ಜ್ಞಾನ ಅನಾವರಣಕ್ಕೆ ಚಿತ್ರಕಲೆ ಅಗತ್ಯ
Team Udayavani, Jan 23, 2019, 10:47 AM IST
ವಿಜಯಪುರ: ಚಿತ್ರಕಲೆ ಮಕ್ಕಳಲ್ಲಿ ಹುದಗಿರುವ ಜ್ಞಾನವನ್ನು ಜಗತ್ತಿಗೆ ಅನಾವರಣ ಮಾಡುವ ಸಾಧನವಾಗಿದೆ. ಪ್ರಸಕ್ತ ಸಂದರ್ಭದಲ್ಲಿ ಮಕ್ಕಳು ಮುಖ್ಯವಾಗಿ ಅಧುನಿಕ ತಂತ್ರಜ್ಞಾನದ ಅಂತರ್ಜಾಲದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮೇಲ್ಮನೆ ಸದಸ್ಯ ಸುನೀಲಗೌಡ ಪಾಟೀಲ ಅಭಿಪ್ರಾಯಪಟ್ಟರು.
ನಗರದ ಪ್ರವಾಸೋದ್ಯಮ ಇಲಾಖೆಯ ಆರ್ಟ್ ಗ್ಯಾಲರಿಯಲ್ಲಿ ಎಕ್ಸ್ಲೆಂಟ್ ಶಿಕ್ಷಣ ಸಂಸ್ಥೆ ಚಿತ್ರಕಲಾ ಶಿಕ್ಷಕ ಮುಸ್ತಾಕ್ ತಿಕೋಟಾ ಮಾರ್ಗದರ್ಶನದಲ್ಲಿ 500 ವಿದ್ಯಾರ್ಥಿಗಳ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಚಿತ್ರಕಲಾ ಶಿಕ್ಷಕ ಮುಸ್ತಾಕ್ ಆವರು ತಮ್ಮೊಂದಿಗೆ ತಮ್ಮ 500 ಶಿಷ್ಯರ ಪ್ರತಿಭೆ ಅನಾವರಣಕ್ಕೆ ಈ ವೇದಿಕೆ ಕಲ್ಪಿಸಿರುವುದು ಸ್ವಾಗತಾರ್ಹ ಕ್ರಮ. ಮಕ್ಕಳಲ್ಲಿ ಹಲವಾರು ವಿಷಯಗಳ ಕುರಿತು ಮನಸ್ಸಿನಲ್ಲಿರುವ ಪ್ರಶ್ನೆಗಳ ಹಾಗೂ ಜಗತ್ತಿನ ಸಮಸ್ಯೆಗಳ ಪ್ರತಿಬಿಂಬವಾಗಿ ಚಿತ್ರಕಲೆಯು ಸಾಧನವಾಗಿದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಎಕ್ಸ್ಲೆಂಟ್ ಸಂಸ್ಥೆ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ, ಚಿತ್ರಕಲೆಯು ಇಡಿ ಇತಿಹಾಸವನ್ನು ಒಂದು ಚಿತ್ರದಲ್ಲಿ ಸೆರೆ ಹಿಡಿಯಬಹುದು. ಜಗತ್ತಿಗೆ ಸಂದೇಶ ನೀಡಲು ಹಾಗೂ ಸಮಸ್ಯೆಗಳನ್ನು ಒಂದು ಚಿತ್ರದಲ್ಲಿ ಅನಾವರಣ ಮಾಡಬಹುದು. ಚಿತ್ರಕಲೆಯು ಮನಸ್ಸಿಗೆ ಮುದ ನೀಡುವ ವಿಷಯವಾಗಿ ಕಾರ್ಯ ನಿರ್ವಹಿಸುತ್ತದೆ ಎಂದರು.
ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಮಹೇಶ ಕ್ಯಾಥನ್ ಮಾತನಾಡಿ, 500 ವಿದ್ಯಾರ್ಥಿಗಳ ಚಿತ್ರಕಲಾ ಪ್ರದರ್ಶನ 7 ದಿನ ನಡೆಯಲಿದ್ದು, ಜಿಲ್ಲೆಯ ಜನರು ಅದರಲ್ಲೂ ಶಾಲಾ ಮಕ್ಕಳು ಈ ಪ್ರದರ್ಶನ ವೀಕ್ಷಣೆ ಮೂಲಕ ತಮ್ಮಲ್ಲಿರುವ ಪ್ರತಿಭೆ ಅನಾವರಣಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಖ್ಯಾತ ಕಲಾವಿದ ಪಿ.ಎಸ್. ಕಡೆಮನಿ ಮಾತನಾಡಿ, ತಮ್ಮ ಕಲೆಯೊಂದಿಗೆ ಮಕ್ಕಳ ಕಲೆ ಅಭಿರುಚಿ ಹಾಗೂ ಅವರಲ್ಲಿ ಅಡಗಿರುವ ಜ್ಞಾನವನ್ನು ಅಭಿವ್ಯಕ್ತಿಸಲು ಮುಸ್ತಾಕ್ ತಿಕೋಟಾ ಮುಕ್ತ ವೇದಿಕೆ ಕಲ್ಪಿಸಿರುವುದು ಅನುಕರಣೀಯ ಎಂದರು.
ಸಿದ್ದೇಶ್ವರ ಬ್ಯಾಂಕ್ ನಿರ್ದೇಶಕ ವೈಜನಾಥ ಕರ್ಪೂರಮಠ ಮಾತನಾಡಿದರು. ನಗರಸಭೆ ಮಾಜಿ ಸದಸ್ಯ ಶರಣಪ್ಪ ಯಕ್ಕುಂಡಿ, ಮೈಹಬೂಬ ತಿಕೋಟಾ, ಎಂ.ಕೆ. ಪತ್ತಾರ, ರಾಜು ಶಟಗಾರ, ಲಿಂಗರಾಜ ಕಾಚಾಪುರ, ರುದ್ರೇಶ ಕುಂಬಾರ, ರಮೇಶ ಚವ್ಹಾಣ, ಶಬ್ಬೀರ್ ನದಾಫ್, ಜಾವೀದ್ ತಿಕೋಟಾ, ಇಕ್ಬಾಲ್ ತಿಕೋಟಾ, ರಾಜೇಶ್ವರಿ ಕುಮಸಿ ಇದ್ದರು. ಬಸವರಾಜ ವಾಲೀಕಾರ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ
Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ
Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್
BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ
SSLC ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಗೆ ಎದೆನೋವು… ಆಸ್ಪತ್ರೆಗೆ ದಾಖಲು
MUST WATCH
ಹೊಸ ಸೇರ್ಪಡೆ
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು