ಕಲ್ಲು ಗಣಿಯಲ್ಲಿ ಬ್ಲಾಸ್ಟ್ ನಿಂದ ಕಲ್ಲು ಬಡಿದು ಕಾರ್ಮಿಕ ಸಾವು- ಇಬ್ಬರಿಗೆ ಗಾಯ
Team Udayavani, Jul 8, 2021, 7:42 PM IST
ಸಾಂದರ್ಭಿಕ ಚಿತ್ರ
ವಿಜಯಪುರ: ನಗರದ ಹೊರ ವಲಯದಲ್ಲಿರುವ ಕಲ್ಲು ಗಣಿಯೊಂದರಲ್ಲಿ ಕಲ್ಲು ಸ್ಪೋಟಿಸುವ ಸಂದರ್ಭದಲ್ಲಿ ಸಿಡಿದು ಬಂದ ಕಲ್ಲು ಬಡಿದು ಓರ್ವ ಕಾರ್ಮಿಕ ಮೃತಪಟ್ಟು, ಇನ್ನಿಬ್ಬರು ಗಾಯಗೊಂಡಿರುವ ಘಟನೆ ಜರುಗಿದೆ.
ಗುರುವಾರ ಸಂಜೆ ಅಲಿಯಾಬಾದ ಪರಿಸರದಲ್ಲಿರುವ ಸಾವಳಗಿ ಸ್ಟೋನ್ ಕ್ರಷರ್ ಘಟಕದಲ್ಲಿ ಈ ದುರಂತ ಸಂಭವಿಸಿದ್ದು, ಮೃತ ಕಾರ್ಮಿಕನನ್ನು ಅಲಿಯಾಬಾದ ನಿವಾಸಿ ಮೋಹನ್ ನಾಯಿಕ್ ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಗಾಯಗೊಂಡಿರುವ ಸಚಿನ್ ಮಲ್ಲಪ್ಪ ಕವಟಗಿ, ಶ್ರವಣಕುಮಾರ ಬಸಪ್ಪ ಕವಟಗಿ ಇವರನ್ನು ಚಿಕಿತ್ಸೆಗಾಗಿ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ವಿಜಯಪುರ ಗ್ರಾಮೀಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ ಎಂದು ಎಸ್ಪಿ ಅನುಪಮ್ ಅಗರವಾಲ ತಿಳಿಸಿದ್ದಾರೆ.