ಆಲಮಟ್ಟಿ-ಯಾದಗಿರಿ ರೈಲು ಆರಂಭಿಸಿ

•ಕೇಂದ್ರ ಬಜೆಟ್‌ನಲ್ಲಿ ರೈಲು ಮಾರ್ಗ ಅನುಷ್ಠಾನ ಘೋಷಣೆಗೆ ಹೋರಾಟಗಾರರ ಒತ್ತಾಯ

Team Udayavani, Jun 25, 2019, 9:03 AM IST

vp-tdy-1..

ಮುದ್ದೇಬಿಹಾಳ: ರೈಲ್ವೆ ಸಚಿವರು, ಸಂಸದರಿಗೆ ಬರೆದ ಮನವಿಯನ್ನು ಆಲಮಟ್ಟಿ ಯಾದಗಿರಿ ರೈಲ್ವೆ ಹೋರಾಟಗಾರರು ತಹಶೀಲ್ದಾರ್‌ ವಿನಯಕುಮಾರ ಪಾಟೀಲಗೆ ಸಲ್ಲಿಸಿದರು.

ಮುದ್ದೇಬಿಹಾಳ: ಈ ಭಾಗದ 85 ವರ್ಷಗಳಷ್ಟು ಹಳೆ ಬೇಡಿಕೆಯಾಗಿರುವ ಆಲಮಟ್ಟಿ ಮುದ್ದೇಬಿಹಾಳ ಯಾದಗಿರಿ ನೂತನ ರೈಲು ಮಾರ್ಗ ಅನುಷ್ಠಾನದ ಕುರಿತು ಜು. 7ರಂದು ಕೇಂದ್ರ ಸರ್ಕಾರ ಮಂಡಿಸಲಿರುವ ಬಜೆಟ್‌ನಲ್ಲಿ ಘೋಷಿಸಬೇಕು ಎಂದು ಒತ್ತಾಯಿಸಿ ಸೋಮವಾರ ಪಟ್ಟಣದಲಿ ಆಲಮಟ್ಟಿ ಯಾದಗಿರಿ ರೈಲು ಮಾರ್ಗ ನಿರ್ಮಾಣ ಹೋರಾಟ ವೇದಿಕೆ ನೇತೃತ್ವದಲ್ಲಿ ದ್ಯಾಮವ್ವನ ಕಟ್ಟೆಯಿಂದ ಮಿನಿ ವಿಧಾನಸೌಧವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಮಿನಿ ವಿಧಾನಸೌಧಕ್ಕೆ ಆಗಮಿಸಿದ ರ್ಯಾಲಿ ಉದ್ದೇಶಿಸಿ ವೆಂಕನಗೌಡ ಪಾಟೀಲ, ಬಿ.ಪಿ. ಕುಲಕರ್ಣಿ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಗಿರೀಶಗೌಡ ಪಾಟೀಲ, ಅರವಿಂದ ಕೊಪ್ಪ, ಶಿವಪುತ್ರ ಅಜಮನಿ, ಬಸವರಾಜ ನಂದಿಕೇಶ್ವರಮಠ ಮುಂತಾದವರು ಮಾತನಾಡಿದರು.

1933ರಲ್ಲಿ ಆಲಮಟ್ಟಿಯ ಗೈಡ್‌ ರೈಲ್ ರೋಡ್‌ ಲೈನ್ಸ್‌ ಕಂಪನಿ ಮೊದಲ ಹಂತದ ರೈಲು ಮಾರ್ಗ ಪ್ರಾರಂಭಿಸಿತ್ತು. ಆಲಮಟ್ಟಿಯಿಂದ ಹುಲ್ಲೂರವರೆಗೂ ಅಂದಾಜು 8-10 ಕಿ.ಮೀ.ವರೆಗೆ ಕೆಲಸವನ್ನೂ ಮಾಡಲಾಗಿತ್ತು. ಇಂದಿಗೂ ಅಲ್ಲಲ್ಲಿ ಕೆಲಸದ ಕುರುಹುಗಳು ಕಂಡು ಬರುತ್ತವೆ. ನಂತರ ಸ್ವಾತಂತ್ರ್ಯ ಸಂಗ್ರಾಮ ಏರುಗತಿ ಪಡೆದುಕೊಂಡಿದ್ದರಿಂದ ಕೆಲಸ ಸ್ಥಗಿತಗೊಂಡಿತ್ತು. 1999ರಲ್ಲಿ ಬೇಡಿಕೆ ಪರಿಗಣಿಸಿದ ಆಗಿನ ಕೇಂದ್ರ ಸರ್ಕಾರ ರೈಲ್ವೆ ಇಲಾಖೆ ಮೂಲಕ ಅಂದಾಜು ಪತ್ರಿಕೆಯನ್ನೂ ತಯಾರಿಸಿ 302 ಕೋಟಿ ರೂ. ನಿಗದಿಪಡಿಸಿತ್ತು. 2004ರಲ್ಲಿ ಕರ್ನಾಟಕ ಸರ್ಕಾರ ಈ ಬಗ್ಗೆ ಕೇಂದ್ರ ಸರ್ಕಾರಕ್ಕೂ ಪತ್ರ ಬರೆದಿತ್ತು. 1998ರಿಂದ ಇತ್ತೀಚಿನವರೆಗೆ ಹಲವು ಹೋರಾಟ ನಡೆದರೂ ಮಾರ್ಗದ ಅನುಷ್ಠಾನದ ಬಗ್ಗೆ ಯಾವುದೇ ಸಕಾರಾತ್ಮಕ ಸ್ಪಂಧನೆ ದೊರಕುತ್ತಿಲ್ಲ ಎಂದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಗತಿಸಿದರೂ ಇದುವರೆಗೂ ನಮ್ಮ ಬೇಡಿಕೆ ಈಡೇರಿಲ್ಲ. ಇದಕ್ಕೆ ಈ ಭಾಗದ ಜನಪ್ರತಿನಿಧಿಗಳ ನಿಷ್ಕಾಳಜಿಯೇ ಪ್ರಮುಖ ಕಾರಣ. ಈ ಬಾರಿ ತಾರ್ಕಿಕ ಅಂತ್ಯ ಕಾಣಿಸಲು ಮತ್ತೇ ಹೋರಾಟ ಕೈಗೆತ್ತಿಕೊಂಡು ಸಮಾಜಸೇವಕ ಗಿರೀಶಗೌಡ ಪಾಟೀಲ, ಶಿವನಗೌಡ ಬಿರಾದಾರ, ಶಿವಪುತ್ರ ಅಜಮನಿ, ಗುರುಸ್ವಾಮಿ ಬೂದಿಹಾಳಮಠ ಇವರ ಜೊತೆ ಮಾರ್ಗವ್ಯಾಪ್ತಿಯ ಪ್ರಮುಖ ನಗರಗಳಿಗೆ ತೆರಳಿ ಬೇಡಿಕೆ ಅವಶ್ಯಕತೆ ಮನವರಿಕೆ ಮಾಡಿಕೊಟ್ಟು, ಅಲ್ಲಲ್ಲಿ ಹೋರಾಟ ಸಮಿತಿ ರಚಿಸಿ ಕೇಂದ್ರ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಲಾಗುತ್ತಿದೆ. ಇದಕ್ಕೆ ಸಾಕಷ್ಟು ಜನಬೆಂಬಲ ಸಿಕ್ಕಿದೆ ಎಂದು ನಂದಿಕೇಶ್ವರಮಠ ಹೇಳಿದರು.

ಈ ವೇಳೆ ಹೋರಾಟಗಾರರ ಮನವಿ ಸ್ವೀಕರಿಸಿ ಮಾತನಾಡಿದ ಹುಬ್ಬಳ್ಳಿ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಎಂ.ಎಸ್‌.ಪಾಟೀಲ, ರಾಜ್ಯದ ಎಲ್ಲ ಸಂಸದರನ್ನು ಬೆಂಗಳೂರಿನಲ್ಲಾಗಲಿ, ದೆಹಲಿಯಲ್ಲಾಗಲಿ ಭೇಟಿ ಮಾಡಿ ಈ ಮಾರ್ಗದ ಅವಶ್ಯಕತೆ ಮನವರಿಕೆ ಮಾಡಿಕೊಟ್ಟು ಬೇಡಿಕೆ ಈಡೇರಿಸಲು ಶಕ್ತಿ ಮೀರಿ ಶ್ರಮಿಸುವ ಭರವಸೆ ನೀಡಿದರು.

ಪ್ರಯೋಜನಗಳೇನು?: ಈ ಮಾರ್ಗದ ಅನುಷ್ಠಾನದಿಂದ ವಾಣಿಜ್ಯ ಬೆಳೆಗಳಾದ ತೊಗರಿ, ಭತ್ತ, ಗೋಧಿ, ಕಡಲೆ, ಮೆಕ್ಕೆಜೋಳ, ಜೋಳ, ಸಜ್ಜೆ, ಖನಿಜ ಉತ್ಪನ್ನಗಳಾದ ಫರಸಿ ಕಲ್ಲು, ಸಿಮೆಂಟ್, ಗ್ರಾನೈಟ್, ಬೀಸುವ ಕಲ್ಲು, ಸಿಮೆಂಟ್ ಕಚ್ಚಾ ಪದಾರ್ಥ ಮುಂತಾದವುಗಳನ್ನು ವಿದೇಶಕ್ಕೆ ಕಳಿಸಬಹುದು. ಡೀಸೆಲ್, ಪೆಟ್ರೋಲ್ ಬೆಲೆ ಹೆಚ್ಚಾಗಿದ್ದರಿಂದ ಕಡಿಮೆ ಖರ್ಚಿನಲ್ಲಿ ರೈಲು ಮೂಲಕ ಸಂಚರಿಸಲು ಈ ಭಾಗದ ಜನರಿಗೆ ಹೆಚ್ಚು ಅನುಕೂಲ ಆಗುತ್ತದೆ. ಈ ಭಾಗದ ಪ್ರವಾಸೋದ್ಯಮವೂ ಬೆಳೆಯುತ್ತದೆ. ವಿಶಾಖಪಟ್ಟಣದಿಂದ ಗೋವಾದವರೆಗಿನ ಎರಡು ಪ್ರಮುಖ ಸಾಗರಗಳನ್ನು ಒಂದುಗೂಡಿಸುವ ಮಾರ್ಗವಾಗಲಿದೆ ಎಂದು ತಿಳಿಸಿ ಬೇಡಿಕೆ ಈಡೇರಿಕೆಯ ಅವಶ್ಯಕತೆ ಮನವರಿಕೆ ಮಾಡಿಕೊಡುವ ಕೇಂದ್ರ ರೈಲ್ವೆ ಸಚಿವರಿಗೆ ಬರೆದ ಮನವಿಯನ್ನು ತಹಶೀಲ್ದಾರ್‌ ವಿನಯಕುಮಾರ ಪಾಟೀಲ ಮೂಲಕ ಸಲ್ಲಿಸಲಾಯಿತು.

ಪ್ರಮುಖರಾದ ಪ್ರಭು ಕಡಿ, ಕಾಶೀಬಾಯಿ ರಾಂಪುರ, ಗೌರಮ್ಮ ಹುನಗುಂದ, ಶಿಲ್ಪಾ ಶರ್ಮಾ, ಎಸ್‌.ಪಿ. ಬಾದರಬಂಡಿ, ಶಂಕ್ರಪ್ಪ ಹಡಪದ, ಎ.ಸಿ. ಹಿರೇಮಠ, ಎಸ್‌.ಆರ್‌. ಕುಲಕರ್ಣಿ, ಎಸ್‌.ಕೆ. ಕತ್ತಿ, ರಾಜು ಬಳ್ಳೊಳ್ಳಿ, ಶೇಖರ ಹಿರೇಮಠ, ರವೀಂದ್ರ ಬಿರಾದಾರ, ಉದಯ ರಾಯಚೂರ, ಸುಭಾಷ್‌ ಕಾಳಗಿ, ಆರ್‌.ಬಿ. ದೇಸಾಯಿ, ಸಂಜೀವಕುಮಾರ ಓಸ್ವಾಲ್, ಜಗದೀಶ ಪಂಪಣ್ಣವರ, ರಾಜಶೇಖರ ಹೊಳಿ, ವರ್ತಕರು, ಮಾಜಿ ಸೈನಿಕರು, ವಿವಿಧ ಸಂಘಟನೆಗಳ ಸದಸ್ಯರು, ಮಹಿಳೆಯರು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

ganihara

Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.