ಬಕ್ರೀದ್ಗೆ ಗೋವಿನ ಜತೆ ಸೈತಾನ್ನ ಬಲಿ!
Team Udayavani, Jun 17, 2018, 6:20 AM IST
ವಿಜಯಪುರ: ಮುಂದಿನ ಎರಡು ತಿಂಗಳಲ್ಲಿ ಬಕ್ರೀದ್ ಹಬ್ಬ ಬರಲಿದ್ದು, ನಾವು ಗೋವು ಬಲಿ ಕೊಡುವ ಹಂತದಲ್ಲಿ ಪ್ರತಿರೋಧ ವ್ಯಕ್ತವಾಗುತ್ತದೆ. ಆಗ ಸೈತಾನನ ಬಲಿ ಕೊಡುವ ಸ್ಥಿತಿ ಬರಬಹುದು. ಇದಕ್ಕಾಗಿ ಈಗಲೇ ಎಚ್ಚರಿಕೆಯಿಂದ ಇರಬೇಕೆಂದು ಹಜರತ್ ಸೈಯ್ಯದ್ ತನ್ವೀರ್ ಪೀರಾ ಹಾಶ್ಮಿ ನೀಡಿರುವ ಧರ್ಮ ಸಂದೇಶ ವಿವಾದ ಸೃಷ್ಟಿಸಿದೆ.
ಶನಿವಾರ ನಗರದಲ್ಲಿ ದಖನಿ ಮೈದಾನದಲ್ಲಿ ರಂಜಾನ್ ಸಾಮೂಹಿಕ ಪ್ರಾರ್ಥನೆ ಬಳಿಕ ಧರ್ಮ ಸಂದೇಶ ನೀಡಿದ ಹಜರತ್ ಸೈಯ್ಯದ್, ಬಕ್ರೀದ್ ಹಬ್ಬದಲ್ಲಿ ಗೋವು ಬಲಿ ಕೊಡುವ ಹಂತದಲ್ಲಿ ಎದುರಾಗುವ ತಕರಾರಿನಿಂದ ಮತ್ತೂಂದು
ಬಲಿದಾನ ಹಾಗೂ ಗಲಭೆ ಉಂಟಾಗುವ ಸಾಧ್ಯತೆಯಿದೆ. ಈ ಕುರಿತು ನೀವೆಲ್ಲ ಎಚ್ಚರದಿಂದ ಇರಬೇಕೆಂದು ನೀಡಿದ
ಹೇಳಿಕೆ ವಿವಾದ ಸೃಷ್ಟಿಸಿದೆ.
ತಮ್ಮ ಹೇಳಿಕೆ ವಿವಾದ ಸೃಷ್ಟಿಸುತ್ತಿದ್ದಂತೆ ಕೆಲವು ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡಿರುವ ಅವರು, ಸೈತಾನ್ ಎಂಬ ಪದವನ್ನು ಯಾವುದೇ ಓರ್ವ ವ್ಯಕ್ತಿಯನ್ನಾಗಲಿ, ಶಾಸಕ ಯತ್ನಾಳ ಅವರನ್ನು ಗುರಿಯಾಗಿಸಿಕೊಂಡು ಹೇಳಿಲ್ಲ. ಬದಲಾಗಿ ಬಕ್ರೀದ್ ಬಲಿದಾನದ ದಿನ ಸಮಾಜಕ್ಕೆ ಮಾರಕವಾಗಿರುವ ಸೈತಾನನ ಕುರಿತು ಎಚ್ಚರ ಇರಲಿ ಎಂದು
ಹೇಳಿದ್ದೇನೆ ಎಂದಿದ್ದಾರೆ.
ಮತೀಯ ಭಾವನೆಗೆ ಧಕ್ಕೆ ತರುವ ಕೆಟ್ಟ ಕೆಲಸ ಮಾಡುವ ಯಾವುದೇ ವ್ಯಕ್ತಿ, ಎಲ್ಲೇ ಇದ್ದರೂ ಅವನು ಸೈತಾನ್ ಎಂದು ಹೇಳಿದ್ದೇನೆ. ಮತೀಯ ಗಲಭೆಗೆ ಅವಕಾಶ ನೀಡದಂತೆ ಸಮಾಜದ ಜನರು ಎಚ್ಚರದಿಂದ ಇರಲು ಮನವಿ
ಮಾಡಿಕೊಂಡಿದ್ದೇನೆಂದು ಸ್ಪಷ್ಟೀಕರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್