ನೀರಿನ ಸಮಸ್ಯೆ ಪರಿಹರಿಸಿ
Team Udayavani, Dec 15, 2021, 6:01 PM IST
ಇಂಡಿ: ಇಂಡಿ ತಾಲೂಕಿನ ಸಮಗ್ರ ನೀರಾವರಿ ಯೋಜನೆಗಳ ಕುರಿತು ಶಾಸಕ ಯಶವಂತರಾಯಗೌಡ ಪಾಟೀಲ ಬೆಳಗಾವಿಯ ಛಳಿಗಾಲ ಅಧಿವೇಶನಲ್ಲಿ ಧ್ವನಿ ಎತ್ತಿದರು.
ನಮ್ಮ ತಾಲೂಕಿನ ಜನ ಕುಡಿಯುವ ನೀರಿಗೆ ಪರಿತಪಿಸವಂತಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದು ನಮ್ಮ ಪಾಲಿನ ನೀರು ಹಂಚಿಕೆ ಮಾಡಬೇಕು. ನೀರಾವರಿ ಯೋಜನೆ ಕುರಿತು ಕಳೆದ ಎರಡು ವರ್ಷದಿಂದ ಪ್ರಶ್ನೆ ಕೇಳುತ್ತ ಬಂದಿದ್ದೇನೆ. ಕುಡಿಯುವ ನೀರಿನ ತೊಂದರೆ ಅನುಭವಿಸುವಂತ ಪ್ರದೇಶ ನಮ್ಮದಾಗಿದ್ದು, ಅಂತಹ ಪ್ರದೇಶಕ್ಕೆ ನೀರು ಬಂದರೆ ಸಮಸ್ಯೆ ಪರಿಹಾರವಾಗಿ ಅನುಕೂಲವಾಗುತ್ತದೆ. ಈ ಕುರಿತು ಸದನದಲ್ಲಿ ಅರ್ಧ ಘಂಟೆವರೆಗೆ ಚರ್ಚೆ ಕೂಡಾ ನಡೆದಿದ್ದು ಮಾಸ್ಟರ್ ಪ್ಲ್ಯಾನ್ ಕಮಿಟಿಯಲ್ಲಿ ನಿಗದಿ ಪ್ರಕಾರ ನಮಗೆ ನೀರು ಹಂಚಿಕೆ ಮಾಡಿ ಎಂದು ಸಭಾ ಅಧ್ಯಕ್ಷರಿಗೆ ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ನೀರಾವರಿ ಸಚಿವ ಸಚಿವ ಗೋವಿಂದ ಕಾರಜೋಳ, ಇಂಡಿ ಭಾಗದ ನೀರಾವರಿ ಯೋಜನೆಗೆ 3000ಕ್ಕೂ ಅಧಿಕ ಕೊಟಿ ಹಣ ವ್ಯಯವಾಗಲಿದ್ದು ನೀರಾವರಿ ಯೊಜನೆಗಳಿಗೆ ಹಂತ ಹಂತವಾಗಿ ಅನುದಾನ ನೀಡಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ