ಕಬ್ಬಿಗೆ ಬೆಂಕಿ; 20 ಲಕ್ಷ ರೂ. ಹಾನಿ
Team Udayavani, Feb 7, 2022, 5:37 PM IST
ತಾಳಿಕೋಟೆ: 10 ಎಕರೆ ಕಬ್ಬಿನ ಗದ್ದೆಗೆ ವಿದ್ಯುತ್ ಸ್ಪರ್ಶದಿಂದ ಆಕಸ್ಮಿಕ ಬೆಂಕಿ ತಗುಲಿ ಕಬ್ಬು ಸೇರಿ ಜಮೀನಿನಲ್ಲಿನ ಡ್ರಿಪ್ ಪೈಪ್ಲೈನ್ಗಳು ಸೇರಿ ಸುಮಾರು 20 ಲಕ್ಷಕ್ಕೂ ಅಧಿಕ ಹಾನಿ ಉಂಟಾಗಿದೆ ಎಂದು ರೈತ ಭೋಗಣ್ಣ ಹೂಗಾರ ತಾಳಿಕೋಟೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಜಮೀನಿನಲ್ಲಿಯ ವಿದ್ಯುತ್ ಕಂಬಗಳಲ್ಲಿಯ ವೈರ್ಗಳು ಗಾಳಿಗೆ ಒಂದಕ್ಕೊಂದು ತಗುಲಿ ಆಕಸ್ಮಿಕ ಬೆಂಕಿ ಕಬ್ಬಿಗೆ ಹತ್ತಿಕೊಂಡಿದೆ. ಆ ಸಮಯದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮುದಕಪ್ಪ ತಳವಾರ ಅವರು ಫೋನ್ ಮಾಡಿ ಕಬ್ಬಿಗೆ ಬೆಂಕಿ ತಗುಲಿದೆ. ಬೇಗ ಬನ್ನಿ ಎಂದಾಗ ನಾನು ಮತ್ತು ನನ್ನ ಮಗ ಶಿವಾನಂದ ಹೂಗಾರ ಕೂಡಿಕೊಂಡು ಹೋಗಿ ನೋಡುವಾಗಿ ಕಬ್ಬಿಗೆ ಬೆಂಕಿಯ ಕೆನ್ನಾಲಿಗೆ ಸಂಪೂರ್ಣ ಚಾಚಿತ್ತು.
ಅಗ್ನಿ ಶಾಮಕ ಠಾಣೆಯವರು ಬರುವಷ್ಟರಲ್ಲಿ 10 ಎಕರೆ ಜಮೀನಿನಲ್ಲಿದ್ದ 10 ಲಕ್ಷ ರೂ. ಮೌಲ್ಯದ ಕಬ್ಬು ಸಂಪೂರ್ಣ ಸುಟ್ಟು ಕರಕಲಾಗಿತ್ತು. ಇದು ಅಲ್ಲದೇ ಜಮೀನಿನಲ್ಲಿನ ಪೈಪ್ಲೈನ್ಗಳು ಹಾಗೂ 10 ತೆಂಗಿನ ಮರಗಳು ಸುಟ್ಟು ಹಾನಿಗಿಡಾಗಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.