ಒಮಿಕ್ರಾನ್ ಸುತ್ತೋಲೆ; 14 ದಿನಗಳ ಧರಣಿ ಅಂತ್ಯ
Team Udayavani, Jan 6, 2022, 5:33 PM IST
ಮುದ್ದೇಬಿಹಾಳ: ತಂಗಡಗಿ ಗ್ರಾಪಂ ಮತ್ತು ಪಿಡಿಒ ವಿಷಯದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಇಲ್ಲಿನ ತಾಪಂ ಕಚೇರಿ ಎದುರು ಡಿ. 23ರಿಂದ ನಡೆಸುತ್ತಿದ್ದ ಧರಣಿ ಸತ್ಯಾಗ್ರಹ, ತಂಗಡಗಿ ಗ್ರಾಮದ ಒಂದಿಬ್ಬರು ಜ. 3ರಿಂದ ಆರಂಭಿಸಿದ್ದ ಆಮರಣ ಉಪವಾಸ ಸತ್ಯಾಗ್ರಹ ಸರ್ಕಾರ ಹೊರಡಿಸಿರುವ ಒಮಿಕ್ರಾನ್ ನಿಯಮಗಳ ಹಿನ್ನೆಲೆ ಮತ್ತು ತಾಪಂ ಇಒ ನೀಡಿದ ಲಿಖೀತ ಪತ್ರದಿಂದಾಗಿ ಬುಧವಾರ ಅಂತ್ಯಗೊಂಡಿತು.
ತಮ್ಮ ಬೇಡಿಕೆ ಈಡೇರದಿದ್ದಲ್ಲಿ ಒಮಿಕ್ರಾನ್ ನಿಯಮಗಳು ಸಡಿಲಗೊಂಡ ಮೇಲೆ ಮತ್ತೇ ಧರಣಿ ಆರಂಭಿಸುವುದಾಗಿ ತಿಳಿಸಿ ಮುಖಂಡರು ಧರಣಿಗೆ ಅರೆಮನಸ್ಸಿನಿಂದಲೇ ಅಂತ್ಯ ಹೇಳಿದರು.
ಈ ವೇಳೆ ಆಮರಣ ಉಪವಾಸ ನಿರತರಿಗೆ ಇಒ ಶಿವಾನಂದ ಹೊಕ್ರಾಣಿ, ಪಿಎಸೈ ರೇಣುಕಾ ಜಕನೂರ ಉಪಸ್ಥಿತಿಯಲ್ಲಿ ಎಳನೀರು ಕುಡಿಸಲಾಯಿತು. ಇದಕ್ಕೂ ಮುನ್ನ ಇಒ ಶಿವಾನಂದ ಹೊಕ್ರಾಣಿ ಲಿಖೀತ ಪತ್ರ ನೀಡಿ, ಅದರಲ್ಲಿರುವ ಅಂಶಗಳನ್ನು ಮುಖಂಡರ ಗಮನಕ್ಕೆ ತಂದಿದ್ದರು. ಪಿಡಿಒ ಉಮೇಶ ರಾಠೊಡರು ವಿವಿಧ ಕಾಮಗಾರಿಗಳಿಗೆ ಭೋಗಸ್ ಬಿಲ್ ಪಾವತಿಸಿದ್ದು ಅವರ ಮೇಲೆ ಕ್ರಮಕ್ಕೆ ಆಗ್ರಹಿಸಿ ಉಪವಾಸ ಧರಣಿ ಸತ್ಯಾಗ್ರಹ ನಡೆಸುತ್ತಿದ್ದೀರಿ. ಈ ಕುರಿತು 4-1-2022ರಂದು ವಿಜಯಪುರ ಜಿಪಂ ಸಿಇಒ ಅವರ ನಿರ್ದೇಶನದಂತೆ ಜಿಪಂ ಉಪ ಕಾರ್ಯದರ್ಶಿಯವರು ತಂಗಡಗಿ ಗ್ರಾಪಂಗೆ ಮತ್ತು ಧರಣಿ ನಿರತರಿಗೆ ಭೇಟಿ ಆಗಿ ಅವ್ಯವಹಾರ, ಭೋಗಸ್ ಬಿಲ್ ಪಾವತಿ ಆರೋಪಗಳ ಬಗ್ಗೆ ಸೂಕ್ತ ತನಿಖೆ ಕೈಗೊಂಡು ವರದಿ ಸಲ್ಲಿಸಲು ಪಿಆರ್ಇಡಿಯ ಎಇಇ, ತಾಪಂನ ಎನ್ಆರ್ಇಜಿಯ ಎಡಿ ಮತ್ತು ಎನ್ಆರ್ಇಜಿಯ ತಾಂತ್ರಿಕ ಸಂಯೋಜಕರನ್ನೊಳಗೊಂಡ ತನಿಖಾ ಸಮಿತಿ ರಚಿಸಲಾಗಿದೆ.
ಮುಖಂಡರಾದ ಡಿ.ಬಿ.ಮುದೂರ, ಹರೀಶ ನಾಟೀಕಾರ, ಬಸವರಾಜ ಪೂಜಾರಿ ಮಾತನಾಡಿದರು. ಚನ್ನಪ್ಪ ವಿಜಯಕರ, ರೇವಣೆಪ್ಪ ಹರಿಜನ, ಮಹಾಂತೇಶ ಬಾಗಲಕೋಟ, ಮಲ್ಲು ತಳವಾರ, ಪರಶುರಾಮ ಮುರಾಳ, ಸಂಗಯ್ಯ ಸಾರಂಗಮಠ, ತಿಪ್ಪಣ್ಣ ಗೋನಾಳ, ಶೇಖರ ಆಲೂರ, ಪ್ರಕಾಶ ಸರೂರ, ದೇವರಾಜ ಹಂಗರಗಿ, ಬಾಲು ಹುಲ್ಲೂರ, ಹುಲಿಗೆಪ್ಪ ಚಲವಾದಿ, ಮಂಜು ಪೂಜಾರಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!