ಶಾಸಕರ ದಾಸೋಹ ಕಾರ್ಯ ಶ್ಲಾಘನೀಯ: ಸ್ವಾಮೀಜಿ
Team Udayavani, May 16, 2020, 6:55 AM IST
ತಾಳಿಕೋಟೆ: ಸಿದ್ಧಗಂಗಾ ಮಠದಲ್ಲಿಯ ಶಿಕ್ಷಣದೊಂದಿಗೆ ಅಲ್ಲಿಯ ದಾಸೋಹವನ್ನು ಸ್ವೀಕರಿಸಿ ಬೆಳೆದ ಶಾಸಕ ಎ.ಎಸ್ .ಪಾಟೀಲ(ನಡಹಳ್ಳಿ) ಅವರು ಅಲ್ಲಿಯ ದಾಸೋಹ ಕಾರ್ಯ ಇಲ್ಲಿಯೂ ತಮ್ಮ ಕೈಲಾದ ಮಟ್ಟಿಗೆ ಮುಂದುವರೆಸಿಕೊಂಡು ಹೊರಟಿರುವುದು ಮಾದರಿ ಕಾರ್ಯ ಎಂದು ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣಕ್ಕೆ ವಿವಿಧ ರಾಜ್ಯಗಳಿಂದ ಆಗಮಿಸಿ ವಸತಿ ನಿಲಯಗಳಲ್ಲಿ ಸಾಂಸ್ಥಿಕ ಕ್ವಾರೆಂಟೈನ್ ನಲ್ಲಿ ಉಳಿದುಕೊಂಡಿರುವವರಿಗೆ ಶ್ರೀ ಘನಮಠೇಶ್ವರ ಕಾಲೇಜ್ ಆವರಣದಲ್ಲಿ ಸಿದ್ಧಪಡಿಸಲಾಗುತ್ತಿರುವ ಅಡುಗೆ ತಯಾರಿಕೆಗೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿದ ಅವರು, ಬಡತನದಲ್ಲಿ ಹುಟ್ಟಿ ಬೆಳೆದು ಬಂದ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಬಡವರ ಕಷ್ಟ ಅನುಭವಿಸಿದ್ದಾರೆ. ಜನರಿಗಾಗಿ ಜನರಿಗೋಸ್ಕರ ತಮ್ಮ ಜೀವನವನ್ನುಮುಡಿಪಾಗಿಟ್ಟು ಕೆಲಸ ಮಾಡುತ್ತಿದ್ದಾರೆ. ವಿವಿಧ ರಾಜ್ಯಗಳಿಗೆ ದುಡಿಯಲು ಹೋಗಿದ್ದ ಬಡ ಕೂಲಿಕಾರ್ಮಿಕರು ಕೆಲಸವೂ ಇಲ್ಲದೇ ಇತ್ತ ಮರಳಿ ಬರಲೂ ಆಗದೇ ಅಲ್ಲಿಯೇ ಉಳಿದು ಊಟಕ್ಕೂ ಗತಿಯಿಲ್ಲದಂತೆ ತೊಂದರೆ ಪಡುತ್ತಿರುವುದನ್ನು ತಿಳಿದು ಶಾಸಕ ನಡಹಳ್ಳಿ ಅವರು ಆ ಎಲ್ಲರನ್ನು ಮರಳಿ ನಮ್ಮ ತಾಲೂಕಿಗೆ ಕರೆತಂದು ತಿಂಗಳಿಗಾಗುವಷ್ಟು ಊಟದ ಕಿಟ್ ನೀಡಿದ್ದಾರೆ. ಇಂತಹ ದಾಸೋಹವನ್ನು ಮೈಗೂಡಿಸಿಕೊಂಡು ಸಮಾಜಕ್ಕಾಗಿ ಮಿಡಿಯುತ್ತಿರುವ ಹೃದಯಕ್ಕೆ ಶ್ರೀ ಖಾಸ್ಗತರ ಹಾಗೂ ಶ್ರೀ ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಸದಾ ಇರಲಿ ಎಂದು ಹಾರೈಸಿದರು.
ಕೊಡೇಕಲ್ಲ ದುರುದುಂಡೇಶ್ವರ ಮಠದ ಶಿವಕುಮಾರ ಶ್ರೀಗಳು, ಶ್ರೀ ಖಾಸYತೇಶ್ವರ ಮಠದ ಸಿದ್ದಲಿಂಗ ದೇವರು, ಶಾಸಕ ಎ.ಎಸ್ .ಪಾಟೀಲ(ನಡಹಳ್ಳಿ, ವಾಸುದೇವ ಹೆಬಸೂರ, ಶಿವಶಂಕರ ಹಿರೇಮಠ, ಎಸ್.ಎಂ.ಸಜ್ಜನ, ರಾಜು ಹಂಚಾಟೆ, ವೇ.ಮುರುಘೇಶ ವಿರಕ್ತಮಠ, ಸಾಗರ ಗುಪ್ತಾ, ಗೌರವ ಹಜೇರಿ, ಕಾಶಿನಾಥ ಗೋಗಿ, ಪ್ರವೀಣ್ ಪಾಟೀಲ ಹಾಗೂ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ