ಪಕ್ಷಿ ಸಂಕುಲ ಉಳಿಸಲು ನೂತನ ಅಭಿಯಾನ

ಪಕ್ಷಿಗಳ ದಾಹ ತೀರಿಸಿ­ !ಬಟ್ಟಲಲ್ಲಿ ನೀರು ತುಂಬಿ ಗಿಡಕ್ಕೆ ಕಟ್ಟಿ­! ಇತರರಿಗೂ ಇಂಥ ಕಾರ್ಯ ಮಾಡಲು ಪ್ರೇರೇಪಿಸಿ

Team Udayavani, Apr 11, 2021, 8:51 PM IST

hfghfg

ಮುದ್ದೇಬಿಹಾಳ: ಪಕ್ಷಿ ಪ್ರೇಮಿಗಳ ಕಾಳು, ನೀರು ಕೊಡಿ-ಪಕ್ಷಿ ರಕ್ಷಿಸಿ ಅಭಿಯಾನ ದಿನೇ ದಿನೇ ಮಹತ್ವ ಪಡೆದುಕೊಳ್ಳುತ್ತಿದೆ. ಸಣ್ಣ ಪ್ರಯತ್ನವೊಂದರಿಂದ ಆರಂಭಗೊಂಡಿರುವ ಅಭಿಯಾನ ಬೇಸಿಗೆ ಮುಗಿಯುವವರೆಗೂ ಮುಂದುವರಿಯುವ ಸಂಕಲ್ಪ ಹೊಂದಿದೆ. ಬೇಸಿಗೆಯಲ್ಲಿ ಪಕ್ಷಿಗಳನ್ನು ರಕ್ಷಿಸುತ್ತೇವೆ ಎನ್ನುವ ಪ್ರಮಾಣದೊಂದಿಗೆ ಮಕ್ಕಳೂ ಸಹಿತ ಅಭಿಯಾನದಲ್ಲಿ ಭಾಗವಹಿಸುತ್ತಿರುವುದು ಪ್ರೇರಣೆಯಂತಾಗಿದೆ.

ಏನಿದು ಅಭಿಯಾನ?:

ಪರಿಸರದ ಸಮತೋಲನಕ್ಕೆ ಅತ್ಯಗತ್ಯವಾಗಿರುವ ರೈತ ಮಿತ್ರ ಪಕ್ಷಿಗಳು ಹೆಚ್ಚುತ್ತಿರುವ ಕಾಂಕ್ರೀಟ್‌ ಕಾಡು, ಮೊಬೈಲ್‌ ಟಾವರ್‌ಗಳ ವಿಕೀರಣದಿಂದಾಗಿ ನಗರ ಪ್ರದೇಶ ತೊರೆಯುತ್ತಿವೆ. ಇದರಿಂದಾಗಿ ದಶಕಗಳ ಹಿಂದಿದ್ದ ಕಲರವ, ಚಿಂವ್‌ಚಿಂವ್‌ ನಾದ ಕೇಳಿ ಬರುವುದು ಬಹುತೇಕ ನಿಂತೆ ಹೋಗಿದೆ. ಗುಬ್ಬಿ, ಕಾಗೆ, ಕೆಲ ಪಕ್ಷಿಗಳು ಅಲ್ಲಲ್ಲಿ ಕಂಡು ಬರುತ್ತವೆ. ಹೀಗೆ ಕಾಣುವ ಪಕ್ಷಿಗಳನ್ನಾದರೂ ರಕ್ಷಿಸಿಕೊಳ್ಳಬೇಕೆನ್ನುವ ಪರಿಕಲ್ಪನೆಯಿಂದ ಕೆಲವರು ಮನೆಗಳ ಮೇಲ್ಛಾವಣಿ, ಮನೆ ಎದುರು ಬೆಳೆಸಿದ ಗಿಡಗಳಲ್ಲಿ ಬಾಟಲ್‌, ಅಗಲವಾದ ಪಾತ್ರೆ, ತಟ್ಟೆ ಮುಂತಾದವುಗಳನ್ನು ಕಟ್ಟಿ ನೀರು, ಕಾಳು ಇಟ್ಟು ಅನುಕೂಲ ಕಲ್ಪಿಸಿದ್ದರು. ಈ ವರ್ಷ ಬೇಸಿಗೆ ಹೆಚ್ಚಾಗುವ ಮುನ್ಸೂಚನೆ ದೊರೆತಿದ್ದರಿಂದ ಕೆಲ ಪಕ್ಷಿ ಪ್ರಿಯರು ಸಾಮೂಹಿಕವಾಗಿ ಅಭಿಯಾನವನ್ನೇ ಪ್ರಾರಂಭಿಸಿದರು. ಎಲ್ಲೆಲ್ಲಿ ಸ್ಥಳಾವಕಾಶ ಇದೆಯೋ ಅಲ್ಲೆಲ್ಲ ಪಕ್ಷಿಗಳ ದಾಹ ತೀರಿಸುವ ಸೇವೆಗೆ ಪ್ರಚಾರ ಕೊಡತೊಡಗಿದರು. ಇದರಿಂದಾಗಿ ಅಭಿಯಾನ ಅನೇಕರಿಗೆ ಪ್ರೇರಣೆ ನೀಡತೊಡಗಿದೆ.

ಯಾರಿಂದ ಅಭಿಯಾನ?:

ಪಟ್ಟಣದಲ್ಲಿ ಎಲ್ಲೆಡೆ ಹಸಿರೀಕರಣದ ಸಂಕಲ್ಪ ತೊಟ್ಟಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಸಿರು ತೋರಣ ಗೆಳೆಯರ ಬಳಗ ಅಭಿಯಾನದ ಮುಂಚೂಣಿಯಲ್ಲಿದೆ. ಬೇಸಿಗೆ ಪ್ರಾರಂಭದಲ್ಲೇ ಪಕ್ಷಿ ರಕ್ಷಿಸುವ ಅಭಿಯಾನ ಪ್ರಾರಂಭಿಸಿದೆ. ಬಳಗದ ಸದಸ್ಯರು ಮೊದಲಿಗರಾಗಿ ಪಕ್ಷಿಗಳಿಗೆ ನೀರು, ಕಾಳು ಇಡಲು ಉಚಿತ ಸೇವೆಯೊಂದಿಗೆ ಜಾಗೃತಿ ಮೂಡಿಸತೊಡಗಿದೆ. ಸರೂರಿನ ಆದಿಶಕ್ತಿ ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಮುದ್ದೇಬಿಹಾಳದ ಅಗಸ್ತ್ಯ ಎಜ್ಯುಕೇಶನಲ್‌ ಅಕಾಡೆಮಿ, ಎಂಜಿವಿಸಿ ಕಾಲೇಜಿನ ಬಯಾಲಜಿ ವಿಭಾಗದ ತಂಡ, ದಿ| ಶೃಂಗಾರಗೌಡ ಪಾಟೀಲ ಫೌಂಡೇಶನ್‌, ಜಂಗಮ ಸಮಾಜ ಬಳಗ, ಸಂತ ಕನಕದಾಸ ಶಾಲೆ ಮಕ್ಕಳು ಸೇರಿ ಹಲವು ಸಂಘಟನೆಗಳು ಸ್ವಯಂಪ್ರೇರಿತರಾಗಿ ಅಭಿಯಾನಕ್ಕೆ ಕೈ ಜೋಡಿಸಿವೆ. ಉಚಿತವಾಗಿ ಬಟ್ಟಲು, ಕಾಳು ನೀಡಿ, ಬಟ್ಟಲಲ್ಲಿ ನೀರು ತುಂಬಿ ಗಿಡಕ್ಕೆ ಕಟ್ಟುವುದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟಿವೆ.

ಎಲ್ಲೆಲ್ಲಿ ಅಭಿಯಾನ ಅನುಷ್ಠಾನ?:

ಮುಖ್ಯ ಅಂಚೆ ಕಚೇರಿ, ಹುಡ್ಕೊ, ಉದ್ಯಾನವನಗಳು, ಓಂಶಾಂತಿ ಭವನ, ಸಂತ ಕನಕದಾಸ ಶಾಲೆ, ವಿವಿಧ ಶಾಲಾ, ಕಾಲೇಜುಗಳ ಆವರಣ, ಪಟ್ಟಣದ ಪ್ರಮುಖ ಸ್ಥಳಗಳಲ್ಲಿರುವ ಗಿಡ ಮರಗಳ ರೆಂಬೆ ಕೊಂಬೆಗಳಿಗೆ ನೀರು, ಕಾಳು ತುಂಬಿದ ಬಟ್ಟಲು ಕಟ್ಟಿ ಅಭಿಯಾನ ಪ್ರಾರಂಭಿಸಲಾಗಿದೆ. ಸಾರ್ವಜನಿಕರು ತಮ್ಮ ಮನೆಯಲ್ಲಿರುವ ಹಳೆಯ ಬಾಟಲ್‌, ಅಗಲವಾದ ಪಾತ್ರೆ, ಬಟ್ಟಲುಗಳಲ್ಲಿ ನೀರು ತುಂಬಿಸಿ ಸಣ್ಣ ಹಗ್ಗ, ತಂತಿ, ದಾರದ ಸಹಾಯದಿಂದ ಮೇಲ್ಛಾವಣಿ, ಟೆರೇಸ್‌, ಗ್ರಿಲ್‌ ಹೀಗೆ ಎಲ್ಲೆಲ್ಲಿ ಪಕ್ಷಿಗಳು ಬರಲು ಅವಕಾಶ ಇದೆಯೋ ಅಲ್ಲೆಲ್ಲ ಕಟ್ಟಬೇಕು. ಅದರೊಟ್ಟಿಗೆ ಮನೆಯಲ್ಲಿ ಅಳಿದುಳಿದ ದ್ವಿದಳ ಧಾನ್ಯವನ್ನೋ, ರಾತ್ರಿ ತಿಂದುಳಿದ ಆಹಾರ ಪದಾರ್ಥವನ್ನೋ, ಹಣ್ಣಿನ ಸಿಪ್ಪೆಯನ್ನೋ, ಅಳಿದುಳಿದ ದವಸಧಾನ್ಯ ಸೇರಿ ಪಕ್ಷಿಗಳಿಗೆ ಆಹಾರವಾಗಬಹುದಾದುದನ್ನು ಇಡಬೇಕು. ಆದಷ್ಟು ಜನಸಂದಣಿಯಿಂದ ಎತ್ತರದಲ್ಲಿ ಅಥವಾ ದೂರದಲ್ಲಿ ಈ ವ್ಯವಸ್ಥೆ ಇರುವುದು ಹೆಚ್ಚು ಅನುಕೂಲ. ಆಕಾಶದಲ್ಲಿ ಸ್ವತ್ಛಂದವಾಗಿ ವಿಹರಿಸುವ ಗುಬ್ಬಿಗಳಾದಿಯಾಗಿ ವಿವಿಧ ಜಾತಿಯ ಪಕ್ಷಿಗಳ ಅತಿಸೂಕ್ಷ್ಮ ದೃಷ್ಟಿಗೆ ಈ ವ್ಯವಸ್ಥೆ ಬಿದ್ದರೆ ಖಂಡಿತ ಅವು ಅಲ್ಲಿಗೆ ಹಾರಿಬಂದು ಹಸಿವು, ದಾಹ ಎರಡನ್ನೂ ತೀರಿಸಿಕೊಳ್ಳುತ್ತವೆ.

ಡಿ.ಬಿ. ವಡವಡಗಿ

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.