ಸತ್ಯಮ್ಮ ತಾಯಿ ದೇಗುಲ ಅಭಿವೃದ್ಧಿ ಭರವಸೆ
Team Udayavani, Apr 16, 2021, 6:14 PM IST
ವಿಜಯಪುರ: ಸತ್ಯಮ್ಮ ತಾಯಿ ದೇವಾಲಯದಅಭಿವೃದ್ಧಿಗೆ ಸಹಕಾರ ನೀಡಿ, ಜನರ ಬೇಡಿಕೆಗೆಸ್ಪಂದಿಸುವುದಾಗಿ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಮುಬಾರಕ್ ತಿಳಿಸಿದರು.
ಪಟ್ಟಣದ 16 ನೇ ವಾರ್ಡ್ನಲ್ಲಿರುವ ಸತ್ಯಮ್ಮತಾಯಿ ದೇವಾಲಯದಲ್ಲಿ ಯುಗಾದಿ ಹಬ್ಬದಂದುಏರ್ಪಡಿಸಲಾಗಿದ್ದ ವಿಶೇಷ ಪೂಜೆಯಲ್ಲಿಪಾಲ್ಗೊಂಡು ಮಾತನಾಡಿ, ದೇವಾಲಯ ಅಭಿವೃದ್ಧಿಮತ್ತು ಇಲ್ಲಿನ ನಿವಾಸಿಗಳ ಮೂಲಭೂತ ಅಗತ್ಯಗಳಬೇಡಿಕೆಗೆ ಸ್ಪಂದಿಸುವುದಾಗಿ ತಿಳಿಸಿ ಯುಗಾದಿಹಬ್ಬದ ಶುಭಾಶಯ ತಿಳಿಸಿದರು.
16ನೇ ವಾರ್ಡ್ನನಿವಾಸಿಗಳು ಮುಬಾರಕ್ ಅವರಿಗೆ ಸನ್ಮಾನಿಸಿಪುರಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲ್ಲುವಂತೆಹಾರೈಸಿದರು. ಈ ಸಂದರ್ಭದಲ್ಲಿ ಯೂತ್ ಬ್ಲಾಕ್ಕಾಂಗ್ರೆಸ್ ಅಧ್ಯಕ್ಷ ಭಾನುಚಂದ್ರ, ಮಂಜುನಾಥ್,ಸುಬ್ರಹ್ಮಣ್ಯ, ಗೋಪಿ ಮತ್ತಿತರರು ಉಪಸ್ಥಿತರಿದ್ದರು.