ಹಣ-ದಾಖಲೆ ಮರಳಿಸಿ ಪ್ರಾಮಾಣಿಕತೆ
Team Udayavani, Jul 7, 2022, 3:22 PM IST
ಮುದ್ದೇಬಿಹಾಳ: ಬಸ್ನಲ್ಲಿ ಮರೆತು ಬಿಟ್ಟು ಹೋಗಿದ್ದ ಹಣ ಮತ್ತು ದಾಖಲೆಗಳನ್ನು ಸಂಬಂಧಿಸಿದವರಿಗೆ ಮರಳಿಸಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ, ನಿರ್ವಾಹಕರಿಬ್ಬರು ಪ್ರಾಮಾಣಿಕತೆ ಮೆರೆದ ಘಟನೆ ಬುಧವಾರ ನಡೆದಿದೆ.
ಈರಯ್ಯ ಹಿರೇಮಠ ಎನ್ನುವವರು 4-6-2022 ರಂದು ಸಂಜೆ 5ಕ್ಕೆ ಮುದ್ದೇಬಿಹಾಳದಿಂದ ಇಣಚಗಲ್ ಮಾರ್ಗವಾಗಿ ತೆರಳುವ ಜಕ್ಕೇರಾಳ ಬಸ್ ಏರಿದ್ದರು. ಆದರೆ ಬಸ್ ಇಳಿಯುವಾಗ ಅವರ ಬಳಿ ಇದ್ದ 19800 ರೂ. ನಗದು, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಬಸ್ನಲ್ಲೇ ಕಳೆದುಕೊಂಡಿದ್ದರು. ಆದರೆ ನಗದು ಮತ್ತು ದಾಖಲೆಗಳು ಬಸ್ನ ಚಾಲಕ ಎಂ.ಬಿ.ಹಿರೇಗೌಡರ ಮತ್ತು ನಿರ್ವಾಹಕ ಆನಂದಯ್ಯ ಹಿರೇಮಠ ಅವರಿಗೆ ಸಿಕ್ಕಿದ್ದವು. ದಾಖಲೆಗಳಲ್ಲಿನ ವಿಳಾಸದ ವ್ಯಕ್ತಿಯನ್ನು ಪತ್ತೆ ಹಚ್ಚಿ ಅವರನ್ನು ಇಲ್ಲಿನ ಸಾರಿಗೆ ಘಟಕಕ್ಕೆ ಕರೆಸಿಕೊಂಡು ಕಳೆದುಕೊಂಡ ನಗದು, ದಾಖಲೆಗಳಲ್ಲಿ ಮರಳಿಸಲಾಯಿತು.
ಘಟಕ ವ್ಯವಸ್ಥಾಪಕ ಬಿ.ಬಿ.ಚಿತ್ತವಾಡಗಿ, ಗ್ರಾಮಸ್ಥರಾದ ಸಾಬಣ್ಣ ತಳವಾರ, ಅಂಬ್ರಯ್ಯ ಹಿರೇಮಠ, ಕಾಶಿಮ ತಾಳಿಕೋಟಿ, ಪಾವಡೆಪ್ಪ ಚಲವಾದಿ, ಬೀರಪ್ಪ ಜಾವಡಗಿ ಮತ್ತು ಘಟಕದ ಸಿಬ್ಬಂದಿ ಈ ಸಂದರ್ಭ ಇದ್ದು ಚಾಲಕ, ನಿರ್ವಾಹಕರ ಪ್ರಾಮಾಣಿಕತೆಯನ್ನು ಕೊಂಡಾಡಿ ಹರ್ಷಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indi; ಕುಡಿಯುವ ನೀರಿಗಾಗಿ ಒತ್ತಾಯ; ಮೊಬೈಲ್ ಟವರ್ ಹತ್ತಿದ ಯುವಕ
ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ
ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು
KPTCL ಕಂಪೌಂಡ್ ಗೋಡೆ ಮೈಮೇಲೆ ಬಿದ್ದು ಕಾರ್ಮಿಕ ಸಾವು
BJP;ಯತ್ನಾಳ್ ಸೇರಿ ಯಾರೇ ಆಗಿದ್ದರೂ ಶಿಸ್ತು ಕ್ರಮ ಕೈಗೊಳ್ಳಬೇಕು: ಶಂಕರಗೌಡ
MUST WATCH
ಹೊಸ ಸೇರ್ಪಡೆ
Sparrows ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳು..ಆದರೆ ಇಲ್ಲಿವೆ ನೂರಾರು ಚಿಂವ್..ಚಿಂವ್ ಗಳು..
ಉದ್ಯಾವರ-ಮರ್ಣೆ-ಬೆಳ್ಳೆ ರಸ್ತೆ ಅಭಿವೃದ್ಧಿ
Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ
Thirthahalli ಅಂಗನವಾಡಿ ಮಿಲೆಟ್ ಲಡ್ಡು ಮಿಶ್ರಣದಲ್ಲಿ ಹುಳು ಪ್ರತ್ಯಕ್ಷ !