ವಿಷಪೂರಿತ ನೀರು ಕುಡಿದು ಹತ್ತು ಕುರಿಗಳ ಸಾವು : ರೈತ ಮಹಿಳೆಗೆ ಬಿಜೆಪಿ ಮುಖಂಡ ಸಾಂತ್ವಾನ
Team Udayavani, Jun 11, 2022, 8:09 PM IST
ಸಿಂದಗಿ : ವಿಷಪೂರಿತ ನೀರು ಕುಡಿದು ಹತ್ತು ಕುರಿಗಳು ಸಾವನ್ನಪ್ಪಿದ ಘಟನೆ ತಾಲೂಕಿನ ಡಂಬಳ ತಾಂಡಾದ ಹೊಲದಲ್ಲಿ ಶನಿವಾರ ನಡೆದಿದೆ.
ತಾಂಡಾದ ರೈತ ಮಹಿಳೆ ಕಾಂತಾಬಾಯಿ ಮೋತಿಲಾಲ ರಾಠೋಡ ಅವರಿಗೆ ಸೇರಿದ ಹತ್ತು ಕುರಿಗಳು ಸಾವನ್ನಪ್ಪಿವೆ. ಹೊಲದ ಕಾವಲಿಯಲ್ಲಿ ರಸಗೊಬ್ಬರದ ಚಿಲ ಬಿದ್ದಿದ್ದು ಅಲ್ಲಿಂದ ಹರಿಯುತ್ತಿರುವ ನೀರು ಕುಡಿದ ಕುರಿಗಳಲ್ಲಿ ಹತ್ತು ಕುರಿಗಳು ಸಾವನ್ನಪ್ಪಿದ್ದು ಇನ್ನುಳಿದ ಎಂಟು ಕುರಿಗಳ ಸ್ಥಿತಿ ಚಿಂತಾಜನಕವಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಯುವ ಮುಖಂಡ ಸಂತೋಷ ಪಾಟೀಲ ಡಂಬಳ ಅವರು ರೈತ ಮಹಿಳೆ ಕಾಂತಾಬಾಯಿ ಮೋತಿಲಾಲ ರಾಠೋಡ ಅವರಿಗೆ ಸಾಂತ್ವಾನ ಹೇಳಿದರು. ಬಡವರಾಗಿದ್ದ ಅವರಿಗೆ 10 ಸಾವಿರ ರೂ. ಸಹಾಯಧನ ನೀಡಿದರು. ಸರಕಾರದಿಂದ ಬರುವ ಸಹಾಯಧನವನ್ನು ಕೊಡಿಸುವಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಿವಣ್ಣ ಮಾರಲಬಾವಿ, ಗೌಡಣ್ಣ ಆಲಮೇಲ, ರಮೇಶ ವಂದಾಲ, ಸೈಪೋನ ಬಾಗವಾನ, ಅಮ್ಮೋಗಿ ಜೈನಾಪುರ, ಕಾಮಣ್ಣ ನಾಯ್ಕೋಡಿ ಇದ್ದರು.
ಇದನ್ನೂ ಓದಿ : ಅತಿ ಹೆಚ್ಚು ಗಳಿಕೆಯತ್ತ ಕಮಲ್ ಹಾಸನ್ ನಟನೆಯ “ವಿಕ್ರಮ್’ ಸಿನಿಮಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
Congress ಅಭ್ಯರ್ಥಿ ಡಿ.ಕೆ. ಸುರೇಶ್ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ
Congress ವಿರುದ್ಧ ಬಿಜೆಪಿ ಕ್ಯೂಆರ್ ಕೋಡ್ ಸಮರ
MUST WATCH
ಹೊಸ ಸೇರ್ಪಡೆ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ