ರೋಗಿಗಳಿಗೆ ಸಿಗುತ್ತಿಲ್ಲ ಆಂಬ್ಯುಲೆನ್ಸ್‌ ಸೌಲಭ್ಯ


Team Udayavani, May 15, 2021, 3:55 PM IST

ರೋಗಿಗಳಿಗೆ ಸಿಗುತ್ತಿಲ್ಲ ಆಂಬ್ಯುಲೆನ್ಸ್‌  ಸೌಲಭ್ಯ

ತಾಳಿಕೋಟೆ: ಜನರಿಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆ  ನೀಡುವ ಸಲುವಾಗಿ ಆಂಬ್ಯುಲೆನ್ಸ್‌ ಸೇವೆಗೆ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡತ್ತಿದೆ. ಆದರೆ ಅಧಿ  ಕಾರಿಗಳ ನಿರ್ಲಕ್ಷéದಿಂದ ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ 108 ವಾಹನದ ಸೌಲಭ್ಯವೇ ಇಲ್ಲ.

ಇದರಿಂದ ಗ್ರಾಮೀಣ ಭಾಗದ ಜನರಿಗೆ ತುರ್ತು ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ಲಭಿಸದೆ ಪರಾಡುವಂತಾಗಿದೆ. ಈ ಮೊದಲು ತಾಲೂಕು ಕೇಂದ್ರಕ್ಕೆ 30 ಸಾವಿರ ಜನಸಂಖ್ಯೆಗೆ ಅನುಗುಣವಾಗಿ ಒಂದರಂತೆ ತಾಳಿಕೋಟೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೂ ಕೂಡಾ 108 ವಾಹನ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ 04-10-2020ರಂದು ಮನಗೂಳಿ ಹತ್ತಿರ ನಡೆದ ಅಪಘಾತದಿಂದಾಗಿ ಬೆಳಗಾವಿಯ ಗ್ಯಾರೇಜ್‌ ಸೇರಿಕೊಂಡ ಆಂಬ್ಯುಲೆನ್ಸ್‌ ರಿಪೇರಿಯ ದುಡ್ಡು ಕಟ್ಟಲಾಗದಿದ್ದಕ್ಕೆ ಅಲ್ಲಿಯೇ ನಿಂತಿದೆ.

ಅಪಘಾತದ ನಂತರ ಕಳೆದ ಒಂದೇ ವಾರದಲ್ಲಿ ಬೇರೆ 108 ವಾಹನವನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಒದಗಿಸಿದ್ದರು. ಕೇವಲ 2 ದಿನಗಳಲ್ಲಿ ಈ ವಾಹನದ ಇಂಜಿನ್‌ ಕೆಲಸದ ಮೇಲೆ ಜಿಲ್ಲಾ ಆಸ್ಪತ್ರೆ ಆವರಣ ಸೇರಿಕೊಂಡು ವರ್ಷ ಸಮೀಸುತ್ತಿದ್ದರೂ ರಿಪೇàರಿಆಗದೇ ಅಲ್ಲಿಯೇ ಅನಾಥವಾಗಿ ಬಿದ್ದಿದೆ. 108 ವಾಹನ ಸೌಲಭ್ಯ ಇಲ್ಲದ್ದರ ಕುರಿತು ಈಗಾಗಲೇ ಸಾಕಷ್ಟು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳೇ

ಪತ್ರ ಬರೆದು ತಿಳಿಸಿದರೂ ಸಹ ವಾಹನ ಪೂರೈಸಿಲ್ಲ. ವಾಹನ ಸೌಲಭ್ಯ ಒದಗಿಸಬೇಕೆಂದು ಈಗಾಗಲೇ ಸಾಕಷ್ಟು ಭಾರಿ ಅನೇಕ ಸಂಘ ಸಂಸ್ಥೆಯವರು ಸಂಬಂಧಿಸಿದ ಅಧಿಕಾರಿಗಳ, ಸಚಿವರ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ.

ಕೋವಿಡ್‌ ರೋಗಿಗೂ ತೊಂದರೆ: ಕೋವಿಡ್‌ ಸೊಂಕಿತರನ್ನು ಜಿಲ್ಲಾ ಆಸ್ಪತ್ರೆಗೆ ಸೂಕ್ತ ಸಮಯದಲ್ಲಿ ಮುಟ್ಟಸಬೇಕೆಂದರೆ ನಿರ್ದಿಷ್ಟ ಪಡಿಸಿದ ವಾಹನ ಸೌಲಭ್ಯವಿಲ್ಲ. ವೈದ್ಯರು ಸೂಚಿಸಿದ ನಂತರವೇ ಕೋವಿಡ್‌ ರೋಗಿಗಳ ಸಾಗಿಸಲು 30 ಕಿ.ಮೀ ಅಂತರದಲ್ಲಿರುವ ಮುದ್ದೇಬಿಹಾಳದಿಂದ ನಿಗದಿ  ಪಡಿಸಿರುವ ವಾಹನವೇ ಬರಬೇಕು. ಅದು ಬೇರೆ ಕಡೆ ಹೋಗಿದ್ದರೆ ದಿನವಿಡಿ ಕಾಯುತ್ತಾ ಕುಳಿತುಕೊಳ್ಳುವ ಪರಿಸ್ಥಿತಿ ರೋಗಿಗಳಿಗೆ ಬಂದೊದಗಿದೆ. ಕೋವಿಡ್‌ ರೋಗಿಯನ್ನು ಕರೆದುಕೊಂಡು ಹೋಗುವ ವಾಹನ ಚಾಲಕನಿಗೆ ಮತ್ತು ಸಿಬ್ಬಂದಿಗೆ ಪಿಪಿ ಕಿಟ್‌ ಗಳು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಇದರಿಂದರೋಗಿಯನ್ನು ಕರೆದುಕೊಂಡು ಹೋಗುವ ಚಾಲಕ, ಸಿಬ್ಬಂದಿಗೆ ತಮ್ಮ ಜೀವದ ಮೇಲೆ ಭಯ ಹುಟ್ಟುವಂತಾಗಿದೆ.

ಜಿಲ್ಲೆಯಲ್ಲಿವೆ 32 ವಾಹನ: ಜಿಲ್ಲೆಯಲ್ಲಿ ಒಟ್ಟು 32 ಆಂಬ್ಯುಲೆನ್ಸ್‌ಗಳಿದ್ದು ಅದರಲ್ಲಿ ಈಗಾಗಲೇ 8 ವಾಹನಗಳು ದುರಸ್ತಿ ಕಾಣದೇ ಜಿಲ್ಲಾ ಆಸ್ಪತ್ರೆಯಲ್ಲಿತುಕ್ಕು ಹಿಡಿಯುತ್ತಿದ್ದರೆ, ಇನ್ನೂ ಕೆಲವು ವಾಹನಗಳುತಾಲೂಕು ಕೇಂದ್ರಗಳಲ್ಲಿ ತುಕ್ಕು ಹಿಡಿಯುತ್ತ ನಿಂತಿವೆ.ಹಣ ತೆರುವ ಪರಿಸ್ಥಿತಿ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಗು ಮಗು ಮತ್ತು ಜನನಿ ಸುರಕ್ಷಾ ಯೋಜನೆಯ ಎರಡು ಆಂಬ್ಯುಲೇನ್ಸ್‌ಗಳಿವೆ. ಅವುಗಳಲ್ಲಿ ನಗುಮಗು ಗರ್ಭಿಣಿಯರನ್ನು, ತಾಯಿ ಮಗುವನ್ನು ಮನೆಗೆ ಮತ್ತು ಆಸ್ಪತ್ರೆಗೆ ಕರೆದುಕೊಂಡು ಬರಲು ಮೀಸಲಿಡಲಾಗಿದೆ.

ಇನ್ನೊಂದು ಜನನಿ ಸುರಕ್ಷಾದ ವಾಹನ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಿಟ್ಟು ಬರುವಂತಹದ್ದಾಗಿದೆ. ಆದರೆ ಜನನಿ ಸುರಕ್ಷಾ ವಾಹನದ ಸೌಲಭ್ಯ ಸರಿಯಾಗಿ ಸಿಗುತ್ತಿಲ್ಲ. ಒಂದು ವೇಳೆ ಸಿಕ್ಕರೂ ಈ ವಾಹನದಲ್ಲಿ ಪ್ರಥಮ ಚಿಕಿತ್ಸೆಯಾಗಲಿ, ಸ್ಟಾಫ್‌ನರ್ಸ್‌ ಆಗಲಿ ಇರಲ್ಲ. ಕೇವಲ ಚಾಲಕನ ಮೇಲೆ ನಿರ್ವಹಣೆಯಾಗುತ್ತಿದೆ. ಇದರಿಂದ ಹಣ ತೆತ್ತು ಬೇರೆ ವಾಹನದಲ್ಲಿ ಹೋಗುವಂತಾಗಿದೆ ಎಂದು ರೋಗಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.

ತಾಳಿಕೋಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ 108 ವಾಹನ ಒದಗಿಸುವ ಕುರಿತು ಜಿವಿಕೆಇಎಂಆರ್‌ ನಿರ್ವಹಣಾ ಸಂಸ್ಥೆಗೆಪತ್ರ ಬರೆದಿದ್ದೇನೆ. ವಾಹನ ಚಲಾಣೆಯಾಗದೇವಾಹನ ಚಲಾವಣೆಯಲ್ಲಿದೆ ಎಂದು ಆನ್‌ಲೈನ್‌ನಲ್ಲಿ ತೋರಿಸುತ್ತಿರುವುದು ಗಮನಕ್ಕೆ ಬಂದಿಲ್ಲ.ಕೂಡಲೇ ಮಾಹಿತಿ ಪಡೆದು ನಿರ್ವಹಣಾ ಸಂಸ್ಥೆ ಮೇಲೆ ಕ್ರಮಕ್ಕೆ ಕಮಿಷನರ್‌ಗೆ ಪತ್ರಬರೆಯುತ್ತೇನೆ. -ಮಹೇಂದ್ರ ಕಾಪ್ಸೆ ಡಿಎಚ್‌ಒ, ವಿಜಯಪುರ

 

-ಜಿ.ಟಿ. ಘೋರ್ಪಡೆ

ಟಾಪ್ ನ್ಯೂಸ್

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

1-aqwqw

BJP Rebel; ನಾಮಪತ್ರ ಹಿಂಪಡೆದ ಡಾ.ನಾಯಿಕ್ ಕಾಂಗ್ರೆಸ್ ಸೇರ್ಪಡೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.