ಪಡಿತರಕ್ಕಾಗಿ ನೂರಾರು ಜನರ ಸರದಿ
Team Udayavani, May 7, 2020, 1:31 PM IST
ನಿಡಗುಂದಿ: ವಿಜಯಾ ಪ್ರಾಥಮಿಕ ಗ್ರಾಹಕರ ಸಹಕಾರ ಸಂಘದ ಬಳಿ ಪಡಿತರಕ್ಕಾಗಿ ಚೀಲಗಳನ್ನು ಸರದಿಯಲ್ಲಿ ಇಟ್ಟಿದ್ದ ಫಲಾನುಭವಿಗಳು.
ನಿಡಗುಂದಿ: ಪಟ್ಟಣದ ಗೌರೀಶ್ವರ ದೇವಸ್ಥಾನದ ಬಳಿಯ ವಿಜಯಾ ಪ್ರಾಥಮಿಕ ಗ್ರಾಹಕರ ಸಹಕಾರ ಸಂಘದ ಎದುರು ಪಡಿತರ ಧಾನ್ಯ ಪಡೆಯಲು ಮಂಗಳವಾರ ನೂರಾರು ಜನರು ಸರದಿಗಾಗಿ ಸುರಕ್ಷಿತ ಅಂತರದಲ್ಲಿ ಕೈ ಚೀಲಗಳನ್ನು ಸರದಿಯಲ್ಲಿ ಇಟ್ಟಿದ್ದರೆ, ಎಲ್ಲರೂ ಸಾಮಾಜಿಕ ಅಂತರ ಪಾಲಿಸದೇ ಒಂದೆಡೆಯೇ ಕುಳಿತಿದ್ದು ಕಂಡುಬಂತು.
ಸರಕಾರ ಸದ್ಯ ಮೇ ತಿಂಗಳ ಪಡಿತರ ವಿತರಣೆ ಮಾಡುತ್ತಿದೆ. ಜನ ತಂಡೋಪತಂಡವಾಗಿ ಆಗಮಿಸಿ ಪಡಿತರ ಅಂಗಡಿ ಎದುರು ಬೆಳಗ್ಗೆಯಿಂದಲೇ ಬರುತ್ತಿದ್ದಾರೆ. ತಾವು ಸುರಕ್ಷಿತವಾಗಿ ಸಾಮಾಜಿಕ ಅಂತರ ಪಾಲಿಸದೇ ಚೀಲಗಳನ್ನು ಸುರಕ್ಷಿತ ಅಂತರದಲ್ಲಿರಿಸಿ, ತಾವು ಮಾತ್ರ ಗಿಡದ ನೆರಳಲ್ಲಿ ಗುಂಪು ಗುಂಪಾಗಿ ಕುಳಿತುಕೊಳ್ಳುತ್ತಿದ್ದಾರೆ. ಮುಖಕ್ಕೆ ಮಾಸ್ಕ್ ಸಹಿತ ಹಾಕಿಕೊಂಡಿರಲಿಲ್ಲ.
ಪಿಎಸ್ಐ ಎಚ್ಚರಿಕೆ: ಜನ ಹೆಚ್ಚು ಸೇರಿದ್ದನ್ನು ಗಮನಿಸಿದ ನಿಡಗುಂದಿ ಪಿಎಸ್ಐ ಪಡಿತರ ವಿತರಕರಿಗೆ ಗದ್ದಲ ಸೇರದಂತೆ ಕ್ರಮ ಕೈಗೊಳ್ಳಲು ಮತ್ತು ಬೆಳಗ್ಗೆ ಹಾಗೂ ಮಧ್ಯಾಹ್ನ ಎಂದು ವಿಂಗಡಿಸಿ ತಲಾ 70 ಜನರಿಗೆ ಪಡಿತರ ವಿತರಿಸಲು ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru ಗ್ರಾಮಾಂತರದಲ್ಲಿ ಕಾಂಗ್ರೆಸ್ 500 ಕೋಟಿ ರೂ. ಖರ್ಚು’
Congress ಗೆ ದೇಶದಲ್ಲಿ 40 ಸ್ಥಾನ ಸಿಗೋದು ಕಷ್ಟ, ರಾಜ್ಯದಲ್ಲಿ ಬಿಜೆಪಿಗೆ 28 ಸ್ಥಾನ ಸ್ಪಷ್ಟ
2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ
UPSC Result: ವಿಜಯಪುರದ ವಿಜೇತಾಗೆ ಯುಪಿಎಸ್ಸಿಯಲ್ಲಿ 100ನೇ ರ್ಯಾಂಕ್
ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ