ಮಾತೃ ವಾತ್ಸಲ್ಯ ಅಮೃತಕ್ಕೆ ಸಮ
Team Udayavani, May 11, 2020, 3:34 PM IST
ಮುದ್ದೇಬಿಹಾಳ: ಶಾಸಕ ಎ.ಎಸ್. ಪಾಟೀಲರ ದಾಸೋಹ ನಿಲಯದಲ್ಲಿ ವಿಶ್ವ ತಾಯಂದಿರ ದಿನವನ್ನು ಕೇಕ್ ಕತ್ತರಿಸಿ ಆಚರಿಸಲಾಯಿತು.
ಮುದ್ದೇಬಿಹಾಳ: ಪ್ರತಿಯೊಬ್ಬ ತಾಯಿ ಮಕ್ಕಳನ್ನು ಕಾಳಜಿಯಿಂದ, ಜವಾಬ್ದಾರಿಯುತವಾಗಿ ಬೆಳೆಸಿರುತ್ತಾಳೆ. ಮಕ್ಕಳು ತಾಯಂದಿರನ್ನು ಗೌರವಿಸಿದಾಗ ಸಮಾಜದಲ್ಲಿ ಮಕ್ಕಳ ಗೌರವ ಹೆಚ್ಚುತ್ತದೆ ಎಂದು ಶಾಸಕ ಎ.ಎಸ್ .ಪಾಟೀಲ ನಡಹಳ್ಳಿ ಅವರ ಪತ್ನಿ ಮಹಾದೇವಿ ಪಾಟೀಲ ಹೇಳಿದರು.
ಇಲ್ಲಿನ ಶಾಸಕರ ದಾಸೋಹ ನಿಲಯದಲ್ಲಿ ರವಿವಾರ ನಡೆದ ವಿಶ್ವ ತಾಯಂದಿರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಗವಂತ ಎಲ್ಲೆಡೆ ಇರಲಾಗುವುದಿಲ್ಲ ಎಂದು ತಾಯಿಯನ್ನು ಸೃಷ್ಟಿಸಿದ್ದಾನೆ. ತಾಯಿಯ ತ್ಯಾಗಕ್ಕೆ ಯಾವುದೂ ಸಮನಾಗದು. ಜೀವನವಿಡೀ ತನ್ನ ಪತಿ, ಮಕ್ಕಳಿಗಾಗಿ ಜೀವನ ಸವೆಸುವ ತಾಯಿಯ ವಾತ್ಸಲ್ಯ ಅಮೃತಕ್ಕೆ ಸಮಾನವಾದದ್ದು. ಆಧುನಿಕ ಜನಾಂಗ ತಾಯಿಗೆ ಅಗೌರವ ತೋರಿಸದೆ ಆಕೆಯನ್ನು ಲಾಲಿಸಿ, ಪಾಲಿಸುವ ಗುಣ ಮೈಗೂಡಿಸಿಕೊಂಡು ಸಮಾಜಕ್ಕೆ ಉತ್ತಮ ಸಂದೇಶ ಕೊಡುವಂತಾಗಬೇಕು ಎಂದರು.
ಇದೇ ವೇಳೆ ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ಶಾಸಕರ ತಾಯಿ ಗಂಗಮ್ಮಗೌಡತಿ ಪಾಟೀಲರ ಜೊತೆಗೂಡಿ ಮಹಾದೇವಿ ಪಾಟೀಲ ಕೇಕ್ ಕತ್ತರಿಸಿ, ಪರಸ್ಪರ ಸಿಹಿ ಹಂಚಿ, ಶುಭಾಶಯ ವಿನಿಮಯ ಮಾಡಿಕೊಂಡರು. ಪುರಸಭೆ ಸದಸ್ಯರಾದ ಸಂಗಮ್ಮ ದೇವರಳ್ಳಿ ಮತ್ತು ಸಹನಾ ಬಡಿಗೇರ, ವಿವಿಧ ಮಹಿಳಾ ಸಂಘಟನೆಗಳ ಪ್ರಮುಖರಾದ ಸುಧಾ ಪಾಟೀಲ, ಗೌರಮ್ಮ ಹುನಗುಂದ, ಬಸಮ್ಮ ಸಿದರಡ್ಡಿ, ನೀಲಮ್ಮ ಚಲವಾದಿ, ನಿರ್ಮಲಾ ಪುರಾಣಿಕಮಠ, ಶಾಂತಾ ಹಾವರಗಿ, ಶಿಲ್ಪಾ ಶರ್ಮಾ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ