ಮತಗಟ್ಟೆ ಆವರಣದಲ್ಲಿ ಬಿಸಿಲಿಗೆ ಕುಳಿತು ಚಳಿ ಕಾಯಿಸಿದ ಮತದಾರರು!
Team Udayavani, Dec 22, 2020, 12:00 PM IST
ವಿಜಯಪುರ: ಜಿಲ್ಲೆಯಲ್ಲಿ ಗ್ರಾ.ಪಂ. ಮೊದಲ ಹಂತದ ಚುನಾವಣೆಗೆ ಮಂಗಳವಾರ ಮತದಾನ ನಡೆಯುತ್ತಿದ್ದು, ಚಳಿಯ ಕಾರಣ ಅಲ್ಲಲ್ಲಿ ನಿಧಾನಗತಿಯ ಮತದಾನ ನಡೆದಿದೆ.
ಮುದ್ದೇಬಿಹಾಳ ತಾಲೂಕ ಆಲೂರ ಗ್ರಾಮದ ಮತದಾರರು ಚಳಿಯ ಕಾರಣ ಸಾಲಿನಲ್ಲಿ ನಿಲ್ಲಲಾಗದೇ ಮತಗಟ್ಟೆ ಆವರಣದಲ್ಲಿ ಬಿಸಿಲಿಗೆ ಕುಳಿತು ಚಳಿ ಕಾಯಿಸಿದ್ದಾರೆ. ತಮ್ಮ ಪಾಳಿ ಬಂದಮೇಲೆ ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದಾರೆ.
ಇದನ್ನೂ ಓದಿ:ಪ್ರಚಾರ ಮಾಡಿದ್ದು ‘ಹಲ್ಲುಜ್ಜುವ ಪೇಸ್ಟ್’ ಚಿಹ್ನೆಗೆ,ಮತಪತ್ರದಲ್ಲಿ ಮುದ್ರಣವಾಗಿದ್ದು ‘ಬ್ರಷ್’
ಬಳ್ಳಾರಿ ಜಿಲ್ಲೆಯ ಶಂಕರಬಂಡೆ ಗ್ರಾಪಂ ವ್ಯಾಪ್ತಿಯ ತೊಲಮಾಮಡಿ ಮತಗಟ್ಟೆಯಲ್ಲಿ ಚಿಹ್ನೆ ಮುದ್ರಣ ದೋಷದಿಂದಾಗಿ ಮತದಾನ ಸ್ಥಗಿತವಾದ ಘಟನೆ ನಡೆದಿದೆ.