ನಿಯಮ ಪಾಲಿಸದ ಅಂಗಡಿ, ಗ್ರಾಹಕರ ವಿರುದ್ಧ ಕ್ರಮ
Team Udayavani, May 20, 2021, 3:56 PM IST
ವಿಜಯಪುರ:ಲಾಕ್ಡೌನ್ ಜಾರಿಯಲ್ಲಿದ್ದರೂ ಅನಗತ್ಯ ಅಂಗಡಿ ಮುಂಗಟ್ಟುಗಳು ತೆರೆಯುತ್ತಿರುವ ಬಗ್ಗೆ ಹಾಗೂ ಬೆಳಗಿನ ಸಮಯದಲ್ಲಿ ಜನದಿನಸಿ ಹಾಗೂ ಅಗತ್ಯ ವಸ್ತುಗಳನ್ನು ಕೊಳ್ಳಲು ಅಂತರಕಾಯ್ದುಕೊಳ್ಳದೆ ಜನಜಂಗುಳಿಸೇರುತ್ತಿದ್ದರ ಬಗ್ಗೆಉದಯವಾಣಿಯಲ್ಲಿ ಮೇ 18 ರಂದುವರದಿ ಬಂದಿದ್ದು, ಮೇ 19ರ ಬೆಳ್ಳಂ ಬೆಳಗ್ಗೆ ಪೊಲೀಸ್ ಸಿಬ್ಬಂದಿ ಮತ್ತುಪುರಸಭಾ ಅಧಿಕಾರಿಗಳು ರಸ್ತೆಗಿಳಿದು ಕಾರ್ಯಚರಣೆ ಮಾಡಿದರು.
ದಿನಸಿ, ಹಾಲು, ತರಕಾರಿ ಹಾಗೂಇನ್ನಿತರೆ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ತೆರವಾಗಿದ್ದ ಫ್ಯಾನ್ಸಿ ಸ್ಟೋರ್, ಚಪ್ಪಲಿ ಅಂಗಡಿ, ಜ್ಯುವೆಲ್ಲರಿ ಶಾಪ್, ಬಟ್ಟೆ ಅಂಗಡಿಮತ್ತಿತರೆ ಅಂಗಡಿಗಳನ್ನು ಬಂದ್ಮಾಡಿಸಿದರು. ಅಂಗಡಿ ಮಾಲೀಕರು ಅಂಗಡಿ ತೆರೆಯಬಾರದು ಎಂಬ ವಿಷಯ ಗೊತ್ತಿರಲಿಲ್ಲ. ಬೇರೆಯವರೆಲ್ಲಾ ಅಂಗಡಿತೆರೆದು ವ್ಯಾಪಾರ ಮಾಡುತ್ತಿರುವುದು ನೋಡಿ, ನಾವು ಒಬ್ಬೊಬ್ಬರಾಗೇ ಅಂಗಡಿ ತೆರೆಯುತ್ತಿರುವುದಾಗಿ ತಿಳಿಸಿದರು.ಅಂಗಡಿ ತೆರೆದಿದ್ದರಿಂದಲೇ ವ್ಯಾಪಾರಕ್ಕೆಬಂದೆವು ಎಂದು ಸಾರ್ವಜನಿಕರು ಸಮಜಾಯಿಷಿ ನೀಡಿದರು.
ಗಸ್ತು ತಿರುಗಿ,ಅನಗತ್ಯವಾಗಿ ತೆರೆದಿದ್ದ ಎಲ್ಲಾ ಅಂಗಡಿಗಳನ್ನುಮುಚ್ಚಲು ಸೂಚನೆನೀಡಿದ್ದೇವೆ. ಅಂಗಡಿಮಾಲೀಕರು ನಾಳೆಯಿಂದ ಅಂಗಡಿ ತೆರೆಯುವುದಿಲ್ಲ ಎಂದು ಹೇಳಿದ್ದಾರೆ. ಅಗತ್ಯವಸ್ತುಗಳುಹೊರತು ಪಡಿಸಿ ಬೇರೆ ಅಂಗಡಿಗಳನ್ನುತೆರೆದರೆ ತೆರೆದರೆ,ಕ್ರಮಕೈಗೊಳ್ಳುತ್ತೇವೆ.
ನಂದೀಶ್, ಪಿಎಸ್ಐ, ವಿಜಯಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru ಗ್ರಾಮಾಂತರದಲ್ಲಿ ಕಾಂಗ್ರೆಸ್ 500 ಕೋಟಿ ರೂ. ಖರ್ಚು’
Congress ಗೆ ದೇಶದಲ್ಲಿ 40 ಸ್ಥಾನ ಸಿಗೋದು ಕಷ್ಟ, ರಾಜ್ಯದಲ್ಲಿ ಬಿಜೆಪಿಗೆ 28 ಸ್ಥಾನ ಸ್ಪಷ್ಟ
2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ
UPSC Result: ವಿಜಯಪುರದ ವಿಜೇತಾಗೆ ಯುಪಿಎಸ್ಸಿಯಲ್ಲಿ 100ನೇ ರ್ಯಾಂಕ್
ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ