ರೈತರಿಂದ ಮೀನುಮರಿ ಪಾಲನಾ ಕೇಂದ್ರ ಜಮೀನು ಒತ್ತುವರಿ


Team Udayavani, Jan 28, 2019, 11:13 AM IST

vij-3.jpg

ನಾಲತವಾಡ: ಬಾಚಿಹಾಳ-ಸಿದ್ದಾಪುರ ಗ್ರಾಮದ ಮೀನುಮರಿ ಪಾಲನಾ ಕೇಂದ್ರಕ್ಕೆ ಸಂಬಂಧಿಸಿದ ಜಮೀನನ್ನು ರಾತ್ರೋ ರಾತ್ರಿ ರೈತರು ಜೆಸಿಬಿ ಮೂಲಕ ಒತ್ತುವರಿ ಪಡೆದುಕೊಳ್ಳುತ್ತಿದ್ದ ಘಟನೆ ಶನಿವಾರ ಬೆಳಕಿಗೆ ಬಂದಿದ್ದು ರವಿವಾರ ಅಧಿಕಾರಿಗಳು ಒತ್ತುವರಿ ಸ್ಥಳಕ್ಕೆ ಭೇಟಿ ನೀಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಹಿನ್ನಲೆ: 1983ರಲ್ಲೇ 7 ರೈತರಿಂದ ಅಂದಿನ ಅಂದಾಜು ಬೆಲೆ ನೀಡಿ ಕೆಬಿಜೆಎನ್‌ಎಲ್‌ ಇಲಾಖೆ ಸುಮಾರು 72 ಎಕರೆ ಪ್ರದೇಶದ ಜಮೀನನ್ನು ವಶಕ್ಕೆ ಪಡೆದುಕೊಂಡಿದೆ. ನಂತರ ಖಜಾನೆಯಿಂದ ನೇರವಾಗಿ ಜಮೀನು ಮಾಲೀಕರಿಗೆ ನಿಗದಿತ ಬೆಲೆಯ ಹಣ ನೀಡಲಾಗಿದೆ. ಸಾಕ್ಷಾಧಾರಗಳನ್ನು ಇಲಾಖೆ ತನ್ನಲ್ಲಿರಿಸಿಕೊಂಡಿದ್ದರೂ ರೈತರು ಪ್ರಾಣ ಹೋದರೂ ಜಮೀನು ಬಿಡಲ್ಲ ಎಂದು ಹಠ ಸಾಧಿಸುತ್ತೀರುವುದು ಕುತೂಹಲ ಮೂಡಿಸಿದೆ.

ಸುಮಾರು 35 ವರ್ಷಗಳಿಂದ ಸರಕಾರ ನಮ್ಮ ಜಮೀನನ್ನು ಪಡೆದಕೊಂಡು ಅಂದು ಸೂಕ್ತ ಬೆಲೆ ನೀಡಲಾಗಿದೆ ಎಂದು ಹೇಳಿದೆ. ಆದರೆ ಆ ಜಮೀನಿನ ದುಡ್ಡು ನಮ್ಮ ಕೈ ಸೇರಿಲ್ಲ. ಇಲಾಖೆಯವರು ನಮ್ಮನ್ನು ತಪ್ಪು ದಾರಿಗೆಳೆಯುತ್ತಿದೆ. ಸದ್ಯ ನಮ್ಮ ಜಮೀನು ನಮಗೆ ಬೇಕು ಅಥವಾ ಪ್ರಸ್ತುತ ಜಮೀನು ಬೆಲೆ ಬೇಕು ಎಂದು ಹಠ ಹಿಡಿದ ರೈತರ ಹಾಗೂ ಇಲಾಖೆಯ ನಡೆ ನಿ ಕೊಡೆ ನಾ ಬಿಡೆ ಎಂಬಂತಾಗಿದೆ.

ತಡೆಯಾಜ್ಞೆ-ಆಕ್ರೋಶ: ನಮ್ಮ ಜಮೀನಿಗಳಿಗೆ ಸೂಕ್ತ ಬೆಲೆ ನೀಡಿ ಎಂದು ಗುಲಬರ್ಗಾ ಹೈಕೋರ್ಟ್‌ ಮೆಟ್ಟಿಲೇರಿದ್ದೇವೆ. ನಮಗೆ ಸೂಕ್ತ ಬೆಲೆ ಘೋಷಣೆ ಸಾಧ್ಯತೆ ಸದ್ಯದಲ್ಲೇ ಇತ್ತು ಎನ್ನುತ್ತಾರೆ ರೈತರು. ಇದಕ್ಕೆ ಪ್ರತಿಯಾಗಿ ಇಲಾಖೆಯವರು ರೈತರಿಗೆ ಅಂದೇ ಸೂಕ್ತ ಬೆಲೆ ಘೋಷಿಸಿ ಹಣ ನೀಡಲಾಗಿದೆ. ಸದ್ಯ ಪುನಃ ಭೂಮಿಗೆ ಯಾವುದೇ ಬೆಲೆ ನಿಗದಿಗೊಳಿಸಿ ಆದೇಶ ಮಾಡಬಾರದು ಎಂದು ಕೆಬಿಜೆಎನ್‌ಎಲ್‌ ಇಲಾಖೆ ರೈತರ ಕೋರ್ಟ್‌ ಮೆಟ್ಟಿಲಿಗೆ ತಡೆಯಾಜ್ಞೆ ತಂದಿದ್ದು ರೈತರನ್ನು ರೊಚ್ಚಿಗೇಳಿಸಿದೆ.

ಪ್ರಕರಣ ದಾಖಲು: ಶನಿವಾರ ರೈತರಿಂದ ಜಮೀನು ಒತ್ತುವರಿ ವೇಳೆ ಸುಮಾರು ಮರಗಳೂ ಸಹ ಮಾಯವಾಗಿದ್ದು ಈ ಕುರಿತು ಒತ್ತುವರಿ ಮಾಡಿಕೊಳ್ಳುತ್ತಿರುವ ರೈತರ ವಿರುದ್ಧ ಈಗಾಗಲೇ ಪೊಲೀಸ್‌ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದು ನಮ್ಮಲ್ಲಿ ಸಾಕಷ್ಟು ಸತ್ಯಾಂಶದ ಸರಕಾರದ ಆದೇಶದ ದಾಖಲೆಗಳಿವೆ. ಮುಂದೆ ಜಮೀನು ಒತ್ತುವರಿ ತಂಟೆಗೆ ಬರದಂತೆ ಪ್ರಕರಣ ದಾಖಲಿಸುತ್ತೇವೆ ಎಂದು ಮೀನು ಮರಿ ಪಾಲನಾ ಇಲಾಖೆ ರೈತರಿಗೆ ಎಚ್ಚರಿಕೆ ನೀಡಿದೆ.

ಕಳೆದ 35 ವರ್ಷಗಳಿಂದೆ ಸಕರಾರ ನಮ್ಮ ಇಲಾಖೆಗೆ ರೈತರಿಗೆ ಸೂಕ್ತ ಬೆಲೆ ನೀಡಿದ ಸಾಕ್ಷಾಧಾರಗಳೊಂದಿಗೆ ದಾಖಲೆ ನೀಡಿದೆ. ಆದರೂ ರೈತರು ನಮ್ಮ ಜಮೀನು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಅವರನ್ನು ಗುರುತಿಸಿ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸುತ್ತೇವೆ.
∙ಎಂ.ಎಸ್‌. ಭಾಂಗಿ, ಸಹಾಯಕ ಗ್ರೇಡ್‌-1 ನಿರ್ದೇಶಕ, ಮೀನು ಮರಿ ಪಾಲನಾ ಕೇಂದ್ರ, ನಾರಾಯಣಪುರ

ಕಷ್ಟ ಪಟ್ಟು ಬೆಳೆಸಿದ ಹೆಮ್ಮರಗಳನ್ನು ರೈತರು ತಮ್ಮ ಹಿತಕ್ಕಾಗಿ ಜಮೀನು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಹೆಮ್ಮರವಾಗಿ ಬೆಳೆಸಿದ ಮರಗಳು ಸಹ ಮಾಯವಾಗಿವೆ. ತನಿಖೆಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ.
∙ಎಸ್‌.ಜಿ. ಬಿರಾದಾರ, ಸಹಾಯಕ ನಿರ್ದೇಶಕರು, ಮೀನು ಮರಿ ಪಾಲನಾ ಕೇಂದ್ರ, ನಾರಾಯಣಪುರ

ಟಾಪ್ ನ್ಯೂಸ್

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.