ಶಾಸಕರಿಂದ ಸಹಾಯಧನ ವಿತರಣೆ
Team Udayavani, Apr 6, 2022, 2:59 PM IST
ಮುದ್ದೇಬಿಹಾಳ: ತಾಲೂಕಿನ ಢವಳಗಿ ಹೋಬಳಿ ವ್ಯಾಪ್ತಿಯ ಅಗಸಬಾಳ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಬೀಸಿದ ಭಾರೀ ಬಿರುಗಾಳಿಗೆ ಮರವೊಂದು ಧರೆಗುರುಳಿ ಅದೇ ವೇಳೆ ಸಿಡಿಲಿನ ಹೊಡೆತಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದು ಜೀವನಾಧಾರವಾಗಿದ್ದ ಮೂರು ಮೇಕೆಗಳನ್ನು ಕಳೆದುಕೊಂಡ ಮಲ್ಲಮ್ಮ ಹುಲ್ಲಪ್ಪ ವಗ್ಗರಗೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯವರು ವೈಯಕ್ತಿಕವಾಗಿ 10,000 ರೂ. ಆರ್ಥಿಕ ನೆರವು ನೀಡಿದರು.
ತಾಪಂ ಕಚೇರಿಯಲ್ಲಿ ನಡೆದ ಪಿಡಿಒಳ ಸಭೆಯ ನಂತರ ತಮ್ಮನ್ನು ಭೇಟಿಯಾದ ಗ್ರಾಮಸ್ಥರು ಮತ್ತು ಮಲ್ಲಮ್ಮಳಿಂದ ಘಟನೆಯ ಮಾಹಿತಿ ಕೇಳಿ ತಿಳಿದುಕೊಂಡ ಶಾಸಕರು, ಸರ್ಕಾರದಿಂದ ಪರಿಹಾರ ಲಭ್ಯವಾಗುವ ಅವಕಾಶ ಇದ್ದಲ್ಲಿ ಮಲ್ಲಮ್ಮಳಿಗೆ ನೆರವಾಗುವಂತೆ ತಹಶೀಲ್ದಾರ್ ಬಿ.ಎಸ್. ಕಡಕಭಾವಿ ಅವರಿಗೆ ತಿಳಿಸಿದರು.
ತಾಪಂ ಇಒಗಳಾದ ಎಸ್.ವೈ. ಹೊಕ್ರಾಣಿ, ಬಿ.ಎಂ.ಬಿರಾದಾರ, ಟಿಎಚ್ಒ ಡಾ| ಸತೀಶ ತಿವಾರಿ, ಅಗ್ರಿ ಎಡಿ ರೇವಣೆಪ್ಪ ಮನಗೂಳಿ, ಬಿಇಒ ಎಚ್.ಜಿ.ಮಿರ್ಜಿ, ಗ್ರಾಮದ ಅರವಿಂದ ಕಾಶಿನಕುಂಟಿ ಮತ್ತಿತರರು ಇದ್ದರು.