ಗಳಿಕೆ ರಜೆ ಮಂಜೂರಿಗೆ ಆಗ್ರಹಿಸಿ ಶಿಕ್ಷಕರಿಂದ ಮನವಿ
Team Udayavani, Jan 10, 2022, 6:10 PM IST
ವಿಜಯಪುರ: ಬಿಎಲ್ಒ ಹಾಗೂ ಚೆಕ್ಪೋಸ್ಟ್ ಗಡಿಯಲ್ಲಿ ಕಾರ್ಯನಿರ್ವಹಿಸಿದ ಶಿಕ್ಷಕರುಗಳಿಗೆ ಗಳಿಕೆ ರಜೆ ಮಂಜೂರು ಮಾಡಲು ಸಂಬಂಧಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ತಿಕೋಟಾ, ಬಬಲೇಶ್ವರ ಹಾಗೂ ವಿಜಯಪುರ ಗ್ರಾಮೀಣ ವಲಯದ ಶಿಕ್ಷಕ ಸಂಘ ಹಾಗೂ ನೌಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಬಬಲೇಶ್ವರ, ವಿಜಯಪುರ ನಗರ, ನಾಗಠಾಣ ಮತಕ್ಷೇತ್ರದ ವ್ಯಾಪ್ತಿಯ ಮತಗಟ್ಟೆಯ ವ್ಯಾಪ್ತಿಯಲ್ಲಿ ಶಿಕ್ಷಕರು ಭೂತ್ ಮಟ್ಟದ (ಬಿಎಲ್ಒ) ಅಧಿಕಾರಿಗಳಾಗಿ ವರ್ಷದ 365 ದಿನಗಳ ಕಾಲ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕಾಗಿ ಶಿಕ್ಷಕರು ರಜಾ ರಹಿತ ನೌಕರರೆಂದು ಪರಿಗಣಿಸಿ ಅವರಿಗೆ ವಾರ್ಷಿಕವಾಗಿ 30 ಗಳಿಕೆ ರಜೆ ಮಂಜೂರು ಮಾಡಬೇಕು. ಇದಕ್ಕಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಗಳಿಕೆ ರಜೆ ಮಂಜೂರಾತಿಗೆ ಕ್ರಮ ವಹಿಸಬೇಕು ಎಂದು ಪದಾಧಿಕಾರಿಗಳು ಮನವಿ ಮಾಡಿಕೊಂಡರು.
ಪ್ರಮುಖರಾದ ಉಜ್ವಲ ಬನಸೋಡೆ, ವಿ.ಬಿ. ದಿವಾನಜಿ, ಎಂ.ಎ.ಬಿಸನಾಳ, ಪಿ.ಕೆ.ಪ್ರಭಾಕರ, ಅಲ್ಲಾಭಕ್ಷ ವಾಲೀಕಾರ, ಅರ್ಜುನ ಲಮಾಣಿ, ಹನುಮಂತ ಕೊಣದಿ, ಸಿ.ಟಿ. ಜತ್ತಿ, ಅಶೋಕ ಚನಬಸಗೋಳ, ಎ.ಬಿ. ದಡಕೆ, ಅಶೋಕ ಬೂದಿಹಾಳ, ಆರ್.ಎಂ. ಮೇತ್ರಿ, ಝಡ್.ಐ. ಇಂಡಿಕಾರ, ಬಿ.ಎಸ್. ಮಠ, ಅಶೋಕ ಭಜಂತ್ರಿ, ಆರ್.ಎಸ್. ದಿಕ್ಷಿತ್, ಎಸ್.ಬಿ. ಮಡಸನಾಳ, ಎಲ್. ಎಂ. ಬಡಿಗೇರ, ಸಿದರಾಯ ಅಥಣಿ, ವಿ.ಎಸ್. ಕಳಸಗೊಂಡ, ವೆಂಕಟೇಶ ಕಪಟಕರ, ಆರ್.ಎಸ್. ಮಸಳಿ, ಆರದ ಜಾಧವ, ಎಸ್.ಕೆ. ದೇಶಪಾಂಡೆ, ಎಂ.ಐ. ಕುಡಚಿ, ಐ.ಬಿ. ಅಡಳ್ಳಿ, ಎಸ್.ಬಿ. ಕೊಪ್ಪದ, ಎಂ.ಎಸ್. ಟಕ್ಕಳಕಿ, ಎನ್.ಜಿ. ತೆಗ್ಗಿನಮನಿ, ಪಿ.ಜೆ. ಇನಾಂದಾರ, ಎನ್.ಎಚ್. ಮುಜಾವರ, ಎಸ್. ಎನ್. ಬಾಗಲಕೋಟ, ಪರಸಪ್ಪ ಮಾದರ, ಎಚ್. ಎಂ. ಮುಲ್ಲಾ, ಬಿ.ವೈ. ಮೇಡೆಗಾರ, ಎಸ್.ಎಸ್. ಬಬಲೇಶ್ವರ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
MUST WATCH
ಹೊಸ ಸೇರ್ಪಡೆ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ