ವಿಜಯಪುರ ಜಿಲ್ಲೆಯಲ್ಲಿ ಲಘು ಭೂಕಂಪ; ಆತಂಕದಿಂದ ಮನೆಗಳಿಂದ ಹೊರಗೆ ಓಡಿ ಬಂದ ಜನರು
Team Udayavani, Dec 4, 2022, 9:19 PM IST
ವಿಜಯಪುರ: ಜಿಲ್ಲೆಯ ಟಕ್ಕಳಕಿ ಗ್ರಾಮದಲ್ಲಿ ಭಾನುವಾರ ಸಂಜೆ ಲಘು ಭೂಕಂಪನ ಸಂಭವಿಸಿದ್ದು,ಯಾವುದೇ ಅಪಾಯ ಸಂಭವಿಸಿಲ್ಲ.
ಭಾನುವಾರ ರಾತ್ರಿ 7-57 ಟಕ್ಕಳಕಿ ಗ್ರಾಮದಲ್ಲಿ 7 ಕಿ.ಮೀ. ಭೂಮಿಯ ಆಳದಲ್ಲಿ 2.5 ತೀವ್ರತೆಯಲ್ಲಿ ಭೂಮಿ ಕಂಪಸಿದೆ.
ಟಕ್ಕಳಕಿ, ಸೋಮದೇವರಹಟ್ಟಿ ಮಾತ್ರವಲ್ಲದೇ ಲೋಗಾಂವ, ಸಿದ್ದಾಪುರ ಕೆ. ಗ್ರಾ.ಪಂ. ವ್ಯಾಪ್ತಿಯ ವಸ್ತಿ ಗ್ರಾಮಗಳಲ್ಲೂ ಭೂಕಂಪನದ ಅನುಭವ ಆಗಿದೆ. ಭೂಮಿ ಕಂಪಿಸಿದ ಅನುಭವ ಆಗುತ್ತಲೇ ಜನರು ಆತಂಕದಿಂದ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.
ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರ ಲಘು ಭೂಕಂಪನ ಆಗಿರುವುದನ್ನು ದೃಢಪಡಿಸಿದೆ.