ಅಂಗಡಿ-ಮುಂಗಟ್ಟುಗಳಿಗೆ ಬೀಗ ಹಾಕಿಸಿದ ಅಧಿಕಾರಿಗಳು
Team Udayavani, Apr 24, 2021, 7:34 PM IST
ತಾಳಿಕೋಟೆ: ಕೊರೊನಾ ತಡೆಗಟ್ಟುವ ಸಲುವಾಗಿಹೊರಡಿಸಿದ ಮಾರ್ಗಸೂಚಿಗಳಂತೆ ಶುಕ್ರವಾರತಹಶೀಲ್ದಾರ್ ಅನಿಲಕುಮಾರ ಢವಳಗಿ, ಪಿಎಸೈವಿನೋದ ದೊಡಮನಿ ಮತ್ತು ಪುರಸಭೆ ಮುಖ್ಯಾಧಿಕಾರಿ ಸಿ.ವಿ. ಕುಲಕರ್ಣಿ ನೇತೃತ್ವದ ತಂಡ ಪಟ್ಟಣದಎಲ್ಲ ಅಂಗಡಿಗಳಿಗೆ ಬೀಗ ಹಾಕಿಸಿದರಲ್ಲದೇಸರ್ಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಜರುಗಿಸಲಾಗುವುದೆಂದುಎಚ್ಚರಿಸಿದರು.
ಪಟ್ಟಣದ ಶಿವಾಜಿ ವೃತ್ತದಿಂದ ವಿಜಯಪುರವೃತ್ತದವರೆಗೆ ಹಾಗೂ ಕೆಇಬಿವರೆಗೆ ಅಲ್ಲದೇಅಂಬೇಡ್ಕರ್ ಸರ್ಕಲ್, ಕತ್ರಿ ಬಜಾರ್ ಒಳಗೊಂಡುಮುಖ್ಯ ರಸ್ತೆಯಲ್ಲಿದ್ದ ಕಿರಾಣಿ, ಸಲೂನ್, ಕಾಯಪಲ್ಲೆಮಾರಾಟಗಾರರನ್ನು ಹೊರತು ಪಡಿಸಿ ಇನ್ನೂಳಿದಎಲ್ಲ ಅಂಗಡಿಗಳಿಗೆ ಬೀಗ ಹಾಕಿಸಿದರಲ್ಲದೇಇಂದು ರಾತ್ರಿ 9ರಿಂದ ಸೋಮವಾರ ಬೆಳಗ್ಗೆ6ರವರೆಗೆ ಯಾವುದೇ ಅಂಗಡಿ ಮುಂಗಟ್ಟುತೆರೆಯುವಂತಿಲ್ಲ.
ಜನ ಕೂಡಾ ರಸ್ತೆಗೆ ಬರುವಂತಿಲ್ಲ.ಇಡಿ ಪಟ್ಟಣ ಸಂಪೂರ್ಣ ಲಾಕ್ ಆಗಲಿದೆ ಎಂದುತಹಶೀಲ್ದಾರ್ ಅನಿಲಕುಮಾರ ಢವಳಗಿ ಪತ್ರಿಕೆಗೆಮಾಹಿತಿ ನೀಡಿದರು. ಸೋಮವಾರದಿಂದ ಅಗತ್ಯವಸ್ತುಗಳಿಗೆ ಬೆಳಗ್ಗೆ 6ರಿಂದ 10ರವರೆಗೆ ಅವಕಾಶಕಲ್ಪಿಸಲಾಗಿದೆ. ಕಿರಾಣಿ, ಹಾಲು, ಆಸ್ಪತ್ರೆ, ಔಷಧಅಂಗಡಿ ಒಳಗೊಂಡು ಅಗತ್ಯ ವಸ್ತುಗಳಿಗೆ ಮಾತ್ರಅವಕಾಶ ಇರಲಿದೆ.
ಇನ್ನುಳಿದಂತೆ ಎಲ್ಲ ಅಂಗಡಿಮುಂಗಟ್ಟುಗಳು ಮೇ 4ರವರೆಗೆ ಬಂದ್ ಆಗಲಿವೆ.ಮಾಸ್ಕ್ ಇಲ್ಲದೇ ಯಾರೂ ಕೂಡಾ ಹೊರಬರಬಾರದು ಮತ್ತು ಮಾಸ್ಕ್ ಇಲ್ಲದೇ ಅಗತ್ಯವಸ್ತು ಮಾರಾಟಗಾರರೂ ಕೂಡಾ ಕೂಡುವಂತಿಲ್ಲ.ಗ್ರಾಹಕರಿಗೆ ಸಾಮಾಜಿಕ ಅಂತರದೊಂದಿಗೆವ್ಯವಹಾರ ಮಾಡಬೇಕು ಇದನ್ನು ಉಲ್ಲಂಘಿಸಿದರೆ ಪ್ರಕರಣ ದಾಖಲಿಸಿ ಶಿಸ್ತು ಕ್ರಮಜರುಗಿಸಲಾಗುವುದು ಎಂದರು.
ಶ್ರೀಪಾದ ಜೋಶಿ, ಎಸ್.ಎ. ಘತ್ತರಗಿ,ಶಿವು ಜುಮನಾಳ, ಎಎಸೈ ಆರ್.ಎಸ್. ಭಂಗಿ,ಸಿಬ್ಬಂದಿಯಾದ ಎಂ.ಎಲ್. ಪಟ್ಟೇದ, ಗಿರೀಶಚಲವಾದಿ, ಸಂಗಮೇಶ, ರಾಜಕುಮಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್
BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ
SSLC ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಗೆ ಎದೆನೋವು… ಆಸ್ಪತ್ರೆಗೆ ದಾಖಲು
Muddebihal: ಆಕಸ್ಮಿಕ ಬೆಂಕಿ: 2 ಲಕ್ಷ ಮೌಲ್ಯದ ಗುಜರಿ ಸಾಮಗ್ರಿ ಬೆಂಕಿಗಾಹುತಿ
BJP; ಜಿಗಜಿಣಗಿ ಹಠಾವೋ, ಬಿಜೆಪಿ ಬಚಾವೋ ಘೋಷಣೆ, ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು