ಹಳೆ ವಿದ್ಯುತ್ ತಂತಿ ಬದಲಿಸಿ
Team Udayavani, Dec 20, 2021, 6:12 PM IST
ಇಂಡಿ: ತಾಲೂಕಿನಾದ್ಯಂತ ಸುಮಾರು ವರ್ಷಗಳಿಂದ ಹಳೆ ವಿದ್ಯುತ್ ತಂತಿಗಳು ಇಳಿ ಬಿದ್ದಿದ್ದು ಕೂಡಲೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ತಾಲೂಕಾಧ್ಯಕ್ಷ ಬಿ.ಡಿ. ಪಾಟೀಲ ಇಂಡಿ ಉಪ ವಿಭಾಗೀಯ ಅಧಿಕಾರಿ ಸಂಗಮೇಶ ಮೇಡೆದಾರ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ನಂತರ ಮಾತನಾಡಿ ಅವರು, ತಾಲೂಕಿನ ಹಲವಾರು ಗ್ರಾಮಗಳಲ್ಲಿ ಹಳೆ ವಿದ್ಯುತ್ ತಂತಿಗಳು ಜೋತು ಬಿದ್ದು ಸಾರ್ವಜನಿಕರಿಗೆ ಹಾಗೂ ರೈತರ ಕಬ್ಬಿನ ಗಾಡಿಗಳಿಗೆ ತಂತಿಗಳು ಸಿಕ್ಕು ಅನಾಹುತಗಳಾಗುತ್ತಲಿವೆ. ಆಗುವ ಅನಾಹುತ ತಪ್ಪಿಸಬೇಕು. ಅಧಿಕಾರಿಗಳು ಶೀಘ್ರದಲ್ಲೇ ಸರ್ವೇ ಮಾಡಿಸಿ ಸಮಸ್ಯೆಗಳು ಆಗದಂತೆ ನೋಡಿಕೊಳ್ಳಬೇಕು. ತಾಲೂಕಿನಾದ್ಯಂತ ಇಳು ಬಿದ್ದ ತಂತಿಗಳು ಮೇಲಕ್ಕೆ ಎತ್ತಿ ಮುಂದಿನ ಅನಾಹುತ ತಪ್ಪಿಸಬೇಕೆಂದು ಆಗ್ರಹಿಸಿದರು.
ಸಿದ್ದು ಡಂಗಾ, ಅಯೂಬ ನಾಟೀಕಾರ, ಶ್ರೀಕಾಂತ ಪಾಟೀಲ, ಶ್ರೀಶೈಲಗೌಡ ಪಾಟೀಲ. ರಾಜು ಮುಲ್ಲಾ, ಮಹಿಬೂಬ ಬೇವನೂರ, ಮಾಳಪ್ಪ ಹಿರೇಕುರಬರ, ನಿಯಾಝ್ ಅಗರಖೇಡ, ಇರ್ಫಾನ್ ಅಗರಖೇಡ, ಪ್ರಭುಗೌಡ ಪಾಟೀಲ, ನಿಂಗಪ್ಪ ಕಂಠಿಕರ, ಹನುಮಂತ ಕಂಠಿಕರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ