ಇತಿಹಾಸ ತಿರುಚುತ್ತಿರುವುದು ದೇಶದ ಬಹುದೊಡ್ಡ ದುರಂತ
Team Udayavani, Jan 8, 2018, 3:44 PM IST
ಇಂಡಿ: ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು. ಸಾವಿತ್ರಿಬಾಯಿ ಫುಲೆ ಸಾಮಾನ್ಯ ಮಹಿಳೆಯಲ್ಲ, ಅಸ್ಪೃಶ್ಯರಿಗೆ ಅಲ್ಪಂಖ್ಯಾತರಿಗೆ, ಹಿಂದುಳಿದವರಿಗೆ ಶಿಕ್ಷಣ ನೀಡಿ ಅಕ್ಷರದ ಕ್ರಾಂತಿಯನ್ನು ಮಾಡಿದ ಪ್ರಪ್ರಥಮ ಭಾರತ ಶಿಕ್ಷಕಿ ಎಂದು ಪ್ರಜಾ ಪರಿವರ್ತನಾ ವೇದಿಕೆ ರಾಜಾಧ್ಯಕ್ಷ ಬಿ.ಗೋಪಾಲ ಹೇಳಿದರು.
ಪಟ್ಟಣದ ಸಿಂದಗಿ ರಸ್ತೆಯ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಪ್ರಜಾ ಪರಿವರ್ತನಾ ವೇದಿಕೆ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆಯವರ 187ನೇ ಜಯಂತಿ, ಆದರ್ಶ ಶಿಕ್ಷಕಿ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಭಾರತ ದೇಶದಲ್ಲಿ ಇತಿಹಾಸವನ್ನು ತಿರುಚಿ ಮನುವಾದಿಗಳು ಶಿಕ್ಷಕರ ದಿನವನ್ನು ಬೇರೆಯವರ ಹೆಸರಿನಲ್ಲಿ ಆಚರಣೆ ಮಾಡುತ್ತಿರುವದ ನಮ್ಮ ದೇಶದ ಅತಿ ದೊಡ್ಡ ದುರಂತ. ಕೆರಳದಲ್ಲಿ ದಲಿತ ಮಹಿಳೆಯರನ್ನು ಅಮಾನವೀಯವಾಗಿ ನಾಯರ ಸಮುದಾಯ ನಡೆಸಿಕೊಳ್ಳುತ್ತಿದ್ದರು ಇಂತಹ ಅನಿಷ್ಠ ಪದ್ಧತಿಯನ್ನು ಟಿಪ್ಪು ಸುಲ್ತಾನ್ ಹೋಗಲಾಡಿಸಿದ. ಇಂತಹ ಹೋರಾಟಗಾರನಿಗೆ ಮತಾಂಧರು ದೇಶದ್ರೋಹಿ ಎನ್ನುತ್ತಿರುವುದು ವಿಷಾದನೀಯ ಎಂದರು.
ಇಡಿ ಸಮುದಾಯವನ್ನು ಜಾತ್ಯತೀತ, ಸರ್ವಧರ್ಮವನ್ನು ಸಮಾನವಾಗಿ ಗೌರವಿಸುವ ಭಾರತ ಸಂವಿಧಾನ ವಿಶ್ವವೇ ಮೆಚ್ಚುತ್ತಿರುವಾಗ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಂವಿಧಾನ ಬದಲಾಯಿಸಲು ಬಂದಿದ್ದೇವೆ ಎಂದು ಹೇಳಿದ್ದಾರೆ. ಇವರು ಬ್ರಾಹ್ಮಣ ಸಮಾಜದಲ್ಲಿ ಹುಟ್ಟಿರುವುದೇ ಅತ್ಯಂತ ಮೂರ್ಖತನ ಎಂದು ತರಾಟೆಗೆ ತಗೆದುಕೊಂಡರು.
ಸಾನ್ನಿಧ್ಯ ವಹಿಸಿದ್ದ ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಆಶೀರ್ವಚನ ನೀಡಿ, ಭಾರತ ಮತಾಕೀ ಜೈ ಎಂದರೆ ಭಾರತ ಉದ್ಧಾರವಾಗುತ್ತೆಯೇ? ಭಾರತ ಕಲ್ಲು ಮಣ್ಣು ಗುಡ್ಡಗಳಿಂದ ನಿರ್ಮಾಣವಾದುದಲ್ಲ, ಪರಸ್ಪರ ಸಾಮರಸ್ಯದ ಭಾವೈಕ್ಯತೆ ಸಂಕೇತವಾಗಿದೆ. ಪ್ರಧಾನಿ ಮೋದಿಯವರೇ ಕ್ಯಾಶಲೇಸ್ ಮಾಡಲು ಹೊರಟಿರುವಾಗ ನೀವು ಜಾತಿ ರಹಿತ ಭಾರತ ಏಕೆ ಮಾಡುತ್ತಿಲರೆಂದು ಪ್ರಶ್ನಿಸಿದರು.
ಭಾರತ ದೇಶದಲ್ಲಿ ಮಹಿಳೆಯರನ್ನು ತಾಯಿ ಸಮಾನ ಎಂದು ಹೇಳುವ ನೀವು ಬಾಲಕಿ ಹತ್ಯಾಚಾರ, ಉತ್ತರ ಪ್ರದೇಶಲ್ಲಿ ದಲಿತ ಹೆಣ್ಣು ಮಗಳಿಗೆ ಅವಮಾನಿಸಿದ್ದು, ಕೇರಳ ರಾಜ್ಯದ ದಲಿತ ಯುವಕನಿಗೆ ಕೈ ಕತ್ತರಿಸುವಾಗ ಎಲ್ಲಿ ಹೋಯಿತು. ಮನುಸ್ಮೃತಿ ಹೆಣ್ಣು ಮಕ್ಕಳನ್ನು ಹೆರಿಗೆ ಯಂತ್ರಗಳಾಗಿ ಮಾಡಿತ್ತು. ಆದರೆ ಸಾವಿತ್ರಿಬಾಯಿ ಫುಲೆ ಸಾಮಾಜಿಕ ಸಮಾನತೆ ತರಲು ಶ್ರಮಿಸಿದ ಮಹಾ ದಿವ್ಯಚೇತನ.
ಅಂದು ದುಂಡುಮೇಜಿನ ಸಭೆಯಲ್ಲಿ ಮಹಾತ್ಮ ಗಾಂಧೀ ಜಿಯವರು ಮಹಿಳೆಯರ ಹಕ್ಕುಗಳ ಬಗ್ಗೆ ವಿರೋಧಿಸಿದರು. ಆದರೆ ಡಾ| ಬಾಬಾಸಾಹೇಬ ಅಂಬೇಡ್ಕರ್ ಸಮಾನ ಹಕ್ಕು ನೀಡಬೇಕು ಎಂದು ಕಾನೂನು ಪದವಿಗೆ ರಾಜೀನಾಮೆ ನೀಡಿ ಮಹಿಳೆಯರ ಪರವಾಗಿ ಧ್ವನಿ ಎತ್ತಿದ ಧೀಮಂತ ನಾಯಕ ಎಂದು ಹೇಳಿದರು. ಇಸ್ಲಾಂ ಧರ್ಮಗುರು ಮೌಲಾನಾ ಇಸ್ಮಾಯಿಲ್ ಇನಾಮದಾರ, ಪರಶುರಾಮ ಮಹಾರಾಜನವರ ಉಪನ್ಯಾಸ ನೀಡಿದರು.
ಅಧ್ಯಕ್ಷತೆಯನ್ನು ಭೀಮಾಶಂಕರ ಮೂರಮನ ವಹಿಸಿದ್ದರು. ಆರ್ಡಿ ಸಂಸ್ಥೆ ಅಧ್ಯಕ್ಷೆ ಡಿ.ಶಿರೋಮಣಿ, ಹೈಕೋರ್ಟ್ ವಕೀಲ ರಾಕೇಶಗೌಡ ಬಿರಾದಾರ, ಗೋಪಾಲ ಕಾರಜೋಳ, ಸಂಜಯ ಕ್ಯಾತನ್, ಮರೆಪ್ಪಾ ಕಾಳೆ, ಪರಶುರಾಮ ಮಹಾರಾಜನವರ, ಸಾಯಬಣ್ಣ ಆಸಂಗಿ, ಸ್ಟೀಫನ್ ಶಿರೋಮಣಿ, ಸಂಗಯ್ನಾಸ್ವಾಮಿ ಹಿರೇಮಠ ವೇದಿಕೆಯಲ್ಲಿದ್ದರು.
ಸುಧಾಕರಗೌಡ ಬಿರಾದಾರ, ರಾಜಶೇಖರ ಹಳ್ಳದಮನಿ, ನಿಲೇಶ ಹಂಜಗಿ, ಅರವಿಂದ ವಠಾರ, ನೀತಿನ ಬನಸೋಡೆ, ಶರಣು ಹಾದಿಮನಿ, ಮಲ್ಲು ಮಡ್ಡಿಮನಿ, ಕಲ್ಲಪ್ಪ ಅಂಜುಟಗಿ, ಎಸ್.ಟಿ.ಪಾಟೀಲ, ಧರ್ಮು ಕಾಂಬಳೆ, ಶಿವಾನಂದ ಮಾವಿನಹಳ್ಳಿ, ವಿಠ್ಠಲ ಪಡನೂರ, ಪ್ರಕಾಶ ಹೊಸಮನಿ, ಅಜರ ಶೇಖ, ಸುಮಿತ ಮೂರಮನ್, ಮಧುಸೂಧನ ತಳಕೆರಿ, ಸುದರ್ಶನ ಶಿವಶರಣ, ವಿಶದನಾಥ ಬನಸೋಡೆ,ಗಣಪತಿ ಹೊಸಮನಿ, ಶಿವಾನಂದ ಶಿಂಗೆ,ಶಿವಾನಂದ ಹರಿಜನ, ಸಿದ್ದಾರ್ಥ ಹಳ್ಳದಮನಿ, ಪರಶುರಾಮ ಕೆರೂಟಗಿ , ವಿಠ್ಠಲ ಬೇವಿನಕಟ್ಟಿ ಸೇರಿದಂತೆ ಅನೇಕರಿದ್ದರು. ಪಿ.ಡಿ. ತೋಟದ ಸ್ವಾಗತಿಸಿದರು. ಎಸ್.ಆರ್.ಮಾಡ್ಯಾಳ ನಿರೂಪಿಸಿದರು. ನಾಗೇಶ ಶಿವಶರಣ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
Bengaluru ಗ್ರಾಮಾಂತರದಲ್ಲಿ ಕಾಂಗ್ರೆಸ್ 500 ಕೋಟಿ ರೂ. ಖರ್ಚು’
Congress ಗೆ ದೇಶದಲ್ಲಿ 40 ಸ್ಥಾನ ಸಿಗೋದು ಕಷ್ಟ, ರಾಜ್ಯದಲ್ಲಿ ಬಿಜೆಪಿಗೆ 28 ಸ್ಥಾನ ಸ್ಪಷ್ಟ
MUST WATCH
ಹೊಸ ಸೇರ್ಪಡೆ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!