ಗೋವಾದಿಂದ ಆಗಮಿಸಿದ ಕಾರ್ಮಿಕರ ತಪಾಸಣೆ
Team Udayavani, May 10, 2020, 12:19 PM IST
ನಿಡಗುಂದಿ: ಪಟ್ಟಣದ ಬಸ್ ನಿಲ್ದಾಣದಲ್ಲಿರುವ ಚೆಕ್ಪೋಸ್ಟ್ನಲ್ಲಿ ಗೋವಾದಿಂದ ಆಗಮಿಸಿದ ಜನರ ಆರೋಗ್ಯ ಪರೀಕ್ಷೆ ನಡೆಸಲಾಯಿತು
ನಿಡಗುಂದಿ: ಗೋವಾ ರಾಜ್ಯದಿಂದ ಶುಕ್ರವಾರ ರಾತ್ರಿ 5 ಬಸ್ಗಳಲ್ಲಿ ಆಗಮಿಸಿದ 165 ಜನರನ್ನು ಥರ್ಮಲ್ ಸ್ಕ್ರಿನಿಂಗ್ ಮಾಡಿ ಅವರವರ ಗ್ರಾಮಗಳಲ್ಲೇ ಹೋಮ್ ಕ್ವಾರಂಟೈನ್ನಲ್ಲಿಲು ಸೂಚಿಸಲಾಗಿದೆ ಎಂದು ತಹಶೀಲ್ದಾರ್ ಶಿವಲಿಂಗಪ್ರಭು ವಾಲಿ ತಿಳಿಸಿದ್ದಾರೆ.
ತಾಲೂಕಿನ ಗಣಿ, ಗಣಿ ಆರ್ಸಿ, ಮಾರಡಗಿ, ಮಾರಡಗಿ ತಾಂಡಾ, ಚಿಮ್ಮಲಗಿ, ಚಿಮ್ಮಲಗಿ ತಾಂಡಾ, ಹಂಚಿನಾಳ ಗ್ರಾಮಗಳಿಗೆ ಸೇರಿದ 165 ಜನರು 5 ಬಸ್ ಗಳಲ್ಲಿ ಶುಕ್ರವಾರ ರಾತ್ರಿ ಆಗಮಿಸಿದ್ದರು. ಇವರನ್ನು ಚೆಕ್ಪೋಸ್ಟ್ನಲ್ಲಿ ಥರ್ಮಲ್ ಸ್ಕ್ರಿನಿಂಗ್ ಮಾಡಿಸಿ, ಅವರ ಅಗತ್ಯ ಮಾಹಿತಿ ದಾಖಲಿಸಿಕೊಂಡು ಸ್ವಗ್ರಾಮಕ್ಕೆ ಕಳಿಸಲಾಗಿದೆ. ಗೋವಾ ರಾಜ್ಯ ಹಸಿರು ವಲಯದಲ್ಲಿ ಬರುವುದರಿಂದ ಕೊರಾನಾ ಭೀತಿ ಡಿಮೆ ಇದ್ದರೂ ಮುಂಜಾಗ್ರತಾ ಕ್ರಮವಾಗಿ ಎಲ್ಲರನ್ನೂ ಪರೀಕ್ಷೆ ಮಾಡಿಯೇ ಕಳುಹಿಸಲಾಗಿದೆ ಎಂದು ತಿಳಿಸಿದರು.
ಶನಿವಾರ ತಡರಾತ್ರಿ ಗೋವಾ ರಾಜ್ಯದಿಂದ 12 ಬಸ್ಗಳ ಮೂಲಕ ನಿಡಗುಂದಿ, ಮುದ್ದೇ ಬಿಹಾಳ ಸೇರಿದಂತೆ ನಾನಾ ತಾಲೂಕಿನ ಅಂದಾಜು 320ಕ್ಕೂ ಅಧಿಕ ಜನರು ಆಗಮಿಸಲಿದ್ದಾರೆ. ಅವರನ್ನೂ ಪರೀಕ್ಷೆ ಮಾಡಿ ಮಾಹಿತಿ ಸಂಗ್ರಹಿಸಲಾಗುವುದು ಎಂದು ತಹಶೀಲ್ದಾರ್ ವಾಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ
Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ
Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್
BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ