ಕಂದನ ಉಸಿರು ನಿಲ್ಲಿಸಿದ ಬಿರುಗಾಳಿ : ಮೇಲ್ಛಾವಣಿ ಹಾರಿ ಮಗು ಸಾವು
Team Udayavani, Apr 28, 2021, 10:09 AM IST
ವಿಜಯಪುರ : ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಮಳೆ ಜೋರಾಗಿದೆ. ಬಿರುಗಾಳಿಗೆ ಮಗುವಿದ್ದ ಜೋಳಿಗೆ ಸಮೇತ ಮೇಲ್ಛಾವಣಿ ಹಾರಿ ಹೋಗಿ, ಹಸುಳೆ ಬಲಿಯಾದ ದುರ್ಘಟನೆ ವರದಿಯಾಗಿದೆ.
ಸಿಂದಗಿ ತಾಲೂಕಿನ ಸುರಗಿಹಳ್ಳಿ ಗ್ರಾಮದ ಅಬ್ದುಲ್ ರೆಹಮಾನ ಕಸಬ್ ಎಂಬವರ 5 ತಿಂಗಳ ಮಗು ಮುಸ್ಕಾನ್ ಮೃತ ದುರ್ದೈವಿ. ಮಗುವನ್ನು ಮನೆಯ ಮೇಲ್ಛಾವಣಿ ಕಂಬಿಗೆ ಕಟ್ಟಿದ್ದ ಜೋಳಿಗೆಯಲ್ಲಿ ಮಲಗಿಸಲಾಗಿತ್ತು.
ಇದನ್ನೂ ಓದಿ : ಪುಟ್ಟಣ್ಣ ಕಣಗಾಲ್ ಪುತ್ರ ರಾಮು ಕಣಗಾಲ್ ಕೋವಿಡ್ ಗೆ ಬಲಿ
ಮಂಗಳವಾರ ಸಂಜೆ ಬೀಸಿದ ಬಿರುಗಾಳಿಗೆ ಅಬ್ದುಲ್ ರೆಹಮಾನ್ ಕಸಾಬ ಹಾಗೂ ತಬಸುಮ್ ದಂಪತಿ ವಾಸವಿದ್ದ ಮನೆಯ ತಗಡಿನ ಹೊದಿಕೆಯ ಸೆಡ್ ಮೇಲ್ಛಾವಣಿ ಹಾರಿ ಹೋಗಿದೆ. ಈ ಸಂದರ್ಭದಲ್ಲಿ ಮೇಲ್ಛಾವಣಿ ಕಂಬಿಗೆ ಕಟ್ಟಿದ್ದ ಜೋಳಿಗೆಯಲ್ಲಿದ್ದ ಮಗು ಸಮೇತ ಸುಮಾರು 50 ಅಡಿ ದೂರದಲ್ಲಿದ್ದ ವಿದ್ಯುತ್ ಕಂಬಕ ಬಡಿದು, ಶಾಟ್ ಸರ್ಕ್ಯೂ ಆಗಿ ಮೃತಪಟ್ಟಿದೆ.
ಮಗುವನ್ನು ಕಳೆದುಕೊಂಡ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು