ಮಾನವೀಯತೆ ಜೊತೆ ಪ್ರಾಮಾಣಿಕತೆ ಮೆರೆದ ಆರೋಗ್ಯ ಕವಚ ಸಿಬ್ಬಂದಿ
Team Udayavani, Jul 2, 2021, 9:30 AM IST
ವಿಜಯಪುರ: ಕಾರು ಪಲ್ಟಿಯಾಗಿ ಒಳಗೆ ಸಿಲುಕಿದ್ದ ವ್ಯಕ್ತಿ ರಕ್ಷಣೆ ಮಾಡಿದ ಬಸವನ ಬಾಗೇವಾಡಿ 108 ಆ್ಯಂಬಲೆನ್ಸ್ ಸಿಬ್ಬಂದಿ, ಗಾಯಾಳುಗಳ ಬಳಿ ಇದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಹೂವಿನಹಿಪ್ಪರಗಿ ಬಳಿ ಕಾರು ಪಲ್ಟಿಯಾಗಿ ಗಾಯಾಳುಗಳು ಕಾರಿನಲ್ಲಿ ಸಿಲುಕಿದ್ದರು. ಮಾಹಿತಿ ದೊರೆಯುತ್ತಲೇ 108 ಆ್ಯಂಬಲೆನ್ಸ್ ಸಿಬ್ಬಂದಿ ಗಾಯಾಳುಗಳನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ:ಮಂಗಳಪದವು ಬಳಿ ಕಾಲೇಜು ಬಸ್-ಬೈಕ್ ನಡುವೆ ಭೀಕರ ಅಪಘಾತ:ನಾಲ್ವರಿಗೆ ಗಾಯ, ತಪ್ಪಿದ ಭಾರೀ ಅನಾಹುತ
ಅಲ್ಲದೇ ಗಾಯಾಳುಗಳ ಬಳಿ ಇದ್ದ ಚಿನ್ನದ ಉಂಗುರ, ಚೈನ್, 1.60 ಲಕ್ಷ ರೂ. ಹಣವನ್ನು ಗಾಯಾಳುಗಳ ಸಂಬಂಧಿಗಳಿಗೆ ಹಸ್ತಾಂತರಿಸಿ ಪ್ರಾಮಾಣಿಕತೆಗೆ ಸಾಕ್ಷಿಯಾಗಿದ್ದಾರೆ.
ಬಸವನ ಬಾಗೇವಾಡಿ ಆಸ್ಪತ್ರೆ 108 ಸಿಬ್ಬಂದಿ ವಿಜಯಕುಮಾರ್, ಶಿವಾನಂದ ಮಾನವೀಯತೆ ಜೊತೆಗೆ ಪ್ರಾಮಾಣಿಕತೆ ಮೆರೆದು ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.