ವಿಜಯಪುರ: ಪತ್ರಕರ್ತ ದತ್ತಾತ್ರೇಯ ಪನಾಳಕರ ಕೋವಿಡ್ ಗೆ ಬಲಿ
Team Udayavani, May 17, 2021, 9:45 AM IST
ವಿಜಯಪುರ : ಗುಂಬಜ್ ಎಕ್ಸ್ಪ್ರೆಸ್ ದಿನಪತ್ರಿಕೆ ಸಹ ಸಂಪಾದಕ ದತ್ತಾತ್ರೇಯ ಪನಾಳಕರ್ ಕೋವಿಡ್ 19 ಸೋಂಕಿಗೆ ಬಲಿಯಾಗಿದ್ದಾರೆ.
ಗುಂಬಜ್ ಎಕ್ಸ್ಪ್ರೆಸ್ ದಿನಪತ್ರಿಕೆ ಸಹ ಸಂಪಾದಕರಾಗಿದ್ದ ದತ್ತಾತ್ರೇಯ ಪನಾಳಕರ್ (50) ಪತ್ನಿ, ಪತ್ರಕರ್ತೆ ಕೌಶಲ್ಯ ಹಾಗೂ ಇಬ್ಬರು ಮಕ್ಕಳು ಹಾಗೂ ಅಪಾರ ಬಂಧುಗಳು, ಸ್ನೇಹಿತರನ್ನು ಅಗಲಿದ್ದಾರೆ.
ಇದನ್ನೂ ಓದಿ:ಡಿಆರ್ಡಿಒ ಅಭಿವೃದ್ಧಿಪಡಿಸಿದ ಕೊವಿಡ್ ನಿಗ್ರಹ ಔಷಧ ‘2ಡಿಜಿ’ ಇಂದು ಬಿಡುಗಡೆ
ಗ್ಯಾಂಗ್ ಬಾವಡಿ ನಿವಾಸಿಯಾಗಿದ್ದ ದತ್ತಾತ್ರೇಯ, ಕಳೆದ ಕೆಲ ದಿನಗಳಿಂದ ಕೋವಿಡ್ ಸೋಂಕಿನಿಂದಾಗಿ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗಿನ ಜಾವ ನಿಧನರಾಗಿದ್ದಾರೆ