ತಾಂಬಾದಲ್ಲಿ ಕಾಮದಹನ
Team Udayavani, Mar 2, 2018, 3:38 PM IST
ತಾಂಬಾ: ಗ್ರಾಮದ ಕನಕ ನಗರ ಸೇರಿದಂತೆ ಪ್ರತಿ ಬಡಾವಣೆಯಲ್ಲಿ ಗುರುವಾರ ರಾತ್ರಿ ಕಾಮದಹನ ಮಾಡಲಾಯಿತು. ಪ್ರತಿ ಓಣಿಗಳಲ್ಲಿ ಹುಣ್ಣಿಮೆಗೂ ಮುಂಚೆ ಐದು ದಿನ ಕಾಮಣ್ಣನ ಹುಂಡಿ ತೋಡಿ ಪುಟ್ಟ ದೀಪ ಹಚ್ಚಿಟ್ಟು ಸುತ್ತಲ ಪ್ರದೇಶ ಸ್ವತ್ಛಗೊಳಿಸಿ ಅಲ್ಲೊಂದು ಚಂದದ ರಂಗೋಲಿ ಬಿಡಿಸಿ ಪ್ರೀತಿಯಿಂದ ಅಲಂಕರಿಸಿದ ಕಾಮಣ್ಣನಿಗೆ ವಿದಾಯ ಹೆಳಲು ಸಜ್ಜಾಗಿದ್ದ ಹುಡಗರು ಓಣಿಯ ಪ್ರತಿಯೊಂದು ಮನೆಯಿಂದ ಚಂದಾ ಸಂಗ್ರಹಿಸಿ ಮಾರುಕಟ್ಟೆಯಿಂದ ತಳಿರು ತೋರಣ, ಪರಪರಿ, ಕಬ್ಬು, ಬಾಳೆ ಗಿಡ, ತೆಂಗಿನ ಗರಿ ತಂದು ಓಣಿಯನ್ನು ಸಿಂಗರಿಸಿದ್ದರು. ರಾತ್ರಿ ವೇಳೆ ಕಳುವು ಮಾಡಿದ ಕುಳ್ಳು ಕಟ್ಟಿಗೆಯನ್ನು ಅಚ್ಚುಕಟ್ಟಾಗಿ ಒಟ್ಟಿ ಹೋಳಿಗೆ ನೈವೇದ್ಯ ಅರ್ಪಿಸಿ ಭಕ್ತಿಯಿಂದ ಕಾಯಿ ಕರ್ಪೂರ ಅರ್ಪಿಸಿದರು.
ಸಂಪ್ರದಾಯದಂತೆ ಹಾಲಮತ ಸಮಾಜದ ಮುಖಂಡರು ಹಾಗೂ ಗ್ರಾಮದ ಗೌಡರೆನಿಸಿಕೊಂಡ ಮನೆತನದವರು ಅಂಬೇಡ್ಕರ್ ನಗರದಲ್ಲಿ ಎಸ್ಸಿ ಜನಾಂಗದವರು ಒಟ್ಟಿಟ್ಟ ಕಟ್ಟಿಗೆಗಳಿಗೆ ಬೆಂಕಿಯಿಡಲು ಭಾಜಾ ಭಜಂತ್ರಿ ಮೂಲಕ ಗೌಡರನ್ನು ಕರೆದುಕೊಂಡು ಹೊಗಿ ಕೊಳ್ಳಿ ಇಡಿಸಿದರು.
ಅದನ್ನು ಹಾಲಮತ ಸಮಾಜದವರು ಅಲ್ಲಿಂದ ಕೊಳ್ಳಿಯನ್ನು ತಂದು ಮಹಾಲಕ್ಷ್ಮೀ ದೇವಸ್ಥಾನದ ಮುಂದೆ ಒಟ್ಟಿರುವ ಕಟ್ಟಿಗೆಗಳಿಗೆ ಕೊಳ್ಳಿಯಿಟ್ಟು ಕಾಮಣ್ಣನ ಸುತ್ತಲೂ ಸುತ್ತು ತಿರುಗಿ ಬೊಬ್ಬೆ ಇಟ್ಟು ಕಾಮಣ್ಣನಿಗೆ ವಿದಾಯ ಹೇಳಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ