ಗ್ರಾಹಕರಿಂದಲೇ ಬ್ಯಾಂಕ್ಗಳ ಬೆಳವಣಿಗೆ
Team Udayavani, Dec 23, 2020, 7:19 PM IST
ತಾಳಿಕೋಟೆ: ಯಾವುದೇ ಬ್ಯಾಂಕುಗಳಾಗಲಿ ಸಹಕಾರಿ ಸಂಸ್ಥೆಗಳಾಗಲಿ ಬೆಳವಣಿಗೆ ಯಾಗಬೇಕಾದರೆ ಅವುಗಳ ಗ್ರಾಹಕರ ಸಹಕಾರವೇ ಕಾರಣವಾಗಿದೆ ಎಂದುಪಂಚಾಚಾರ್ಯ ಸಹಕಾರಿ ಪತ್ತಿನ ಸಂಘ ನಿಯಮಿತದ ಮಾಜಿ ಅಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಹೇಳಿದರು.
ಸಂಘದ ಸಭಾಭವನದಲ್ಲಿ ನಡೆದ 20ನೇ ವರ್ಷದ ಸರ್ವಸಾಧಾರಣ ಸಭೆ ಉದ್ಘಾಟಿಸಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಬ್ಯಾಂಕುಗಳ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯವರ ಪ್ರಾಮಾಣಿಕ ಸೇವೆ ಹಾಗೂ ಸಾಲ ಪಡೆದವರು ಸಮಯಕ್ಕೆ ಸರಿಯಾಗಿಮರುಪಾವತಿ ಮಾಡುತ್ತಿದ್ದರೆ ಬ್ಯಾಂಕ್ಗಳ ಲಾಭಾಂಶವೆಂಬುದು ಹೆಚ್ಚುತ್ತದೆ ಎಂದರು.
ಫಿರಾಪುರ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಆರ್.ಬಿ.ದಮ್ಮೂರಮಠ ಮಾತನಾಡಿ, 2020ನೇ ಸಾಲಿನ ಡಿವಿಂಡೆಂಟ್ನ್ನು ಸಮಾಜದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತೆಗೆದಿಡಬೇಕೆಂಬ ತಿಳಿವಳಿಕೆ ಮೇರೆಗೆ ಎಲ್ಲ ಸದಸ್ಯರು ದಮ್ಮೂರಮಠ ಅವರ ಮಾತಿಗೆ ಒಪ್ಪಿಗೆ ಸೂಚಿಸಿದರು.ವ್ಯವಸ್ಥಾಪಕ ಶ್ರೀಕಾಂತ ಹಿರೇಮಠ ವರದಿ ವಾಚಿಸಿದರು. ಸಂಘದ ಅದ್ಯಕ್ಷ ಬಸಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ಸಮಯದಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ಕುಮಾರಸ್ವಾಮಿ ಮಠ, ಎಸ್. ಎಲ್. ಕೊಡಗಾನೂರ, ವಿ.ಸಿ. ಹಿರೇಮಠ, ರಾಜಶೇಖರ ಹಿರೇಮಠ, ಸಿದ್ರಾಮಯ್ಯಹಿರೇಮಠ, ಹಾಗೂ ಹಾಲಿ ಅಧ್ಯಕ್ಷ ಬಸಯ್ಯಹಿರೇಮಠ ಅವರನ್ನು ಸನ್ಮಾನಿಸಲಾಯಿತು. ನಿರ್ದೇಶಕ ಮಂಡಳಿಯವರಾದಗುರಯ್ಯ ಬಿರಾದಾರ, ಮುತ್ತುರಾಜಜಾಗೀರದಾರ, ಸೋಮಶೇಖರಯ್ಯ ಹಿರೇಮಠ, ಶಂಕ್ರಯ್ಯ ಗದಗಿಮಠ, ಚನ್ನಯ್ಯ ಹಿರೇಮಠ, ಹೇಮಾ ಹಿರೇಮಠ, ಸುವರ್ಣಾ ಹಿರೇಮಠ ಇದ್ದರು. ಸೋಮಶೇಖರಯ್ಯ ಹಿರೇಮಠ ವಂದಿಸಿದರು.