ವಿದ್ಯುತ್ ಸುರಕ್ಷತೆ-ಜಾಗೃತಿ ಕಾರ್ಯಕ್ರಮ
Team Udayavani, Feb 7, 2020, 4:42 PM IST
ನಾಲತವಾಡ: ಜೀವನಕ್ಕೆ ಗಾಳಿ, ನೀರು ಎಷ್ಟು ಮುಖ್ಯವೋ ಹಾಗೆ ವಿದ್ಯುತ್ ಅಷ್ಟೆ ಮುಖ್ಯವಾಗಿದೆ. ವಿದ್ಯುತ್ ಕೊರತೆ ನೀಗಿಸಲು ಕೇವಲ ನಿಗಮ ಮಾತ್ರವಲ್ಲದೇ ಗ್ರಾಹಕರು ಸಹಕರಿಸಬೇಕು ಎಂದು ಮುದ್ದೇಬಿಹಾಳ ಹೆಸ್ಕಾ ಉಪವಿಭಾಗದ ಎಇಇ ಆರ್.ಎನ್. ಹಾದಿಮನಿ ಹೇಳಿದರು.
ಸ್ಥಳೀಯ ಹೆಸ್ಕಾಂ ಕಾರ್ಯಾಲಯದಲ್ಲಿ ವಿದ್ಯುತ್ ಬಳಕೆಯಲ್ಲಿ ಸುರಕ್ಷತೆಯ ಸಲಹೆಗಳು, ಉಳಿತಾಯದ ಕ್ರಮ, ಎಲ್ಇಡಿ ಬಲ್ಪಗಳ ಬಳಕೆಯ ಪ್ರಯೋಜನೆ ಹಾಗೂ ಸೌರಶಕ್ತಿ ಬಗ್ಗೆ ಹಮ್ಮಿಕೊಂಡ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ಒಂದು ಕೆಲಸಕ್ಕೂ ಕೂಡ ವಿದ್ಯುತ್ ಉಪಯೋಗವಿದೆ. ವಿದ್ಯುತ್ ಉತ್ಪಾದನೆಗಿಂತ ಬಳಸುವುದೇ ಹೆಚ್ಚಾಗಿದೆ. ಆದ್ದರಿಂದ ನಾವು ವಿದ್ಯುತ್ ಉಳಿತಾಯ ಮಾಡುವವರಾಗಬೇಕು. ಅನವಶ್ಯಕವಾಗಿ ವಿದ್ಯುತ್ ದೀಪ ಉರಿಸುವುದನ್ನು ಕಡಿಮೆ ಮಾಡಬೇಕು. ವಿದ್ಯುತ್ ಉಳಿತಾಯಕ್ಕೆ ಇನ್ನೊಂದು ಮಾರ್ಗವೆಂದರೆ ಪಟ್ಟಣದಲ್ಲಿ ಎಲ್ಲ ಜನರು ಎಲ್ಇಡಿ ಬಲ್ಪಗಳ ಬಳಕೆ ಮಾಡಬೇಕು ಎಂದರು.
ಉಪವಿಭಾಗದ ಹಿರಿಯ ಸಹಾಯಕ ಬಿ.ಎ. ಮಡಿವಾಳರ ಮಾತನಾಡಿ, ಹೆಸ್ಕಾಂ ಸಿಬ್ಬಂದಿಗಳು ಗ್ರಾಹಕರಿಗೆ ಒಳ್ಳೆಯ ಸೇವೆ ನೀಡುವುದರ ಜೊತೆಗೆ ನಿಗಮದ ಅಭಿವೃದ್ಧಿ ಕಡೆಗೆ ಗಮನ ಹರಿಸಬೇಕು. ವಿದ್ಯುತ್ ಅವಘಡದಿಂದ ಸಿಬ್ಬಂದಿಗಳು ಮುಂಜಾಗೃತವಾಗಿ ಎಲ್ಲ ರೀತಿಯ ಸುರಕ್ಷತೆ ಮಾಡಿಕೊಳ್ಳಬೇಕು ಎಂದರು.
ನಾಲತವಾಡ ಶಾಖಾಧಿಕಾರಿ ಎಂ.ಎಸ್. ತೆಗ್ಗಿನಮಠ ಮಾತನಾಡಿ, ವಿದ್ಯುತ್ ಬಳಕೆಯಲ್ಲಿ ಗ್ರಾಹಕರು ಬಹಳ ಸುರಕ್ಷತೆ ವಹಿಸಬೇಕು. ಪ್ರಕೃತಿ ವಿಕೋಪಕ್ಕೆ ತಂತಿಗಳು ಹರಿದು ಬಿದ್ದರೆ ನಮ್ಮ ಗಮನಕ್ಕೆ ತನ್ನಿ. ಕೂಡಲೇ ದುರಸ್ತಿ ಕಾರ್ಯ ಮಾಡಿಸಲಾಗುತ್ತದೆ. ತಾವು ಸೇವೆಗೆ ಹಾಜರಾದ ನಂತರ ಕಂದಾಯ ವಸೂಲಾತಿ ಗುರಿ ಮುಟ್ಟಿದ್ದೇನೆ. ಇದಕ್ಕೆ ಸಹಕಾರ ನೀಡಿದ ಸಿಬ್ಬಂದಿಗೆ ಅಭಿನಂದಿಸುತ್ತೇನೆ ಎಂದರು.
ಹುಲ್ಲೂರ ಶಾಖಾ ಧಿಕಾರಿ ಬಿ.ಎಸ್. ಯಲಗೋಡ, ಜಿ.ವಿ.ಪಿ ಸಂಘದ ಅಧ್ಯಕ್ಷ ಎಸ್.ಎ. ಗೂಳಿ, ಜೆಟಿಒ ಡಿ.ಎಸ್. ಶಿರಸಂಗಿಮಠ ಮಾತನಾಡಿದರು. ಈ ವೇಳೆ ಹುಲ್ಲೂರ ಶಾಖಾಧಿಕಾರಿ ಆರ್.ಬಿ. ಹಿರೇಮಠ, ಹಿರಿಯ ಸಹಾಯಕಾರದ ಎಸ್.ಬಿ. ಅಂಗಡಿ, ನೌಕರ ಸಂಘದ ಉಪಾಧ್ಯಕ್ಷ ಎಸ್.ಬಿ. ಗಣಾಚಾರಿ, ಎಸ್.ಎ. ಗೂಳಿ, ಗ್ರಾಮ ವಿದ್ಯುತ್ ಪ್ರತಿನಿಧಿ ಗಳು, ಗುತ್ತಿಗೆದಾರರು, ಸಿಬ್ಬಂದಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
Bengaluru ಗ್ರಾಮಾಂತರದಲ್ಲಿ ಕಾಂಗ್ರೆಸ್ 500 ಕೋಟಿ ರೂ. ಖರ್ಚು’
Congress ಗೆ ದೇಶದಲ್ಲಿ 40 ಸ್ಥಾನ ಸಿಗೋದು ಕಷ್ಟ, ರಾಜ್ಯದಲ್ಲಿ ಬಿಜೆಪಿಗೆ 28 ಸ್ಥಾನ ಸ್ಪಷ್ಟ
2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ
MUST WATCH
ಹೊಸ ಸೇರ್ಪಡೆ
Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ