ಭೀಮಾತೀರ; ಪಿಎಸ್ ಐ ಗುಂಡಿನ ದಾಳಿಗೆ ಹಂತಕ ಧರ್ಮರಾಜ್ ಫಿನಿಶ್
Team Udayavani, Oct 30, 2017, 10:27 AM IST
ವಿಜಯಪುರ: ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದ್ದು, ಭೀಮಾ ತೀರದ ಹಂತಕ ಧರ್ಮರಾಜ್ನನ್ನು ಪೊಲೀಸರು ಎನ್ಕೌಂಟರ್ ಮಾಡಿರುವ ಘಟನೆ ಜಲ್ಲೆಯ ಇಂಡಿ ತಾಲೂಕಿನ ಕೊಂಕಣಗಾಂವ್ ಗ್ರಾಮದ ಬಳಿ ಸೋಮವಾರ ಬೆಳಿಗ್ಗೆ ನಡೆದಿದೆ.
ಬೆಳಗ್ಗೆ ಕೊಂಕಣಗಾಂವ್ ಗ್ರಾಮದ ಬಳಿ ಭೀಮಾ ತೀರದ ಹಂತಕ ಧರ್ಮರಾಜ್ನ ವಿಚಾರಣೆಗೆ ತೆರಳಿದ್ದ ಸಂದರ್ಭದಲ್ಲಿ ಪೊಲೀಸರು ಹಾಗೂ ಧರ್ಮರಾಜ್ ಮಧ್ಯೆ ಗುಂಡಿನ ಚಕಮಕಿ ನಡೆದಿತ್ತು. ಧರ್ಮರಾಜ್ ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದಾನೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಸಹ ಧರ್ಮರಾಜ್ ಮೇಲೆ ಗುಂಡು ಹಾರಿಸಿದ್ದಾರೆ, ಪಿಎಸ್ಐ ಹಳ್ಳೂರ್ಗೆ ಎರಡೆರಡು ಗುಂಡು ತಗುಲಿವೆ ಎನ್ನಲಾಗಿದೆ. ಪಿಎಸ್ಐ ಹಳ್ಳೂರ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಎಸ್ಪಿ ಕುಲದೀಪ್ ಕುಮಾರ್ ಜೈನ್, ಹೆಚ್ಚುವರಿ ಎಸ್ಪಿ ಶಿವಕುಮಾರ್ ಗುಣಾರೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.