ಜಲ ಸಂರಕ್ಷಣೆ ಕಾರ್ಯಕ್ಕೆ ನೆರೆ ರಾಜ್ಯ ಜನ ಖುಷ್‌


Team Udayavani, Aug 18, 2017, 4:48 PM IST

Water-1.jpg

ವಿಜಯಪುರ: ನಗರದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಜಲ ಸಾಕ್ಷರ ಸಮಾವೇಶಕ್ಕೆ ನೆರೆಯ ರಾಜ್ಯಗಳ ಜನರು ಇನ್ನಿಲ್ಲದ ಸಂತಸ ವ್ಯಕ್ತಪಡಿಸಿದ್ದು, ಇಂಥ ಕಾರ್ಯಕ್ರಮಗಳ ಮೂಲಕ ಕರ್ನಾಟಕ ಜಲ ಜಾಗೃತಿಯಲ್ಲಿ ರಾಜ್ಯಕ್ಕೆ ಮಾದರಿ ಎಂದು ಹೊಗಳಿದ್ದಾರೆ. ಭೀಕರ ಬರಕ್ಕೆ ತುತ್ತಾಗುವ ಮಹಾರಾಷ್ಟ್ರದ ಕೊಲ್ಲಾಪುರ, ಇಚಲಕರಂಜಿ ಪ್ರದೇಶದಲ್ಲಿ ನಗರೀಕರಣ ಹಾಗೂ ಕೈಗಾರೀಕರಣದ ಫಲವಾಗಿ ಅಲ್ಲಿನ ಕೃಷ್ಣಾ ನದಿಯ ಪುಟ್ಟ ಉಪನದಿ ಪಂಚಗಂಗಾ ಜೀವ ಕಳೆದುಕೊಂಡಿತ್ತು. ಇದನ್ನರಿತ ರಾಷ್ಟ್ರ ಸೇವಾ ದಳ ಎಂಬ ಸಂಸ್ಥೆಯ ಸಾರಥ್ಯದಲ್ಲಿ ನದಿಯ ಪುನರುಜ್ಜೀವನಕ್ಕೆ ಮುಂದಾದ ಜಲ ಸಂರಕ್ಷಕರ ಪಡೆ ಇದಕ್ಕಾಗಿ ದೊಡ್ಡ ಮಟ್ಟದ ಅಭಿಯಾನವನ್ನೇ ಮಾಡಿ, ತನ್ನ ಉದ್ದೇಶ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಸತತ ನಾಲ್ಕಾರು ವರ್ಷಗಳ ಕಾಲ ಜನರಲ್ಲಿ ಜಾಗೃತಿ ಮೂಡಿಸಿ, ಪಂಚಗಂಗಾ ಎಂಬ ತಮ್ಮ ಜೀವನದಿ ಉಳಿಸುವಲ್ಲಿ ಹಳ್ಳಿಗರ ಪಾತ್ರದ ಕುರಿತು ಮನವರಿಕೆ ಮಾಡಿಕೊಟ್ಟರು. ಪಂಚಗಂಗಾ ನದಿಯ ಜೀವಸೃಷ್ಟಿಯಾಗಿರುವ ಹಳ್ಳಗಳಿಗೆ ಪ್ಲಾಸ್ಟಿಕ್‌ ಸೇರಿದಂತೆ, ನದಿ ತೀರದಲ್ಲಿ ಶವಸುಡುವ, ಸ್ಮಶಾನ ತ್ಯಾಜ್ಯ ಎಸೆಯದಂತೆ, ಗಣೇಶ ಮೂರ್ತಿ ಸೇರಿದಂತೆ ಧಾರ್ಮಿಕ ಮಾಲಿನ್ಯವನ್ನು ನದಿಗೆ ಎಸೆಯುವುದನ್ನು ತಡೆಯಲು ಜನಜಾಗೃತಿ ಮೂಡಿಸಿದೆ. 75 ಕಿ.ಮೀ. ದ್ದ ಹರಿಯುವ ಪಂಚಗಂಗಾನದಿ ತೀರದಲ್ಲಿರುವ ಸುಮಾರು 20 ಹಳ್ಳಿಗಳಲ್ಲಿ ಪ್ರತಿ ಊರಲ್ಲೂ ಕನಿಷ್ಟ 20 ಜಲ ಕಾರ್ಯಕರ್ತರ ತಂಡ ಕಟ್ಟಿದ್ದಾರೆ. ಅಲ್ಲದೇ ನದಿಗಳಲ್ಲಿ ತುಂಬಿಕೊಂಡಿರುವ ತ್ಯಾಜ್ಯ ಮುಕ್ತಿಗೂ ಶ್ರಮದಾನ ಮಾಡಿ, ಜಲ ಸಾಕ್ಷರತೆ ಕಾರ್ಯ ಮಾಡುತ್ತಿದ್ದಾರೆ. ಇದರ ಪರಿಣಾಮ ನದಿಗಳಿಗೆ ಯಾವುದೇ ಧಾರ್ಮಿಕ ತ್ಯಾಜ್ಯವಿದ್ದರೂ ಹಿಡಿಯಷ್ಟನ್ನು ಮಾತ್ರ ಸಾಂಕೇತಿಕವಾಗಿ ನದಿಗೆ ಎಸೆದು ಪರಂಪರೆ ರಕ್ಷಣೆ ಜೊತೆಗೆ ನದಿಯ ರಕ್ಷಣೆ ಮಾಡುತ್ತಿದ್ದಾರೆ. ಹಳ್ಳಿಗರು ಈ ವಿಷಯದಲ್ಲಿ ಬಹುತೇಕ ಜಾಗೃತರಾಗಿದ್ದರೂ, ಕೊಲ್ಲಾಪುರ, ಇಚಲಕರಂಜಿ, ಶಿರೋಡ ಸೇರಿದಂತೆ ಪಟ್ಟಣಗಳ ಜನರು ಮಾತ್ರ ಚರಂಡಿ, ಕೈಗಾರಿಕೆ ತ್ಯಾಜ್ಯವನ್ನೆಲ್ಲ ಪಂಚಗಂಗೆಯ ಒಡಲಿಗೆ ಸುರಿಯುವುದನ್ನು ನಿಲ್ಲಿಸಿಲ್ಲ. ಈ ಕುರಿತು ಶೀಘ್ರವೇ ದೊಡ್ಡಮಟ್ಟದ ಅಭಿಯಾನ ಹಮ್ಮಿಕೊಂಡು ಆಡಳಿತ ವ್ಯವಸ್ಥೆಗೆ
ಚುರುಕು ಮುಟ್ಟಿಸುವ ಗುರಿ ಹಾಕಿಕೊಂಡಿದ್ದಾರೆ. ಪಂಚಗಂಗೆ ಪುನರುಜ್ಜೀವನಕ್ಕೆ ಮುಂದಾಗಿರುವ ಈ ತಂಡ ಕೊಲ್ಲಾಪುರದ
ಬಾಬಾಸಾಹೇಬ ನದಾಫ್‌, ಸಾಂಗ್ಲಿಯ ಸದಾಶಿವ ಮುಗದುಮ, ಭೀಡ ಜಿಲ್ಲೆಯ  ಶ್ರೀಮಂತ ರಾಷ್ಟ್ರಪಾಲ ಅವರ ತಂಡ ವಿಜಯಪುರ ನಗರದಲ್ಲಿ ನಡೆಯುತ್ತಿರುವ ಜಲಜಾಗೃತಿ ಸಮಾವೇಶದಲ್ಲಿ ಜನರಿಗೆ ಎಲ್ಲ ನದಿ ಸಂರಕ್ಷಣೆ ಕುರಿತು ಮನವಿ ಮಾಡಿಕೊಂಡು ಜಾಗೃತಿ ನಡೆಸಿದೆ. ಮತ್ತೂಂದೆಡೆ ಸೀಮಾಂಧ್ರದಿಂದ ಬಂದಿರುವ ರೈತರು ಕರ್ನಾಟಕದಲ್ಲಿ ನಡೆಯುತ್ತಿರುವ ಜಲ ಸಂರಕ್ಷಣೆ ಕಾರ್ಯಕ್ರಮಗಳ ಕುರಿತು ಮುಕ್ತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಲದ್ದಕ್ಕೆ ತಮ್ಮ ರಾಜ್ಯದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕರ್ನಾಟಕದ ರಾಜ್ಯದಿಂದ ಪಾಠ ಕಲಿಯುವಂತೆ ಕುಟುಕಿದ್ದಾರೆ. ಕೃಷ್ಣಾ ನದಿಯ ಉಗಮದಿಂದ ಸಮುದ್ರಕ್ಕೆ ಸೇರುವ ಕೊನೆಯ ಹಂತದವರೆಗಿನ ಇಡೀ ನದಿ ಪಾತ್ರದ ಜನರು ಒಂದೆಡೆ ಸೇರಿ ಕೃಷ್ಣೆಯ ಮಾಲಿನ್ಯ ತಡೆಗೆ ಚರ್ಚೆ ನಡೆಸುತ್ತಿರುವ ಕ್ರಮ ನಿಜಕ್ಕೂ ಅನುಕರಣೀಯ. ಕೃಷ್ಣಾ ನದಿಯ ತನ್ನ ಪಾಲಿನ ನೀರಿನ ಬಳಕೆಗಾಗಿ ಕರ್ನಾಟಕ ನಡೆಸಿರುವ ಯುದ್ಧೋಪಾದಿಯ ನಡೆ ಅಚ್ಚರಿ ಮೂಡಿಸುತ್ತಿವೆ ಎಂದು ಸೀಮಾಂಧ್ರದ ವಿಜಯವಾಡ ಜಿಲ್ಲೆಯ ನಿಡುಮರಿ ಗ್ರಾಮದ ಉಯ್ನಾರ ಶಿವಾರಡ್ಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇದೇ ನದಿಪಾತ್ರದ ನೀರಿನ ಪಾಲು ಹೊಂದಿರುವ ಸೀಮಾಂಧ್ರದಲ್ಲಿ ಮಾತ್ರ ನೀರಾವರಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ನಮ್ಮ ಸರ್ಕಾರ ಏನನ್ನೂ ಮಾಡುತ್ತಿಲ್ಲ. ಕೇವಲ ಆಕರ್ಷಕ ಮಾತನಾಡುತ್ತಿರುವ ಚಂದ್ರಬಾಬು ನಾಯ್ಡು ಕರ್ನಾಟಕದ ಸರ್ಕಾರದ ಕ್ರಮದಿಂದ ಪಾಠ ಕಲಿಯಬೇಕಿದೆ. ವಿಜಯಪುರ ಜಿಲ್ಲೆಯಲ್ಲೂ ನಡೆದಿರುವ ಜಲ ಮೂಲಗಳ ಪುನಶ್ಚೇತನ ಕಾರ್ಯ ಅನುಕರಣೀಯ ಎಂದು ವಿಜಯವಾಡದ ಜಂಗಾ ನಾಗಿರಡ್ಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಕರ್ನಾಟಕದಲ್ಲಿ ಕೃಷ್ಣಾ ನದಿಯಿಂದ ಕೆರೆಗೆ ನೀರು ತುಂಬಲು ರೂಪಿಸಿರುವ ಯೋಜನೆ ದೇಶಕ್ಕೆ ಮಾದರಿ. ಕೃಷ್ಣಾ ನದಿಗೆ ರೂಪಿಸಿರುವ ನಿಡುಮರು ಏತನೀರಾವರಿ ಯೋಜನೆ ನಿರ್ವಹಣೆಯಲ್ಲಿ ನಮ್ಮ ಸರ್ಕಾರ ಎಡವುತ್ತಿರುವ ಕಾರಣ ಸಮಸ್ಯೆಯಾಗುತ್ತಿದೆ ಎಂದು ಅನಂತವಾಡ ಗ್ರಾಮದ ಪೋಲ ರಮೇಶ ಹೇಳುತ್ತಾರೆ.

ಜಿ.ಎಸ್‌.ಕಮತರ

ಟಾಪ್ ನ್ಯೂಸ್

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

ganihara

Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.