ಹೋಳಿ ಸಂಭ್ರಮ


Team Udayavani, Mar 3, 2018, 12:56 PM IST

vij-1.jpg

ವಿಜಯಪುರ: ಅರಿಷಡ್ವರ್ಗಗಳನ್ನು ಗೆಲ್ಲುವ ಪಾರಂಪರಿಕ ಹಿನ್ನೆಲೆ ಹೊಂದಿರುವ ಹಿಂದೂಗಳ ಪವಿತ್ರ ಹಬ್ಬ ಹೋಳಿ ಬಣ್ಣದ ಸಂಭ್ರಮದಲ್ಲೇ ನಾಗರಿಕರು ಮುಳಿಗೆದ್ದರು.

ಹುಣ್ಣಿಮೆ ಮರು ದಿನವಾದ ಶುಕ್ರವಾರ ಜಿಲ್ಲೆಯ ಬಹುತೇಕ ನಗರ ಪ್ರದೇಶಗಳಲ್ಲಿ ಎಲ್ಲೆಲ್ಲೂ ರಂಗಿನಾಟದ ಮೋಜೇ ಮೋಜು. ಹೆಣ್ಣು-ಗಂಡು, ಮಕ್ಕಳು-ವೃದ್ಧರು ಎನ್ನದೇ ಸ್ನೇಹಿತರು, ಆಪ್ತರಿಗೆಲ್ಲ ವೈವಿದ್ಯಮಯ ಬಣ್ಣಗಳನ್ನು ಎರಚಿಕೊಂಡು ಕುಣಿದು, ಕುಪ್ಪಳಿಸುವ ದೃಶ್ಯಗಳು ಸಾಮಾನ್ಯವಾಗಿದ್ದವು. ಹಲವು ಕಡೆಗಳಲ್ಲಿ ಹಲಗೆ ನಾದದ ಜೊತೆಗೆ ಜಾನಪದಗಳಲ್ಲಿ ಜಾನಪದರು ವರ್ಣಿಸಲ್ಪಟ್ಟಿರುವ ಹಲವು ಹಾಡುಗಳನ್ನು ಕೊಂಚ ಕೊಂಚ ಹಾಡಿಕ ಕುಣಿದರು.

ನಗರದಲ್ಲಿ ಹೋಳಿ ಹುಣ್ಣಿಮೆ ಹಿಂದಿನ ದಿನ ಗುರುವಾರ ಮಧ್ಯ ರಾತ್ರಿ ವೇಳೆ ಮನೆ ಮುಂದೆ ಕುಳ್ಳು-ಕಟ್ಟಿಗೆ ರಾಶಿ ಹಾಕಿ ಬೆಂಕಿ ಹೊತ್ತಿಸಿ, ಮೂರ್ತಿ ದಹನ ಮಾಡಿ ಹೋಳಿ ಹಬ್ಬಕ್ಕೆ ಚಾಲನೆ ನೀಡಿದರು. ನಗರದ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಕಟ್ಟಿಗೆ, ಕುಳ್ಳುಗಳ ಬೃಹತ್‌ ರಾಶಿಗೆ ಬೆಂಕಿ ಹೊತ್ತಿಸಿ ಕಾಮದಹನ ಮಾಡಿ ಸಾರ್ವಜನಿಕ ಹೋಳಿ ಆಚರಣೆಗೆ ಚಾಲನೆ ನೀಡಲಾಯಿತು. ನಗರ ಮಾತ್ರವಲ್ಲ ಜಿಲ್ಲೆಯ ಬಹುತೇಕ ಎಲ್ಲ ನಗರ, ಪಟ್ಟಣ, ಪ್ರದೇಶದಲ್ಲಿ ಹೋಳಿ ಹಬ್ಬ ಸಂಭ್ರಮದಿಂದ ಆಚರಿಸಲಾಯಿತು.

ಕಾಮದಹನದ ಬಳಿಕ ಶುಕ್ರವಾರ ಬೆಳಗ್ಗೆಯಿಂದಲೇ ಎಲ್ಲೆಲ್ಲೂ ಯುವಕರು, ಯುವತಿಯರು, ಮಕ್ಕಳು ಮಾತ್ರವಲ್ಲದೇ ಮಧ್ಯ ವಯಸ್ಕರು ಗುಂಪು ಗುಂಪಾಗಿ ತಮ್ಮ ಸ್ನೇಹಿತರೊಂದಿಗೆ ಗಲ್ಲಿ ಗಲ್ಲಿಯಲ್ಲೆಲ್ಲಾ ತಿರುಗಿ ಓಕುಳಿ ಆಡಿದರು. ಕೆಲ ಯುವಕರು ದ್ವಿಚಕ್ರ ಹಾಗೂ ಲಘು ವಾಹನಗಳಲ್ಲಿ ತೆರಳಿ ವಿವಿಧ ಬಣ್ಣಗಳನ್ನು ಎರಚುತ್ತ ಸಂಭ್ರಮಿಸುತ್ತಿದ್ದರು. 

ಬಣ್ಣದ ಆಟದಲ್ಲಿ ತೊಡಗಿರುವ ಗುಂಪಿನ ಯುವಕರಿಗೆ ಹಲವು ಕಡೆಗಳಲ್ಲಿ ವ್ಯಾಪಾರಿಗಳು ಹೋಳಿ ಹಬ್ಬಕ್ಕೆ ಉತ್ತೇಜನ ನೀಡಲು ಹಣ, ಸಿಹಿ ನೀಡಿ ಪ್ರೋತ್ಸಾಹಿಸಿದರು. ಕೆಲವು ವ್ಯಾಪಾರಿಗಳು ಓಕುಳಿ ಹಬ್ಬದ ನಿಮಿತ್ತ ನಗರದ ಹಲವು ಕಡೆಗಳಲ್ಲಿ ವ್ಯಾಪಾರಿಗಳು ವ್ಯವಹಾರ ಸ್ಥಗಿತಗೊಳಿಸಿ ಬಣ್ಣದ ಹಬ್ಬದಲ್ಲಿ ಪಾಲ್ಗೊಂಡು ಓಕುಳಿಯ ಸಂಭ್ರಮ ಅನುಭವಿಸಿದರು.

ಇನ್ನು ನಗರದ ಹಲವು ಕಡೆಗಳಲ್ಲಿ ಕೃತಕ ಹೊಂಡ ಹಾಗೂ ಜಲ ಸಿಂಚನ ವೇದಿಕೆಗಳನ್ನು ನಿರ್ಮಿಸಲಾಗಿತ್ತು. ವೇದಿಕೆ ಸ್ಥಳದಲ್ಲೇ ವಿವಿಧ ಹಾಡುಗಳ ಸಂಗೀತ ನಿನಾದ ತೂರಿ ಬರುತ್ತಿತ್ತು. ಇಂಥ ಕಡೆಗಳಲ್ಲೆಲ್ಲ ಹೊರ ಪ್ರದೇಶದಿಂದ ನಗರಕ್ಕೆ ಶಿಕ್ಷಣಕ್ಕಾಗಿ ಬಂದಿರುವ ವಿವಿಧ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬಣ್ಣದ ಜೊತೆಗೆ ಮಣ್ಣಿನ ನೀರಲ್ಲೂ ಮಿಂದೆದ್ದು ವಿಶಿಷ್ಟ ಅನುಭವ ಪಡೆದರು.

ಹೋಳಿ ಹಬ್ಬದ ನಿಮಿತ್ತ ಹಿಂದೂ ಸಂಪ್ರದಾಯದ ಮನೆಗಳಲ್ಲಿ ಹೋಳಿಗೆ ಸೇರಿದಂತೆ ವಿವಿಧ ಬಗೆಯ ಖಾದ್ಯ ತಯಾರಿಸಿದ್ದ ಮಹಿಳೆಯರು, ದಹನಕ್ಕೆ ಮುನ್ನ ಮನ್ಮಥನಿಗೆ ನೈವೇದ್ಯ ಮಾಡಿದರು. ಹಲವರು ಹೋಳಿ ಹಬ್ಬಕ್ಕೆ ಸ್ನೇಹಿತರನ್ನು ತಮ್ಮ ಮನೆಗೆ ಆಹ್ವಾನಿಸಿ ಸಿಹಿ ಊಟ ಹಾಕಿಸಿ ರಂಗಿನ ಆಟವನ್ನು ಸ್ಮರಣಾರ್ಹ ಮಾಡಿಕೊಂಡರು.

ಸಂಭ್ರಮ ಹೋಳಿ  
ವಿಜಯಪುರ: ಹೋಳಿ ಹಬ್ಬದ ವೇದಿಕೆಯಲ್ಲಿ ಸಂಗೀತಕ್ಕೆ ಕುಣಿದು ಕುಪ್ಪಳಿಸಿದ ಯುವತಿಯರ ಸಮೂಹ. 

ವಿಜಯಪುರ: ನಗರದ ಬಿಎಲ್‌ಡಿಇ ರಸ್ತೆಯಲ್ಲಿ ಹೋಳಿ ಹಬ್ಬಕ್ಕಾಗಿ ನಿರ್ಮಿಸಿರುವ ಕೃತಕ ಹೊಂಡಗಳಲ್ಲಿ ಕಾಲೇಜುಗಳ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಮಿಂದೆದ್ದ ಪರಿ. 

ನಾಲತವಾಡ: ಬಸವೇಶ್ವರ ನಗರದಲ್ಲಿ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದ ಬಾಲಕಿಯರು.

 ತಾಳಿಕೋಟೆ: ಹೋಳಿ ಹುಣ್ಣಿಮೆಯ ನಿಮಿತ್ತ ಪಟ್ಟಣದಲ್ಲಿ ರತಿ ಮನ್ಮಥರ ಮೂರ್ತಿ ಮೆರವಣಿಗೆ ಮಾಡಲಾಯಿತು.
ದೇವರಹಿಪ್ಪರಗಿ: ಹೋಳಿ ನಿಮಿತ್ತ ನಡೆದ ಅಣಕು ಶವಯಾತ್ರೆ ಜನರ ಗಮನ ಸೆಳೆಯಿತು.
ದೇವರಹಿಪ್ಪರಗಿ: ಕಾಮದಹನದ ಮುಂದೆ ಬಣ್ಣದಾಟದಲ್ಲಿ ನಿರತರಾದ ಯುವಕರು ಬೊಬ್ಬೆ ಹಾಕಿ ಸಂಭ್ರಮಿಸಿದರು.
ಹೂವಿನಹಿಪ್ಪರಗಿ: ಪಟ್ಟಣದಲ್ಲಿ ಬಣ್ಣದಾಟದಲ್ಲಿ ಮಿಂದೆದ್ದ ಚಿಣ್ಣರು.
ಸಿಂದಗಿ: ಪಟ್ಟಣದಲ್ಲಿ ಹೆಣ್ಣು ಮಕ್ಕಳು, ಯುವಕರು, ಹಿರಿಯರು ಹಾಗೂ ಮಹಿಳೆಯರು ಹೋಳಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು.
ಬಸವನಬಾಗೇವಾಡಿ: ಗಣಪತಿ ಚೌಕ್‌ದಲ್ಲಿ ಕಾಮದಹನಕ್ಕೆ ಸಿದ್ದಗೊಂಡ ಕಾಮಣ್ಣ.
ವಾಡಿ ತಾಳಿಕೋಟೆ: ಪಟ್ಟಣದಲ್ಲಿ ಹೋಳಿಹುಣ್ಣಿಮೆ ನಿಮಿತ್ತ ಕಾಮದಹನಮಾಡುವ ಮೂಲಕ ಸ್ನೇಹಿತ ಮಿತ್ರರಿಗೆ ಹಿತೈಷಿಗಳಿಗು ಚನದೆಸಿ,ನೆದ ಆಡಿದರು. ಕಲ ಯುವಕರು ದ್ವಿಚಕ್ರ ಹಾಗೂ ಲಘು ವಾಹನಗಳಲ್ಲಿ ತೆರಳಿ ವಿವಿಧ ಬಣ್ಣಗಳನ್ನು ಎರಚುತ್ತ ಸಂಭ್ರಮಿಸುತ್ತಿದ್ದರು. ಬಣ್ಣದ ಆಟದಲ್ಲಿ ತೊಡಗಿರುವ ಗುಂಪಿನ ಯುವಕರಿಗೆ ಹಲವುಕಡೆಗಳಲ್ಲಿ ವ್ಯಾಪಾರಿಗಳು ಹೋಳಿ ಹಬ್ಬಕ್ಕೆ ಉತ್ತೇಜನ ನೀಡಲುಹಣ, ಸಿಹಿ ನೀಡಿ ಪ್ರೋತ್ಸಾಹಿಸಿದರು. ಕೆಲವು ವ್ಯಾಪಾರಿಗಳು ಓಕುಳಿ ಹಬ್ಬದ ನಿಮಿತ್ತನಗರದ ಹಲವುಕಡೆಗಳಲ್ಲಿ ಪಡೆದರು.

ಹೋಳಿ ಹಬ್ಬದ ನಿಮಿತ್ತ ಹಿಂದೂ ಸಂಪ್ರದಾಯದ ಮನೆಗಳಲ್ಲಿ ಹೋಳಿಗೆ ಸೇರಿದಂತೆ ವಿವಿಧ ಬಗೆಯ ಖಾದ್ಯ ತಯಾರಿಸಿದ್ದಮಹಿಳೆಯರು, ದಹನಕ್ಕೆ ಮುನ್ನ ಮನ್ಮಥನಿಗೆ ನೈವೇದ್ಯ ಮಾಡಿದರು. ಹಲವರು ಹೋಳಿ ಹಬ್ಬಕ್ಕೆಸ್ನೇಹಿತರನ್ನು ತಮ್ಮ ಮನೆಗೆ ಆಹ್ವಾನಿಸಿ ಸಿಹಿ ಊಟ ಹಾಕಿಸಿ ರಂಗಿನ ಆಟವನ್ನು ಸ್ಮರಣಾರ್ಹ ಮಾಡಿಕೊಂಡರು.

ಟಾಪ್ ನ್ಯೂಸ್

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.