ಡೋಣಿ ನದಿಯಲ್ಲಿ ಉಕ್ಕಿದ ಪ್ರವಾಹ


Team Udayavani, Sep 9, 2017, 1:12 PM IST

bij-1.jpg

ತಾಳಿಕೋಟೆ: ಜಿಲ್ಲೆಯ ವಿವಿಧಡೆ ಎರಡು ದಿನಗಳಿಂದ ಸುರಿದ ಭಾರಿ ಮಳೆಯಿಂದ ಡೋಣಿ ನದಿ ಉಕ್ಕಿ ಹರಿಯುತ್ತಿದ್ದು ಜನ ಪ್ರವಾಹ ಭೀತಿ ಎದುರಿಸುತ್ತ ಪರದಾಡುವಂತಾಗಿದೆ.

ಎರಡು ದಿನಗಳಿಂದ ಜಿಲ್ಲೆಯ ವಿವಿಧೆಡೆ ಸುರಿದ ಭಾರಿ ಮಳೆಯಿಂದ ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕೆಳಮಟ್ಟದ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು ಜನ ಸಂಚಾರ ಹಾಗೂ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಡೋಣಿ ನದಿ ಪ್ರವಾಹ ದಾಟಲು ಹೋಗಿ ಬೈಕಿನೊಂದಿಗೆ ಕೊಚ್ಚಿ ಹೋದ ಆಘಾತಕಾರಿ ಘಟನೆ ಶುಕ್ರವಾರ ಮಧ್ಯಾಹ್ನ
ಜರುಗಿದ್ದು ಪ್ರವಾಹವನ್ನು ಮೆಟ್ಟಿ ನಿಲ್ಲುವ ಧೈರ್ಯ ಮಾಡಿ ಕೊನೆಗೂ ದಡ ಸೇರಿ ಬದುಕುಳಿದಿದ್ದಾನೆ.

ಸಿಂದಗಿ ತಾಲೂಕಿನ ಅಸ್ಕಿ ಗ್ರಾಮದ ಸಂಗಮೇಶ ವಾಲಿಕಾ ‌(36) ಮುದ್ದೇಬಿಹಾಳದಿಂದ ಸೇತುವೆ ಮಾರ್ಗವಾಗಿ ಬರುತ್ತಿದ್ದಾಗ ಏಕಾ ಏಕಿ ಪ್ರವಾಹ ಬಂದಿರುವದನ್ನು ಲಕ್ಷಿಸದೆ ಮುನ್ನುಗ್ಗಿದ್ದಾನೆ. ನೀರಿನ ರಭಸಕ್ಕೆ ಬೈಕ್‌ ಸಮೇತ ಕೊಚ್ಚಿಕೊಂಡು ಹೋಗಿದ್ದಾನೆ. ಇದನ್ನು ನೋಡಿದ ಜನರು ಈ ವ್ಯಕ್ತಿಯು ಬದುಕುಳಿಯುವುದೇ ಕಷ್ಟವೆಂದು ಭಾವಿಸಿದ್ದರು. ಆದರೆ ಯುವಕ ಈಜುತ್ತ ದಡಕ್ಕೆ ಬಂದಾಗ ಜನ ಅವನ ಬಂಡ ಧೈರ್ಯ ಹೊಗಳದೇ ಬುದ್ಧಿಮಾತು ಹೇಳಿದರು.ಡೋಣಿ ನದಿ ಪ್ರವಾಹದಲ್ಲಿ ಯುವಕನೊಂದಿಗೆ ಕೊಚ್ಚಿ ಹೋದ ಬೈಕ್‌ ತೆಗೆಯಲು ಸುಮಾರು ಎರಡೂಮೂರು ತಂಡಗಳು ಬೆಟ್ಟಿಂಗ್‌ ನಡೆಸುವುದರೊಂದಿಗೆ ಹಣದಾಸೆಗಾಗಿ ಬಂಡ ಧೈರ್ಯ ಮಾಡುತ್ತ ಹಗ್ಗದ ಸಹಾಯದ ಮೂಲಕ ನೀರಿನಲ್ಲಿ ಬೈಕ್‌ನ್ನು ಹುಡುಕಿದರು. ಈ ವೇಳೆ ವೃದ್ಧ ದೇಸಾಯಿ ಎಂಬುವರ ಕೈಯಲ್ಲಿಯ ಹಗ್ಗ ಬಿಚ್ಚಿದ್ದರಿಂದ ಬೈಕ್‌ ಸವಾರ ಸಂಗಮೇಶನ ಮಾದರಿಯಲ್ಲಿಯೇ ಆತನೂ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋದ ಘಟನೆಯೂ ಜರುಗಿತು. ಆದರೆ ಈ ಸೇತುವೆಯ ಮೇಲೆ ಪ್ರವಾಹ ಭೀತಿ ಎದುರಿಸುತ್ತ ದಿನನಿತ್ಯ ಅಡ್ಡಾಡುತ್ತಿದ್ದ ವೃದ್ಧ ಸಂಗಣ್ಣ ದೇಸಾಯಿ ನೀರಿನ ಮಟ್ಟ, ಸೆಳವು ಅರಿತು ಅವರೂ ಸಹ ಈಜುತ್ತ ದಡ ಮುಟ್ಟಿ ಬದುಕಿದರು.

ಪ್ರವಾಹ ಸಮಸ್ಯೆಗಳು: ಡೋಣಿ ನದಿಯಲ್ಲಿ ಪ್ರತಿ ಬಾರಿಯೂ ಮಳೆ ಬಂದಾಗಲೆಲ್ಲ ಪ್ರವಾಹದಿಂದ ಉಕ್ಕಿ ಬರುವ ನೀರಿನಿಂದ ಪುನರ್ವಸತಿ ಹಡಗಿನಾಳ ಮಾರ್ಗವಾಗಿ ಸಂಚರಿಸುವ ಎಲ್ಲ ಗ್ರಾಮಸ್ಥರಿಗೆ ಪ್ರಾಣ ಭೀತಿ ಉಂಟಾಗುತ್ತಿದೆ. 2009ರಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಡೋಣಿ ನದಿ ಪ್ರವಾಹಕ್ಕೆ ನಡುಗಡ್ಡೆಯಾಗಿದ್ದ ಹಳೆ ಹಡಗಿನಾಳವನ್ನು ಪುನರ್ವಸತಿ ಗ್ರಾಮವನ್ನಾಗಿ ರೂಪಿಸಿ ಮನೆಗಳನ್ನು ನಿರ್ಮಿಸಿ ಅಲ್ಲಿಯ ಜನರಿಗೆ ಹಸ್ತಾಂತರಿಸಲಾಗಿದೆ. 

ಆದರೆ ಈ ಡೋಣಿ ನದಿಯ ಪ್ರವಾಹ ಪುನರ್ವಸತಿ ಗ್ರಾಮವಾದರೂ ಸಹ ಬೆಂಬಿಡುತ್ತಿಲ್ಲ. ಈ ಸೇತುವೆ ಮೂಲಕ ಹಡಗಿನಾಳ, ಕಲ್ಲದೇವನಹಳ್ಳಿ, ಶಿವಪುರ, ನಾಗೂರ, ಹರನಾಳ ಗ್ರಾಮಗಳ ಜನರು ದಿನನಿತ್ಯ ಕೂಲಿ ನಾಲಿಗಾಗಿ ತಾಳಿಕೋಟೆ ಪಟ್ಟಣವನ್ನೇ ಅವಲಂಬಿಸಿದ್ದಾರೆ. ಈ ಡೋಣಿ ನದಿಗೆ ನಿರ್ಮಿಸಿರುವ ಕೆಳಮಟ್ಟದ ಸೇತುವೆ ಪಕ್ಕದಲ್ಲಿ ಮೇಲ್ಮಟ್ಟದ ಸೇತುವೆಯನ್ನು ನಿರ್ಮಿಸಬೇಕೆಂದು ಸಾಕಷ್ಟು ಬಾರಿ ಮುಖ್ಯಮಂತ್ರಿಗಳಿಗೆ ಒತ್ತಾಯಿಸತ್ತಾ ಬಂದರೂ ಪ್ರಯೋಜನವಾಗಿಲ್ಲ.

ಈ ಸೇತುವೆಯನ್ನು ಮೇಲ್ಮಟ್ಟಕ್ಕೆ ಏರಿಸಬೇಕೆಂದರೆ ಈ ರಸ್ತೆಯೂ ಇನ್ನೂ ಸ್ಥಳೀಯ ಆಡಳಿತದಲ್ಲಿರುವುದಿಂದ ರಸ್ತೆಯನ್ನು ಲೋಕೊಪಯೋಗಿ ಇಲಾಖೆಗೆ ಹಸ್ತಾಂತರಿಸಬೇಕೆಂಬುದನ್ನು ಅರೀತ ತಾಲೂಕಾಡಳಿತವೂ ಸುಮಾರು 5 ವರ್ಷಗಳ ಹಿಂದೆ ಶಿಫಾರಸು ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೆ ಸರ್ಕಾರ ಮಟ್ಟದಲ್ಲಿ ಯಾವುದೇ
ಕಾರ್ಯಗಳು ಜರುಗದಿದ್ದರಿಂದ ಈ ಸೇತುವೆಯನ್ನು ಮೇಲ್ಮಟ್ಟಕ್ಕೇ ಏರಿಸಲು ಆಗುತ್ತಿಲ್ಲ ಎಂಬುವುದು ಜಿಲ್ಲಾಡಳಿತ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಸೇತುವೆ ಮೂಲಕ ಈ ಗ್ರಾಮಗಳಷ್ಟೇ ಅಲ್ಲದೇ ಮುದ್ದೇಬಿಹಾಳ, ಬಾಗಲಕೋಟೆ, ಹುಬ್ಬಳ್ಳಿ, ಅನೇಕ ಮಹಾನಗರ ಪಟ್ಟಣಗಳಿಗೆ ತೆರಳಲು ಬಹಳ ಅನುಕೂಲಕರವಾದಂತಹ ರಸ್ತೆ ಇದಾಗಿದೆ. ಈ
ಸೇತುವೆಯನ್ನು ಮೇಲ್ಮಟ್ಟಕ್ಕೆ ಏರಿಸುವುದರೊಂದಿಗೆ ಗ್ರಾಮಸ್ಥರಿಗೆ, ವಾಹನ ಸವಾರರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಪ್ರಜ್ಞಾವಂತರ ಒತ್ತಾಯವಾಗಿದೆ.

ಟಾಪ್ ನ್ಯೂಸ್

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.