ಅನ್ನದಾತರ ಆತ್ಮಸ್ಥೈರ್ಯ ಬದುಕಿಗೆ ಪಾಟೀಲ ಮೆಚ್ಚುಗೆ


Team Udayavani, Dec 4, 2018, 12:11 PM IST

vij-2.jpg

ಇಂಡಿ: ಮುಂಗಾರು, ಹಿಂಗಾರು ಸಂಪೂರ್ಣ ವಿಫಲ ಆಗಿರುವುದರಿಂದ ಬರಗಾಲ ಬೆಂಬಿಡದೆ ಬೆನ್ನು ಹತ್ತಿದೆ. ಇದು ಇಂದು ನಿನ್ನೆಯದೇನಿಲ್ಲ. ನಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದಿದೆ. ಇಂತಹ ಅನೇಕ ಸಂಕಷ್ಟಗಳ ಮಧ್ಯ ಈ ಭಾಗದ ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳದೆ ಬದುಕು ಸಾಗಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ತಾಲೂಕಿನ ತಡವಲಗಾ ಗ್ರಾಮದ ಜೋಡ ಗುಡಿ ಹತ್ತಿರ ಆಯೋಜಿಸಿ ಕೃಷಿ ಅಭಿಯಾನ ಹಾಗೂ ಲಿಂಬೆ, ಕಬ್ಬು ಇತರೆ ಬೆಳೆಗಳ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬರಗಾಲ ಎದುರಿಸುವ ಸಂದರ್ಭದಲ್ಲಿ ನಾವು ಯಾವ ರೀತಿಯಾಗಿ ಬೆಳೆಗಳನ್ನು ಉಳಿಸಬೇಕಾಗಿದೆ ಎನ್ನುವುದು ನಮ್ಮೆಲ್ಲರ ಕರ್ತವ್ಯ. ಸರಕಾರ ಹಿಂದೆ ತೊಗರಿ ಖರೀದಿ ಕೇಂದ್ರಗಳನ್ನು ತೆರೆದು ರೈತರ ಸಹಾಯಕ್ಕೆ ಬಂದಿದೆ. ಇಂದು ಮಳೆ ಕಡಿಮೆಯಾಗಿರುವುದರಿಂದ ಈ ಬಾರಿ ತೊಗರಿ ಪ್ರಮಾಣ ಕಡಿಮೆಯಾಗಿದೆ. ಉಳಾಗಡ್ಡಿ, ಲಿಂಬೆ ಹಣ್ಣಿನ ಬೆಲೆ ಕುಸಿದಿರುವುದರಿಂದ ರೈತರು ಸಮಸ್ಯೆಗಳ ಸುಳಿಯಲ್ಲಿ ಬದುಕುತ್ತಿದ್ದಾರೆ. 

ಇಂತಹ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯ ಸರಕಾರಗಳು ಮಾಡಬೇಕಾಗುತ್ತದೆ. ನಾನು ಕೂಡಾ ಈ ಭಾಗದ ಧ್ವನಿಯಾಗಿ ಬರುವ ಅಧಿವೇಶನದಲ್ಲಿ ಸರಕಾರದ ಮಟ್ಟದಲ್ಲಿ ಗಮನ ಸೆಳೆಯುವುದಾಗಿ ತಿಳಿಸಿದರು. ಬೇಸಿಗೆ ಸಂದರ್ಭದಲ್ಲಿ ಈ ಭಾಗದಲ್ಲಿ ನೀರು ಹರಿಯದಕ್ಕೆ ಕಾರಣ ಯೋಜಿತ ಯೋಜನಾ ಪ್ರದೇಶದ ಕೊನೆ ಭಾಗದಲ್ಲಿರುವುದರಿಂದ ಗುತ್ತಿ ಬಸವಣ್ಣ ನೀರಾವರಿ ಯೋಜನೆ ಕಾಲುವೆ ನೀರು ಬರುವದು ಅತ್ಯಂತ ಕಷ್ಟವಾಗಿದೆ.

 ನಿರಂತರ ಮಳೆ ಆದಾಗ ಮತ್ತು ಆಲಮಟ್ಟಿ ಡ್ಯಾಂ ತುಂಬಿದಾಗ ಮಾತ್ರ ಪರಿಹಾರ ಸಾಧ್ಯ. ಕಳೆದ ಅವಧಿಯಲ್ಲಿ ಸಿದ್ದರಾಮಯ್ಯ ಸರಕಾರ ರೈತರ ಸಾಲ ಮನ್ನಾ ಮಾಡಿದೆ. ಇಂದಿನ ಮೈತ್ರಿ ಸರಕಾರ ಕೂಡಾ ರೈತರ ಸಾಲ ಮನ್ನಾ ಮಾಡುವ ಉದ್ದೇಶ ಹೊಂದಿದೆ ಎಂದರು. ಕೃಷಿಯಲ್ಲಿ ರೈತರು ತೋಡಗಬೇಕಾದರೆ ಮಳೆ ಹಂಚಿಕೆ ಪ್ರಕಾರ ನಮ್ಮ ಪೂರ್ವಜರು ಬೆಳೆಗಳನ್ನು ಬೆಳೆಯುತ್ತಿದ್ದರು. ಆದರೆ ಇಂದು ಮಳೆಯ ಅಭಾವದಿಂದ ಪರಿಸರದಲ್ಲಿ ಸಾಕಷ್ಟು ಏರುಪೇರುಗಳು ಕಂಡು ಬರುತ್ತಿವೆ. ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತಿದ್ದಾರೆ.

ಇಂದು ಯಾವುದೇ ಬೆಳೆಗಳು ಬೆಳೆಯಬೇಕಾದರೆ ನೀರಾವರಿ ಪ್ರಮುಖವಾಗಿದೆ. ಇಂತಹ ವೈಪರಿತ್ಯಗಳನ್ನು ರೈತರು ಹೇಗೆ ಎದುರಿಸಬೇಕು? ಎಂಬ ವಿಚಾರವೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಸಾಧ್ಯವಾದಷ್ಟು ಸಮಸ್ಯೆಗಳಿಗೆ ಹರಿಹಾರ ಕಂಡುಕೊಳ್ಳಲು ಶ್ರಮಿಸೋಣ ಎಂದು ಜಂಟಿ ನಿರ್ದೇಶಕ ಶಿವಕುಮಾರ ಹೇಳಿದರು. 

ಜಿಪಂ ಸದಸ್ಯ ಮಹಾದೇವಪ್ಪ ಗಡ್ಡದ, ತಾಪಂ ಅಧ್ಯಕ್ಷ ಶೇಖರ ನಾಯಕ, ಎಪಿಎಂಸಿ ಅಧ್ಯಕ್ಷ ಶಿವಯೋಗೇಪ್ಪ .ಎಸ್‌ ಚನಗೊಂಡ, ಗ್ರಾಪಂ ಅಧ್ಯಕ್ಷೆ ಕಲ್ಯಾಣಿ ಗಣವಲಗಾ, ತಾಪಂ ಸದಸ್ಯ ಗಣಪತಿ ಬಾಣಿಕೋಲ, ತಾಪಂ ಸದಸ್ಯ ಸೋಮಶೇಖರ ಬ್ಯಾಳಿ, ಎಂ.ವಿ. ಕತ್ತಿ, ಭೀಮಾಶಂಕರ ಮುರಗುಂಡಿ, ಸುನಂದಾ ವಾಲಿಕಾರ, ಸದಾಶಿವ ಪ್ಯಾಟಿ, ಭೀಮಣ್ಣಾ ಕೌಲಗಿ, ಜಟ್ಟೆಪ್ಪ ಮರಡಿ, ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ, ವಿರೂಪಾಕ್ಷ ಬಣಕಾರ, ಆರ್‌.ಟಿ. ಹಿರೇಮಠ, ಉಪನಿರ್ದೇಶಕ ಸಂತೋಷ ಇನಾಮದಾರ, ಕೃಷಿ ವಿಜ್ಞಾನಿ ಡಾ| ಪರಜಾದೆ ಹಾಗೂ ರಾಘವೇಂದ್ರ ಆಚಾರ್ಯ, ರಾಜ್ಯ ರೈತ ಸಲಹಾ ಸಮಿತಿ ಸದಸ್ಯರಾದ ರಾಜಶೇಖರ ನಿಂಬರಗಿ, ಡಾ| ನೇಗಳೂರ, ಕೃಷಿ ನಿರ್ದೇಶಕ ಶಿವುಕುಮಾರ, ರೈತ ಮುಖಂಡರಾದ ತಮ್ಮಣ್ಣಾ ಪೂಜಾರಿ, ಧಾನಮ್ಮಾಗೌಡತಿ ಬಿರಾದಾರ, ಚಂದ್ರಶೇಖರ ರೂಗಿ, ಡಾ| ಹೀನಾ.ಎಂ. ಎಸ್‌, ರೋಗ ಶಾಸ್ತ್ರಜ್ಞರಾದ ಡಾ| ಸೈದಾ ಸಮೀನಾ ಅಂಜುಮ ಇದ್ದರು. ತಾಲೂಕಿನ ತಡವಲಗಾ ಹಿರೇರೂಗಿ, ತಾಂಬಾ, ನಿಂಬಾಳ, ಹೋರ್ತಿ, ಸಾಲೋಟಗಿ, ಝಳಕಿ, ಅಥರ್ಗಾ, ಬೆನಕನ್ನಳ್ಳಿ, ಶಿರಕನ್ನಳ್ಳಿ ಹಾಗೂ ಸುತ್ತಮುತ್ತಲಿನ ಸುಮಾರು ಸಾವಿರಾರು ರೈತರು ಕಾರ್ಯಾಗಾರದಲ್ಲಿ ಭಾಗಿಯಾದರು. ರಾಘವೇಂದ್ರ ಎಂ ಸ್ವಾಗತಿಸಿದರು. ಬಾಹುರಾಜ ಕಲಘಟಗಿ ನಿರೂಪಿಸಿದರು. ಮಹಾದೇವಪ್ಪ ಏವೋರ ವಂದಿಸಿದರು.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.