ಕರ್ನಾಟಕ ಬಂದ್: ವಿಜಯಪುರದಲ್ಲಿ ಮಿಶ್ರ ಪ್ರತಿಕ್ರಿಯೆ
Team Udayavani, Sep 28, 2020, 9:27 AM IST
ವಿಜಯಪುರ: ರೈತ-ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ವಿಜಯಪುರ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸರ್ಕಾರಿ ಸಂಸ್ಥೆ ನಗರ, ಹಾಗೂ ಖಾಸಗಿ ಸಾರಿಗೆ, ಆಟೋ ಸಂಚಾರ ಎಂದಿನಂತೆ ಇತ್ತು. ನಗರ ಬಸ್, ಆಟೋ ಸಂಚಾರ ಇದ್ದರೂ ಜನರ ಓಡಾಟ ಕಡಿಮೆ ಇತ್ತು.
ಹೊಟೇಲ್ ಗಳು ತೆರೆದಿದ್ದರೂ ಗ್ರಾಹಕರ ಕೊರತೆಯ ಕಾರಣ ವಹಿವಾಟು ಕ್ಷೀಣವಾಗಿತ್ತು.
ಇದನ್ನೂ ಓದಿ:ಉಡುಪಿ: ರಸ್ತೆ ತಡೆದು, ಬಸ್ ಬಂದ್ ಮಾಡಲು ಯತ್ನಿಸಿದ ಪ್ರತಿಭಟನಾಕಾರರ ಬಂಧನ
ಬೆಳಿಗ್ಗೆ 11 ಗಂಟೆ ಬಳಿಕ ಬಂದ್ ಕರೆ ನೀಡಿರುವ ರೈತ-ಕಾರ್ಮಿಕ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಲಿವೆ.