ಲಾಕ್ ಡೌನ್ ಸಂಕಷ್ಟ: 26 ಅಂಗಡಿಗಳ 2.60 ಲಕ್ಷ ರೂ. ಬಾಡಿಗೆ ಮನ್ನಾ ಮಾಡಿದ ಮಾಲೀಕ
Team Udayavani, Apr 29, 2020, 3:49 PM IST
ವಿಜಯಪುರ: ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಇಂಡಿ ಪಟ್ಟಣದಲ್ಲಿ ವಾಣಿಜ್ಯ ಸಂಕೀರ್ಣದ ಮಾಲೀಕರೊಬ್ಬರು ತನ್ನ ಬಳಿ ಬಾಡಿಗೆ ಇರುವ 26 ಅಂಗಡಿ ಬಾಡಿಗೆದಾರರ 2.50 ಲಕ್ಷ ರೂ. ಬಾಡಿಗೆ ಮನ್ನಾ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಇಂಡಿ ಪಟ್ಟಣದ ಮಂಜುನಾಥ ಕಾಮಗೊಂಡ ಎಂಬ ವಾಣಿಜ್ಯ ಸಂಕೀರ್ಣ ಹೊಂದಿದ್ದಾರೆ. ಕೋವಿಡ್-19 ಲಾಕ್ ಡೌನ್ ಬಳಿಕ ತನ್ನ ವಾಣಿಜ್ಯ ಸಂಕೀರ್ಣದಲ್ಲಿ ಬಾಡಿಗೆ ಇರುವ ವ್ಯಾಪಾರಿಗಳ ವಹಿವಾಟು ಸ್ಥಗಿತಗೊಂಡಿದೆ. ಇದರಿಂದ ಆದಾಯ ಇಲ್ಲದೇ ಅಂಗಡಿ ಬಾಡಿ ಕಟ್ಟುವ ಕುರಿತು ವ್ಯಾಪಾರಿಗಳು ಕಂಗಾಲಾದ್ದರು.
ಇದನ್ನರಿತ ಮಂಜುನಾಥ ಬಾಡಿಗೆಗೆ ಇರುವ ವ್ಯಾಪಾರಿಗಳು ಮನವಿ ಮಾಡದಿದ್ದರೂ ಲಾಕ್ ಡೌನ್ ಪರಿಸ್ಥಿತಿಯನ್ನು ಅರಿತು ಸ್ವಯಂಪ್ರೇರಿತರಾಗಿ ವಾಣಿಜ್ಯ ಸಂಕಿರಣದ 26 ಅಂಗಡಿಗಳ ಏಪ್ರೀಲ್ ತಿಂಗಳ ಬಾಡಿಗೆ ಮನ್ನಾ ಮಾಡಿದ್ದಾರೆ.
ಇದರಿಂದ ತಮಗೆ ಬರಬೇಕಿದ್ದ ಮಾಸಿಕ ಬಾಡಿಗೆ ಆದಾಯ 2.50 ಲಕ್ಷ ರೂ. ಮನ್ನಾ ಮಾಡಿದ್ದಾರೆ. ಮಂಜುನಾಥ ಕಾಮಗೊಂಡ ಇವರ ನಡೆಗೆ ಬಾಡಿಗೆ ಇರುವ ವ್ಯಾಪಾರಿಗಳು ಸಂತಸ ವ್ಯಕ್ತಪಡಿಸಿದ್ದು, ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ
Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
BJP-JDS ಮೈತ್ರಿಕೂಟದಿಂದ 28 ಸ್ಥಾನ ಗೆದ್ದೇ ಗೆಲ್ಲುತ್ತೇವೆ: ಬಿಎಸ್ವೈ
Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ