ ವಿತರಣೆ
Team Udayavani, Jun 6, 2021, 8:30 PM IST
ಮುದ್ದೇಬಿಹಾಳ: ಸಾಕಷ್ಟು ಜನರಲ್ಲಿ ಹಣವಿದ್ದರೂ ಸೇವೆ ಮಾಡುವ ಮನೋಭಾವ ಇರುವುದು ಕೆಲವರಲ್ಲಿ ಮಾತ್ರ. ಸ್ವಲ್ಪ ಸಹಾಯ ಮಾಡಿ ಹೆಚ್ಚು ಪ್ರಚಾರ ಪಡೆಯುವವರೇ ಎಲ್ಲೆಡೆ ಕಂಡು ಬರುತ್ತಿದ್ದಾರೆ. ಇಂಥವರ ನಡುವೆ ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಜೋಡಿ ಮಾದರಿ ಕಾರ್ಯ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಂ.ಡಿ. ಕುಂಬಾರ ವಕೀಲರು ಹೇಳಿದರು.
ಅಡವಿಸೋಮನಾಳ ಪಿಎಚ್ ಸಿಯಲ್ಲಿ ಶನಿವಾರ ದೇಸಾಯಿ, ಪಾಟೀಲ ಗೆಳೆಯರ ಬಳಗದಿಂದ ಏರ್ಪಡಿಸಿದ್ದ ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತೆಯರಿಗೆ ದಿನಬಳಕೆ ಸಾಮಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಭುಗೌಡ ದೇಸಾಯಿ ಮಾತನಾಡಿ, 4-5 ದಿನಗಳಿಂದ ತಾಳಿಕೋಟೆ, ತಮದಡ್ಡಿ, ಕೊಣ್ಣೂರು ಪಿಎಚ್ ಸಿಗಳಲ್ಲಿ ಕಿಟ್ ನೀಡಿದ್ದು ಮುಂದಿನ ದಿನಗಳಲ್ಲಿ ನಾಲತವಾಡ ಸಿಎಚ್ಸಿ, ತಂಗಡಗಿ, ಕಾಳಗಿ, ಢವಳಗಿ ಪಿಎಚ್ಸಿ, ಮುದ್ದೇಬಿಹಾಳ ವ್ಯಾಪ್ತಿಯಲ್ಲಿ ಕಿಟ್ ವಿತರಿಸಲಾಗುತ್ತದೆ.
ಅಂದಾಜು 800 ಕಿಟ್ ಸಿದ್ಧಪಡಿಸಿದ್ದು ಅಗತ್ಯ ಬಿದ್ದರೆ ಹೆಚ್ಚಿಸುವುದಾಗಿ ಹೇಳಿದರು. ಆರ್.ಎಸ್. ಪಾಟೀಲ ಕೂಚಬಾಳ ಮಾತನಾಡಿ, ಕೊರೊನಾ ವಾರಿಯರ್ ಗಳ ಸೇವೆ ಅನನ್ಯವಾದದ್ದು. ಎಷ್ಟು ಜನ್ಮ ಎತ್ತಿದರೂ ಇವರ ಋಣ ತೀರಿಸುವುದು ಸಾಧ್ಯವಿಲ್ಲ ಎಂದರು. ಪಿಎಚ್ಸಿ ವೈದ್ಯಾ ಧಿಕಾರಿ ಡಾ| ಸಿ.ಎಚ್. ನಾಗರಬೆಟ್ಟ ಮಾತನಾಡಿದರು.
ಬಿಜೆಪಿ ಧುರೀಣರಾದ ವಿಕ್ರಮ್ ಓಸ್ವಾಲ್, ದೇವೇಂದ್ರ ವಾಲೀಕಾರ, ಮಂಜುನಾಥ ರತ್ನಾಕರ, ಶಿವು ದಡ್ಡಿ, ಬಿ.ಬಿ. ಭೋವಿ, ನಿಂಗಣ್ಣ ರಾಮೋಡಗಿ, ಬಿಎಂಟಿಸಿ ನಿರ್ದೇಶಕ ಶ್ರೀಧರ ಕಲ್ಲೂರ, ಢವಳಗಿ ಗ್ರಾಪಂ ಸದಸ್ಯ ಸುರೇಶ ಪಾಟೀಲ, ಅಡವಿಸೋಮನಾಳ ಗ್ರಾಪಂನ ಕೆಲ ಸದಸ್ಯರು, ಪಿಡಿಒ ಎಸ್. ಕೆ. ಹಡಪದ ಇದ್ದರು. ಸಿದ್ದು ಹೆಬ್ಟಾಳ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್
BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ
SSLC ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಗೆ ಎದೆನೋವು… ಆಸ್ಪತ್ರೆಗೆ ದಾಖಲು
Muddebihal: ಆಕಸ್ಮಿಕ ಬೆಂಕಿ: 2 ಲಕ್ಷ ಮೌಲ್ಯದ ಗುಜರಿ ಸಾಮಗ್ರಿ ಬೆಂಕಿಗಾಹುತಿ
BJP; ಜಿಗಜಿಣಗಿ ಹಠಾವೋ, ಬಿಜೆಪಿ ಬಚಾವೋ ಘೋಷಣೆ, ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ