ಕಲ್ಲು ಪುಡಿ ಘಟಕಗಳೇ ಮಾರಕ


Team Udayavani, Feb 23, 2019, 9:30 AM IST

vij-01.jpg

ವಿಜಯಪುರ: ಮನೆ ಬಾಗಿಲು ತೆಗೆಯಂಗಿಲ್ಲ. ಹೊರಗೆ ಬಂದರೆ ಮುಖಕ್ಕೆ ಬಟ್ಟೆ ಕಟ್ಟಿಕೊಳ್ಳಬೇಕು. ನಿತ್ಯವೂ ಕೆಮ್ಮಿನ ಔಷಧ ತರಬೇಕು, ಬೀಗರು-ಬಿಜ್ಜರು ಬಂದರೆ ಎರಡು ದಿನವೂ ಇರುವುದಿಲ್ಲ. ನಮ್ಮ ಬದುಕೇ ನರಕಯಾತನೆ. ನಮ್ಮ ಗೋಳು ಕೇಳುವವರಿಲ್ಲ. ಎಲ್ಲರೂ ಉದ್ಯಮಿಗಳ ಪರವಾಗೇ
ಇದ್ದಾರೆ. ಇಂತಹ ನರಕಯಾತನೆಯಲ್ಲಿ ಬಡವರು ಬದುಕುವುದು ಅನಿವಾರ್ಯವಾಗಿದೆ… ಇದು ನಗರ ವ್ಯಾಪ್ತಿಯ ಗಾಂಧಿನಗರ, ಹಮಾಲರ ಕಾಲೋನಿ, ಬಸವನಗರ, ಯೋಗಾಪುರ ಕಾಲೋನಿ, ಸ್ಪಿನ್ನಿಂಗ್‌ಮಿಲ್‌ ತಾಂಡಾ, ಭಾವಿಕಟ್ಟಿ ತಾಂಡಾ ಸೇರಿದಂತೆ ಸುಮಾರು ನಾಲ್ಕೈದು
ಬಡಾವಣೆಯ ಸುಮಾರು 22 ಸಾವಿರಕ್ಕೂ ಹೆಚ್ಚು ಜನರ ಸಮಸ್ಯೆ. ಈ ಗೋಳು ಇಂದು-ನಿನ್ನೆಯದಲ್ಲ. 

ಕಳೆದ 10 ವರ್ಷಗಳಿಂದಲೂ ಇಲ್ಲಿನ ಜನರು ಅದೇ ನರಕಯಾತನೆಯಲ್ಲಿ ಬದುಕುತ್ತಿದ್ದಾರೆ. ಸಮಸ್ಯೆ ಹೇಳಿಕೊಂಡರೂ ಕ್ರಮ ಕೈಗೊಳ್ಳುವ ದಿಟ್ಟತನ ಯಾರೂ ಎಂಬುದು ಇಲ್ಲಿನ ಜನರ ಆಕ್ರೋಶ.

 ಮಾರಕವಾದವು ಕಲ್ಲುಪುಡಿ ಘಟಕ : ಗಾಂಧಿನಗರ, ಭಾವಿಕಟ್ಟಿ ತಾಂಡಾ, ಯೋಗಾಪುರ ಕಾಲೋನಿ, ಸ್ಪಿನ್ನಿಂಗ್‌ಮಿಲ್‌ ತಾಂಡಾ, ಬಸವನಗರ ಸೇರಿದಂತೆ ಹೆದ್ದಾರಿಯಾಚೆಗೆ ಸುಮಾರು 7,600ಕ್ಕೂ ಹೆಚ್ಚು ಮನೆಗಳಿವೆ. ಯೋಗಾಪುರ, ಗಾಂಧಿನಗರ, ಹಮಾಲರ ಕಾಲೋನಿ ಸೇರಿದಂತೆ ಇಲ್ಲಿನ ಜನರಿಗೆ ವಿವಿಧ ಯೋಜನೆಗಳಡಿ ಸರ್ಕಾರವೇ ಆಶ್ರಯ ಮನೆ ನಿರ್ಮಿಸಿಕೊಟ್ಟಿದೆ. ಇಲ್ಲಿರುವವರೆಲ್ಲರೂ ಅತಿ ಬಡವರೇ. ನಿತ್ಯವೂ ನಗರದ ವಿವಿಧೆಡೆ ದುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ದುಡಿಯದಿದ್ದರೆ ಅವರ ಬದುಕು ಸಾಗಲ್ಲ. ಆದರೆ, ಅವರು ದುಡಿದ ಹಣದಲ್ಲಿ ಶೇ. 30ರಷ್ಟು ಆಸ್ಪತ್ರೆಗೆ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಪ್ರದೇಶಗಳಲ್ಲಿ ಮೊದಲು 15 ರಿಂದ 18 ಕಲ್ಲುಪುಡಿ ಘಟಕಗಳು ಮಾತ್ರ ಇದ್ದವು. ಆದರೆ, ಈಗ ಸುಮಾರು 64ಕ್ಕೂ ಹೆಚ್ಚು ಘಟಕ ಆರಂಭಗೊಂಡಿವೆ. ಪ್ರತಿಯೊಂದು ಘಟಕವೂ ಮಹಾನಗರ ಪಾಲಿಕೆ, ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿಯಮ ಸಂಪೂರ್ಣ ಗಾಳಿಗೆ ತೂರಿವೆ. ಹೀಗಾಗಿ ಈ ಕಲ್ಲುಪುಡಿ ಘಟಕಗಳು, ಜನರ ಬದುಕಿಗೆ ಮಾರಕವಾಗಿವೆ.

ಪರಿಸರ ಹಾನಿ: ಕಲ್ಲುಪುಡಿ ಘಟಕಗಳು ಮುಖ್ಯವಾಗಿ 3 ಇಲಾಖೆ ಅಧೀನದಲ್ಲಿ ಬರುತ್ತವೆ. ಪರವಾನಿಗೆ ಸಹಿತ ಪರಿಸರ ಮಾಲಿನ್ಯವಾಗದಂತೆ ಎಚ್ಚರಿಕೆ ವಹಿಸಬೇಕಾದ ಜವಾಬ್ದಾರಿಯೂ ಈ ಇಲಾಖೆಗಳ ಮೇಲಿದೆ. ಆದರೆ, ಈ ಇಲಾಖೆಗಳ ಅಧಿಕಾರಿಗಳು ತಿಂಗಳಿಗೊಮ್ಮೆ ಕಲ್ಲುಪುಡಿ ಘಟಕಗಳ ಸ್ಮರಿಸುತ್ತಾರೆ. ಅದು ಜೇಬು ತುಂಬಿಸಿಕೊಳ್ಳಲು. ಆ ಘಟಕಗಳ ಮಾಲಿಕರು, ಭೇಟಿಯಾಗದಿದ್ದರೆ, ಪರಿಶೀಲನೆ ಹೆಸರಲ್ಲಿ ಭೇಟಿ ಕೊಡುತ್ತಾರೆ. ಆ ಬಳಿಕ ಮಾಲಿಕರು, ಅಧಿಕಾರಿಗಳನ್ನು ಭೇಟಿ ಮಾಡುತ್ತಾರೆ. ಆಗ ಎಲ್ಲವೂ ಪರಿಸರಮಿತ್ರ ಘಟಕಗಳಾಗುತ್ತವೆ ಎಂಬ ಆರೋಪ ಕೇಳಿ ಬರುತ್ತಿದೆ.

ರಾಷ್ಟ್ರೀಯ ಹೆದ್ದಾರಿ ಮೇಲೆ ನಿಂತು ನೋಡಿದರೆ ಭೂಮಿ-ಆಕಾಶ ಒಂದೇ ಎಂಬಂತೆ ಕಾಣುತ್ತದೆ. ಕಾರಣ, ಇಡೀ ನಾಲ್ಕೈದು ಏರಿಯಾಗಳು, ಸಂಪೂರ್ಣ ಧೂಳಿನಿಂದ ಕೂಡಿರುತ್ತವೆ. ಅದೇ ಧೂಳು ತುಂಬಿದ ಬಡಾವಣೆಯಲ್ಲಿ ಜನರು ಬದುಕು ನಡೆಸುತ್ತಿದ್ದಾರೆ.

ನಿಯಮಗಳಿಗೂ ಧೂಳು: ಕಲ್ಲುಪುಡಿ ಘಟಕ ನಿರ್ವಹಣೆ, ನಿರ್ಮಾಣಕ್ಕೆ ಹಲವು ನಿಯಮಗಳಿವೆ. ಜನವಸತಿ ಪ್ರದೇಶದಿಂದ ಕನಿಷ್ಠ 5 ಕಿ.ಮೀ. ದೂರ ಇರಬೇಕು. ಘಟಕಗಳಿಂದ ಧೂಳು ಬರದಂತೆ, ಘಟಕದ ಬೆಲ್ಟ್‌ಗಳಿಗೆ ನಿರಂತರ ನೀರು ಬಿಡುತ್ತಿರಬೇಕು. ಘಟಕಗಳ ಸುತ್ತಲೂ ವರ್ಷಕ್ಕೆ ನಿಂತಿಷ್ಟು ಸಸಿ ನೆಟ್ಟು ಪರಿಸರ ಕಾಳಜಿ ತೋರಬೇಕು. ಇಲ್ಲದಿದ್ದರೆ ಅಂತಹ ಕಲ್ಲುಪುಡಿ ಘಟಕಗಳ ಪರವಾನಿಗೆ ರದ್ದುಪಡಿಸುವ ಅಧಿಕಾರ, ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳಿಗಿದೆ. ಮುಖ್ಯವಾಗಿ ಮಹಾನಗರ ಪಾಲಿಕೆಯ ಕರ್ತವ್ಯವೂ ಇದರಲ್ಲಿವೆ. 

ಆದರೆ, ಈ ಮೂರು ಇಲಾಖೆಗಳಲ್ಲಿ ಸಮನ್ವಯತೆ ಇಲ್ಲ. ನಮಗೆ ಸಂಬಂಧವಿಲ್ಲ. ಧೂಳು ತಡೆಯಲು ಕ್ರಮ ಕೈಗೊಳ್ಳಬೇಕಿರುವುದು ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಕೆಲಸ ಎಂದು ಇತರೇ ಇಲಾಖೆಯವರು ಬೇಜವಾಬ್ದಾರಿ ತೋರುತ್ತಾರೆ. ಹೀಗಾಗಿ ಕಲ್ಲುಪುಡಿ ಘಟಕಗಳಿಗೆ ವಿಧಿಸಿರುವ ನಿಯಮಗಳೂ ಧೂಳು ತಿನ್ನುತ್ತಿವೆ ಎಂಬ ಅಸಮಾಧಾನ ಜನರದ್ದು.

ಒಮ್ಮೆ ವಾಸ್ತವ್ಯ ಮಾಡಿ ನೋಡಿ ಸ್ವಾಮಿ…

ಗಾಂಧಿನಗರ ಸುತ್ತಲಿನ ಜನರ ಗೋಳು ಆಲಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಂದು ದಿನ ವಾಸ್ತವ್ಯ ಮಾಡಿ ನೋಡಿ ಎಂಬ ಒತ್ತಾಯ ಇಲ್ಲಿನ ಜನರು ಮಾಡುತ್ತಾರೆ. ಒಂದೆಡೆ ಕಲ್ಲುಪುಡಿ ಘಟಕದಿಂದ ಧೂಳು ಇಡೀ
ವಾತಾವರಣ ಕಲುಷಿತಗೊಳಿಸಿದರೆ, ನಿತ್ಯ ಓಡಾಡುವ ಸಾವಿರಾರು ವಾಹನಗಳೂ ಧೂಳೆಬ್ಬಿಸುತ್ತಿವೆ. ಇದರಿಂದ ರಸ್ತೆಗಳೂ ಸಂಪೂರ್ಣ ಹಾಳಾಗಿವೆ. ಅಧಿಕಾರಿಗಳು- ಜನಪ್ರತಿನಿಧಿಗಳು ಕನಿಷ್ಠ ನಾಲ್ಕೈದು ಗಂಟೆ ನಮ್ಮ ಬಡಾವಣೆಗೆ ಬಂದು ಹೋಗಲಿ. ಆಗಲಾದರೂ, ನಿಯಮ ಮೀರಿ ನಡೆಯುತ್ತಿರುವ ಕಲ್ಲುಪುಡಿ ಘಟಕಗಳಿಂದ ಜನರ ಆರೋಗ್ಯ ಮೇಲೆ, ಪರಿಸರದ ಮೇಲಾಗುತ್ತಿರುವ ಹಾನಿಗೆ ಕ್ರಮ ಕೈಗೊಳ್ಳಿ ಎಂಬುದು ಜನರ ಒತ್ತಾಯ.

ಬದುಕು ಅನಿವಾರ್ಯ 
ನಾವು ಐದು ವರ್ಷದಿಂದ ಇಲ್ಲಿ ವಾಸವಾಗಿದ್ದೇವೆ. ನಮ್ಮ ಹೊಲದ ಪಕ್ಕದಲ್ಲೇ ಕಲ್ಲುಪುಡಿ ಘಟಕ ಇವೆ. ಧೂಳು
ಬರದಂತೆ, ಘಟಕದ ಬೆಲ್ಟಗಳಿಗೆ ನೀರು ಹಾಕಬೇಕು. ಆದರೆ, ತೋರಿಸಲು ಮಾತ್ರ ನೀರು ಇಟ್ಟಿರುತ್ತಾರೆ. ಬಳಕೆ ಮಾಡುವುದಿಲ್ಲ. ಹೀಗಾಗಿ ನಿತ್ಯವೂ ಮನೆ, ಬೆಳೆಗಳ ಮೇಲೆ ಧೂಳು ಬಿದ್ದು ಬೆಳೆಯೂ ಬರಲ್ಲ. ಯಾರಿಗೆ ಹೇಳಿದರೂ ಪ್ರಯೋಜನವಿಲ್ಲ. ನಾವು ಅನಿವಾರ್ಯವಾಗಿ ಬದುಕುತ್ತಿದ್ದೇವೆ.  ಸಂತೋಷ ಶಂಕರ ದಳವಾಯಿ, ಬಸವನಗರ ನಿವಾಸಿ-ರೈತ

ಪ್ರತಿ ಮನೆಯಲ್ಲೂ ರೋಗಿ
ಗಾಂಧಿನಗರ ಒಂದರಲ್ಲೇ 1500 ಮನೆಗಳಿವೆ. ಹತ್ತಿಕೊಂಡು ನಾಲ್ಕೈದು ಏರಿಯಾಗಳಿದ್ದು, 7600ಕ್ಕೂ ಮನೆಗಳಿದ್ದು, ಪ್ರತಿಯೊಂದು ಮನೆಯಲ್ಲಿ ಕೆಮ್ಮು, ನೆಗಡಿ, ಅಲರ್ಜಿ ರೋಗಿಗಳಿದ್ದಾರೆ. ವಾರಕ್ಕೊಮ್ಮೆ ಆಸ್ಪತ್ರೆಗೆ ತೋರಿಸಲು 300 ರಿಂದ 500 ಹಾಕುವ ಪರಿಸ್ಥಿತಿ ಇದೆ. ಈ ಸಮಸ್ಯೆಗೆ ಮುಕ್ತಿ ಕೊಡುವ ಗಂಡು ಯಾರೂ ಇಲ್ಲವಾಗಿದೆ. ಎಲ್ಲರೂ ಹಣದ ಹಿಂದೆ ಬಿದ್ದು, ಬಡವರ ಬದುಕು ಹಾಳು ಮಾಡುತ್ತಿದ್ದಾರೆ.
 ಬಾಬು ಎಸ್‌. ಕಡಣಿ, ಗಾಂಧಿನಗರ ನಿವಾಸಿ

ಧೂಳು ಅಪಾಯಕಾರಿ ಧೂಳು, ಆರೋಗ್ಯಕ್ಕೆ ಬಹಳ ಅಪಾಯಕಾರಿ. ಅಸ್ತಮಾ, ಅಲರ್ಜಿ, ಹೃದಯ ಕಾಯಿಲೆ ಬರಲು ಕಾರಣವಾಗುತ್ತದೆ. ಶ್ವಾಸಕೋಶ ಸಂಬಂಧಿತ ಎಲ್ಲ ರೋಗಗಳು ಇದರಿಂದ ಬರುತ್ತವೆ. ಮುಖ್ಯವಾಗಿ ಹೃದಯ ಸಂಬಂಧಿ ರೋಗಿಗಳಿ ಗೆದ್ದರೆ, ರೋಗ ಮತ್ತಷ್ಟು ಉಲ್ಬಣಗೊಳ್ಳುತ್ತದೆ. ಕಲ್ಲುಪುಡಿ ಘಟಕಗಳಿಂದ ಧೂಳು ಹೊರ ಬರದಂತೆ ಎಚ್ಚರಿಕೆ ವಹಿಸಲು ಹಲವು ತಂತ್ರಜ್ಞಾನಗಳಿದ್ದು ಅವುಗಳ ಬಳಕೆ ಮಾಡಬೇಕು. 
 ಡಾ|ಶೀತಲ ಬಾಬುರಾಜೇಂದ್ರ ನಾಯಕ, ಹೃದಯರೋಗ ತಜ್ಞ ವೈದ್ಯರು 

„ವಿಶೇಷ ವರದಿ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

ganihara

Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.