ನಾಲತವಾಡ ಸೌಂದಯೀಕರಣಕ್ಕೆ ಬದ್ಧ: ನಡಹಳ್ಳಿ


Team Udayavani, Jan 16, 2018, 2:04 PM IST

vij-6.jpg

ನಾಲತವಾಡ: ನನ್ನ ರಾಜಕೀಯ ಬದುಕಿನಲ್ಲೇ ನಾಲತವಾಡ ಪಟ್ಟಣದಲ್ಲಿ ಹದಗೆಟ್ಟ ರಸ್ತೆ, ಚರಂಡಿ ಹಾಗೂ ಬಡತನದಿಂದ ಬಳಲುತ್ತಿದ್ದ ಕುಟುಂಬಗಳನ್ನು ನೋಡಿಯೇ ಇಲ್ಲ. 25 ವರ್ಷದಿಂದ ಶಾಸಕರಾಗಿ ಆಯ್ಕೆಯಾದರವರಿಗೆ ಸಮಸ್ಯೆಗಳು ಗಮನಕ್ಕೆ ಬರಲಿಲ್ಲವೇ ಎಂದು ದೇವರಹಿಪ್ಪರಗಿ ಶಾಸಕ ಎ.ಎಸ್‌. ಪಾಟೀಲ (ನಡಹಳ್ಳಿ) ಪ್ರಶ್ನಿಸಿದರು.

ಪಟ್ಟಣದ ವಿವಿಧ ವಾರ್ಡುಗಳಲ್ಲಿ ನಡೆದ ಮನೆ ಮನೆಗೆ ಕುಮಾರಣ್ಣ, ಹಳ್ಳಿ ಹಳ್ಳಿಗೆ ನಡಹಳ್ಳಿ ಕಾರ್ಯಕ್ರಮ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ ತಾಲೂಕಿನಲ್ಲೇ ಪಟ್ಟಣದಲ್ಲಿ ಅತಿ ಬಡತನದ ಬೇಗೆಯಿಂದ
ಬಳಲುತ್ತಿದ್ದಾರೆ ಎಂದು ನಾನು ಕನಸಿನಲ್ಲೇ ಊಹಿಸಿರಲಿಲ್ಲ. ಅಂತಹ ದುಸ್ಥಿತಿ ಪಟ್ಟಣದಲ್ಲಿದೆ. ಇಂತಹ ಗಂಭೀರ ಸಮಸ್ಯೆಗಳತ್ತ ಸ್ಥಳೀಯ ಶಾಸಕರು ಗಮನ ಹರಿಸದಿರುವುದು ‌ ದುರಂತ ಎಂದರು.

ಪಟ್ಟಣದಲ್ಲಿ ಬಡವರಿಗೆ ಪಡಿತರ ಚೀಟಿ, ಮಾಸಿಕ ವೇತನ ಹಾಗೂ ವಾಸಿಸಲು ಸೂರುಗಳಿಲ್ಲ, ಇವೆಲ್ಲವುಗಳನ್ನು
ಸರಕಾರ ಒದಗಿಸುತ್ತದೆ. ಆದರೆ ಅವುಗಳನ್ನು ಒದಗಿಸುವ ಮನೋಭಾವನೆ ಶಾಸಕರಲ್ಲಿ ಇರಬೇಕು. ಪಟ್ಟಣದಲ್ಲಿ 4,500 ಮನೆಗಳಲ್ಲಿ ಅರ್ಧದಷ್ಟು ನಿರ್ಗತಿಕರು ಇದ್ದಾರೆ. ಪಟ್ಟಣದಲ್ಲೇ ನಾಡ ಕಾರ್ಯಾಲಯವಿದೆ ಇದುವರೆಗೂ ಕೆಲವರಿಗೆ ವೃದ್ದಾಪ್ಯ ವೇತನ ಸಿಗುತ್ತಿಲ್ಲ.

ಸಮಸ್ಯೆಗಳು ಪಟ್ಟಣದಲ್ಲಿ ತಾಂಡವವಾಡುತ್ತಿವೆ. 25 ವರ್ಷದ ರಾಜಕಾರಣದಲ್ಲಿ ಪ್ರತಿ ವರ್ಷವೂ ಕೇವಲ 100 ಆಸರೆ ಮನೆಗಳನ್ನು ಅರ್ಹರಿಗೆ ಕಲ್ಪಿಸಿದ್ದರೆ ಒಟ್ಟು 2,500 ಮನೆ ಒದಗಿಸಬಹುದಿತ್ತು. ಇವೆಲ್ಲ ಶಾಸಕರು ತಮ್ಮ ಮನೆಯಿಂದ
ಒದಗಿಸುತ್ತಾರೋ ಎಂದು ಪ್ರಶ್ನಿಸಿದರು. ಕಳೆದ 5 ದಿನದಿಂದ ಅಲೆದಾಡುತ್ತಿದ್ದೇನೆ. ಶೇ. 75ರಷ್ಟು ವೃದ್ಧರು ನಮಗೆ ಪಿಂಚಣಿ ಬರುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ನಾನು 10 ವರ್ಷ ಶಾಸಕನಾಗಿದ್ದು ಈ ರೀತಿ ಆಡಳಿತ ಮಾಡಿಯೇ ಇಲ್ಲ ಎಂದು ಹೇಳಿದರು.

ಸತತ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದೀರಿ. ಶಾಸಕರೇ ನೀವೆ ಒಂದು ಸಲ ಮನೆ ಮನೆಗೆ ಅಲೆದಾಡಿ ಬಡವರ ಪರಿಸ್ಥಿತಿ ಗಮನಕ್ಕೆ ಬರುತ್ತದೆ. ನಾನು ಈಗಾಗಲೇ ಬಡವರ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡಿದ್ದೇನೆ. ಮುಂದಿನ
ದಿನಗಳಲ್ಲಿ ನಾನೇ ಈ ಭಾಗದ ಶಾಸಕನಾಗುತ್ತೇನೆ. ನಿಮ್ಮೆಲ್ಲ ಸಮಸ್ಯೆಗಳಿಗೆ ನಡಹಳ್ಳಿಯಿಂದ ಮಾತ್ರ ಪರಿಹಾರ ಎಂದು ಭರವಸೆ ನೀಡಿದ್ದೇನೆ ಎಂದರು.

ಶಾಸಕರಾಗಿ ಅಧಿಕಾರದಲ್ಲಿ ಪ್ರಾಮಾಣಿಕತೆ ಮೆರೆಯಬೇಕು. ನನಗೆ 25 ವರ್ಷ ಬೇಡ, 5 ವರ್ಷ ಅಧಿಕಾರ ನೀಡಿ. ಮೊದಲು ಪೊರಕೆ ಹಿಡಿದು ನಾಲತವಾಡ ಪಟ್ಟಣವನ್ನೇ ಸ್ವತ್ಛಗೊಳಿಸುವ ಪ್ರತಿಜ್ಞೆ ಮಾಡಿದ್ದೇನೆ. ಪಟ್ಟಣದಲ್ಲಿ ಸಾವಿರಾರು ವಿದ್ಯಾರ್ಥಿಗಳು ಸರಕಾರಿ ಪ್ರೌಢ ಶಾಲೆಗಳಿಂದ ವಂಚಿತರಾಗಿದ್ದಾರೆ. ಕನಿಷ್ಠ ಒಂದು ಸರಕಾರಿ ಪ್ರೌಢಶಾಲೆ ಮಂಜೂರು ಮಾಡದಿರುವು ಅನುಮಾನ ಹುಟ್ಟಿಸಿದೆ ಎಂದರು.

ಪಟ್ಟಣದಲ್ಲಿ ನನಗೆ ಸಾರ್ವಜನೀಕರಿಂದ ಉತ್ತಮ ಪ್ರತಿಕ್ರೀಯೆ ವ್ಯಕ್ತಪಡಿಸಿದ್ದಾರೆ. ಪಟ್ಟಣದಲ್ಲಿ ಶಾಸಕರಾದ ನಾಡಗೌಡ ಅವರು ದಿ| ದೇಶಮುಖ ಅಭಿಮಾನಿಗಳಿಗೆ ಮೂಲ ಸೌಕರ್ಯಗಳಿಂದ ವಂಚಿತಗೊಳಿದ್ದಾರೆ ಎಂಬ ಬಲವಾದ ಆರೋಪಗಳಿವೆ. ರಾಜಕಾರಣ ಬದಿಗೊತ್ತಿ ಭೇದ ಭಾವ ಮರೆತು ಬಡವರ ಪರ ಚಿಂತನೆ ಮಾಡಬೇಕು ಎಂದರು.

ಜೆಡಿಎಸ್‌ ತಾಲೂಕು ಪ್ರಧಾನ ಕಾರ್ಯದರ್ಶಿ ಜಿ. ಮಹಾಂತೇಶಗೌಡ, ಪಪಂ ಸದಸ್ಯ ಭೀಮಣ್ಣ ಗುರಿಕಾರ, ವೀರೇಶ ರಕ್ಕಸಗಿ, ರಫಿಕ್‌ ಕೊಡಗಲಿ, ಸೈಯದ್‌ ಖಾಜಿ, ಸೋಮನಗೌಡ ಕವಡಿಮಟ್ಟಿ, ಜಗದೀಶ ಕೆಂಭಾವಿ, ಸಂಗಪ್ಪ
ಬೋವಿ, ಬಾಬುಗೌಡ ಹಂಪನಗೌಡ, ಸಿದ್ದಲಿಂಗಯ್ಯ ಕಪ್ಪರಮಠ, ಬಸನಗೌಡ ಪಾಟೀಲ (ನಡಹಳ್ಳಿ) ಹಾಗೂ
ಸಂಗಮೇಶ ಮೇಟಿ ಇದ್ದರು. 

ಟಾಪ್ ನ್ಯೂಸ್

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ganihara

Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ

Bengaluru ಗ್ರಾಮಾಂತರದಲ್ಲಿ ಕಾಂಗ್ರೆಸ್‌ 500 ಕೋಟಿ ರೂ. ಖರ್ಚು’

Bengaluru ಗ್ರಾಮಾಂತರದಲ್ಲಿ ಕಾಂಗ್ರೆಸ್‌ 500 ಕೋಟಿ ರೂ. ಖರ್ಚು’

Congress ಗೆ ದೇಶದಲ್ಲಿ 40 ಸ್ಥಾನ ಸಿಗೋದು ಕಷ್ಟ, ರಾಜ್ಯದಲ್ಲಿ ಬಿಜೆಪಿಗೆ 28 ಸ್ಥಾನ ಸ್ಪಷ್ಟ

Congress ಗೆ ದೇಶದಲ್ಲಿ 40 ಸ್ಥಾನ ಸಿಗೋದು ಕಷ್ಟ, ರಾಜ್ಯದಲ್ಲಿ ಬಿಜೆಪಿಗೆ 28 ಸ್ಥಾನ ಸ್ಪಷ್ಟ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.