ರುದ್ರಭೂಮಿ ಚಿತ್ರಣವೇ ಬದಲು; ಶ್ರಮದಾನ ಎಲ್ಲರಿಗೂ ಪ್ರೇರಣೆಯಾಗಲಿ

ಈಗಾಗಲೇ ಶೇ.60 ಭಾಗದಷ್ಟು ಜಾಗವನ್ನು ಕಸ, ಕಳೆ, ಮುಳ್ಳುಕಂಟಿ ಮುಕ್ತಗೊಳಿಸಿ ಚೊಕ್ಕಟಗೊಳಿಸಲಾಗಿದೆ.

Team Udayavani, Oct 5, 2021, 6:22 PM IST

ರುದ್ರಭೂಮಿ ಚಿತ್ರಣವೇ ಬದಲು; ಶ್ರಮದಾನ ಎಲ್ಲರಿಗೂ ಪ್ರೇರಣೆಯಾಗಲಿ

ಮುದ್ದೇಬಿಹಾಳ: ರುದ್ರಭೂಮಿ ಕೈಲಾಸವನವನ್ನು ಸ್ವಚ್ಛವಾಗಿಟ್ಟುಕೊಂಡಷ್ಟು ದೇವರು ಸಂತೃಪ್ತನಾಗುತ್ತಾನೆ. ರುದ್ರಭೂಮಿಯಲ್ಲೇ ನಮಗೆ ದೇವರು ಸಿಗುತ್ತಾನೆ. ಅಲ್ಲಿರುವುದು ಸುಮ್ಮನೆ, ಇಲ್ಲಿರುವುದು ನಮ್ಮನೆ ಎನ್ನುವ ಮಾತು ಅಕ್ಷರಶಃ ಸತ್ಯವಾಗಿದ್ದು ರುದ್ರನ ವಾಸಸ್ಥಳವಾಗಿರುವ ರುದ್ರಭೂಮಿಯೇ ನಮ್ಮೆಲ್ಲರ ಶಾಶ್ವತ ವಾಸದ ಮನೆ ಎನ್ನುವ ಪ್ರಜ್ಞೆ ಎಲ್ಲರಲ್ಲೂ ಮೂಡಬೇಕು ಎಂದು ತಂಗಡಗಿ ಹಡಪದ ಅಪ್ಪಣ್ಣ ಮಹಾ ಸಂಸ್ಥಾನ ಮಠದ ಪೀಠಾ ಧಿಪತಿ ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮೀಜಿಯವರು ನುಡಿದರು.

ಇಲ್ಲಿನ ಆಲಮಟ್ಟಿ ರಸ್ತೆ ಪಕ್ಕದಲ್ಲಿರುವ ವೀರಶೈವ ಲಿಂಗಾಯತ ಸಮಾಜದ ರುದ್ರಭೂಮಿ ಕೈಲಾಸವನದಲ್ಲಿ ನಡೆದ 9ನೇ ವಾರದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಶ್ರಮದಾನ ಮಾಡುವ ಮೂಲಕ ಎಲ್ಲರಿಗೂ ಪ್ರೇರಣೆ ನೀಡಿ ಅವರು ಮಾತನಾಡಿದರು. ಸ್ವಚ್ಛತಾ ಕಾರ್ಯವನ್ನು ನಾವು ಈ ಸ್ಥಾನಕ್ಕೆ ಬರುವವರೆಗೂ ಮುಂದುವರೆಸಬೇಕು. ನಾವೆಲ್ಲ ಒಂದಿಲ್ಲೊಂದು ದಿನ ಇಲ್ಲಿಗೆ ಬರಲೇಬೇಕು. ಈ ಸ್ಥಳವು ಸ್ವತ್ಛವಾಗಿದ್ದಷ್ಟು ದೇವರು ನಮಗೆ ಸಿಗುತ್ತಾನೆ. ಇದು ಕೈಲಾಸಕ್ಕೆ ಸಮ. ಮಠ ಮಂದಿರಗಳು ಪುಣ್ಯ ಕ್ಷೇತ್ರವಲ್ಲ, ನಾಶವಾಗುವ ದೇಹವನ್ನು ತನ್ನೊಡಲಲ್ಲಿ ಸಂರಕ್ಷಿಸಿಕೊಳ್ಳುವ ಈ ಜಾಗವೇ ಪುಣ್ಯ ಕ್ಷೇತ್ರ ಎಂದು ಸಾಂದರ್ಭಿಕವಾಗಿ ಹೇಳಿದರು.

ವಿಜಯಪುರ ಜಿಲ್ಲೆಯಲ್ಲಿ 18 ಎಕರೆಯಷ್ಟು ವಿಶಾಲವಾದ ರುದ್ರಭೂಮಿ ಹೊಂದಿರುವ ಜಾಗವನ್ನು ಮುದ್ದೇಬಿಹಾಳ ಹೊರತು ಬೇರೆಲ್ಲೂ ನೋಡಿಲ್ಲ. ಇದನ್ನು ರಕ್ಷಣೆ ಮಾಡಿ ಕಾಪಾಡುವ ಹೊಣೆ ಹಿರಿಯರು, ಯುವಜನತೆಯ ಮೇಲಿದೆ. ಜನಸಂಖ್ಯೆ ಜಾಸ್ತಿ ಆದಂತೆಲ್ಲ 18 ಎಕರೆ ಜಾಗವೂ ಸಾಲೋದಿಲ್ಲ. ವೀರಶೈವ ಲಿಂಗಾಯತ ಸಮಾಜದವರು ನಡೆಸುತ್ತಿರುವ ಸ್ವತ್ಛತಾ ಕಾರ್ಯ ಮುಂದಿನ ಪೀಳಿಗೆಗೆ ಮಾರ್ಗದರ್ಶಕವಾದದ್ದು ಎಂದರು. ಸ್ವಚ್ಛತಾ ಕಾರ್ಯಕ್ಕೆ ನೆರವಾಗುತ್ತಿರುವ ದಾಸೋಹಿಗಳದ್ದು ಪುಣ್ಯದ ಕಾರ್ಯ. ಇವರಾರೂ ತಮ್ಮ ಹೆಸರು ಹೇಳಿಕೊಂಡಿಲ್ಲ.

ಹೇಳಿಕೊಂಡು ದಾನ ಮಾಡುವವರ ನಡುವೆ ಗುಪ್ತದಾನ ಮಾಡುವ ಇಂಥ ಪುಣ್ಯವಂತರು ಇರುವುದು ಸಂತಸ ಪಡುವಂಥದ್ದು. ಹೆಸರಿಗೆ ಅಪೇಕ್ಷೆ ಪಡದೆ ಶ್ರಮದಾನಕ್ಕೆ ಮಹತ್ವ ನೀಡುವ ಗುರಿ ಹೊಂದಿರುವುದು ಇತರರಿಗೂ ಮಾದರಿಯಾಗಲಿ ಎಂದರು. ಸಮಾಜದ ಪದಾಧಿಕಾರಿ ಸಂಗಮೇಶ ನಾವದಗಿಯವರು ಕೈಲಾಸವನ ಅಭಿವೃದ್ಧಿಗೆ ದೇಣಿಗೆ ನೀಡಿದ ದಾನಿಗಳ ಹೆಸರುಗಳನ್ನು ಎಲ್ಲರಿಗೂ ಓದಿ ಹೇಳಿದರು. ಸಮಾಜದ ಇನ್ನೋರ್ವ ಪದಾಧಿಕಾರಿ ಸಿದ್ದರಾಜ
ಹೊಳಿಯವರು ಕಾರ್ಯಕ್ರಮ ನಿರ್ವಹಿಸಿದರು.

ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ ಅಧ್ಯಕ್ಷತೆಯಲ್ಲಿ ನಡೆದ ಸ್ವತ್ಛತಾ ಕಾರ್ಯದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ, ಜಿಒಸಿಸಿ ಬ್ಯಾಂಕ್‌ನ ಜಿಲ್ಲಾಧ್ಯಕ್ಷ ಅರವಿಂದ ಹೂಗಾರ, ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಪುರಸಭೆ ಸದಸ್ಯರಾದ ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಭಾರತಿ ಪಾಟೀಲ, ಹಡಪದ ಸಮಾಜದ 50ಕ್ಕೂ ಹೆಚ್ಚು ಸದಸ್ಯರು ಸೇರಿದಂತೆ ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳ ನೂರಾರು ಸದಸ್ಯರು ಪಾಲ್ಗೊಂಡು ಕಸ, ಕಳೆ, ಮುಳ್ಳುಕಂಟಿ ಕೀಳುವ ಮೂಲಕ ಅಂದಾಜು 2-3 ಗಂಟೆವರೆಗೆ ಶ್ರಮದಾನ ಮಾಡಿದರು.

ರುದ್ರಭೂಮಿಯ ಚಿತ್ರಣವೇ ಬದಲು
ಕಳೆದ 8 ರವಿವಾರಗಳದಂದು ಸಮರೋಪಾದಿಯಲ್ಲಿ ನಡೆದ ಶ್ರಮದಾನದ ಫಲವಾಗಿ ರುದ್ರಭೂಮಿಯ ಚಿತ್ರಣವೇ ಬದಲಾಗತೊಡಗಿದೆ. ಬಡಾವಣೆಯೊಂದರ ನಿವೇಶನ ಮಾದರಿಯಲ್ಲಿ ಕಚ್ಚಾ ರಸ್ತೆಗಳು ನಿರ್ಮಾಣಗೊಳ್ಳುತ್ತಿವೆ. ಪ್ಲ್ಯಾಂಟೇಶನ್‌ ಮಾದರಿಯಲ್ಲಿ ಗಿಡಗಳನ್ನು ಗುರ್ತಿಸಿ ಸಂರಕ್ಷಿಸಲಾಗುತ್ತಿದೆ. ಅಲ್ಲಲ್ಲಿ ಕಸದ ಡಬ್ಬಿ ಇಟ್ಟು ಸ್ವತ್ಛತೆಯ ಮಹತ್ವ ತಿಳಿಸಿಕೊಡಲಾಗುತ್ತಿದೆ.

ಈಗಾಗಲೇ ಶೇ.60 ಭಾಗದಷ್ಟು ಜಾಗವನ್ನು ಕಸ, ಕಳೆ, ಮುಳ್ಳುಕಂಟಿ ಮುಕ್ತಗೊಳಿಸಿ ಚೊಕ್ಕಟಗೊಳಿಸಲಾಗಿದೆ. ಇನ್ನುಳಿದ ಶೇ.40ರಷ್ಟು ಭಾಗದಲ್ಲಿ ಮುಳ್ಳುಕಂಟಿ ಹೆಚ್ಚಾಗಿರುವುದರಿಂದ ಜೆಸಿಬಿ ಬಳಸಿ ಅವೆಲ್ಲವನ್ನೂ ತೆರವುಗೊಳಿಸಲಾಗುತ್ತಿದೆ. ಜಮೀನಿನ ಕೊನೇಯ ಭಾಗದಿಂದ ಅಂತ್ಯ ಸಂಸ್ಕಾರ ನಡೆಸಿಕೊಂಡು ಬರಲು ಯೋಜನೆ ರೂಪಿಸಲಾಗಿದೆ. ಒಂದೂವರೆ ತಿಂಗಳ ಹಿಂದೆ ರುದ್ರಭೂಮಿಗೆ ಬಂದು ಹೋದವರು ಇಂದು ಬಂದು ನೋಡಿದರೆ ಇದು ಹಿಂದೆ ನೋಡಿದ ರುದ್ರಭೂಮಿನಾ ಅಥವಾ ಸುಂದರ ಉದ್ಯಾನವನವಾ ಎನ್ನುವಷ್ಟರ ಮಟ್ಟಿಗೆ ಬದಲಾವಣೆ ಆಗಿದೆ.

ಸಮಾಜದ ರುದ್ರಭೂಮಿಯಲ್ಲಿ ಅತಿಕ್ರಮಣ, ಮಲ ಮೂತ್ರ ಮಾಡುವುದು ಸೇರಿದಂತೆ ಯಾವುದೇ ಅನಪೇಕ್ಷಿತ ಚಟುವಟಿಕೆಗಳಿಗೆ ಆಸ್ಪದ ನೀಡುವುದಿಲ್ಲ. 18 ಎಕರೆ ಜಮೀನಿನ ಗಡಿ ಗುರ್ತಿಸಿದ ನಂತರ ಸಂಪೂರ್ಣ ಕಾಂಪೌಂಡ್‌ ನಿರ್ಮಿಸಿ ಸಂರಕ್ಷಿಸಲಾಗುತ್ತದೆ. ರುದ್ರಭೂಮಿಯನ್ನು ಉದ್ಯಾನವನದ ಹಾಗೆ ಕಾಣುವಂತೆ ಮಾಡುವ ಗುರಿ ಸಾಧನೆಯತ್ತ ಗಮನ ಹರಿಸಲಾಗಿದೆ.
ಪ್ರಭುರಾಜ ಕಲಬುರ್ಗಿ,
ಅಧ್ಯಕ್ಷ, ವೀರಶೈವ ಲಿಂಗಾಯತ
ಸಮಾಜ, ಮುದ್ದೇಬಿಹಾಳ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

ganihara

Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.