ಕಠಿಣ ನಿರ್ಬಂಧ ಜಾರಿಗೆ ಪೊಲೀಸರ ಹರಸಾಹಸ
Team Udayavani, May 11, 2021, 10:22 AM IST
ಮುದ್ದೇಬಿಹಾಳ: ಸರ್ಕಾರ ಜಾರಿಗೊಳಿಸಿರುವ 14 ದಿನಗಳ ಭಾಗಶಃ ಕೊರೊನಾ ಕರ್ಫ್ಯೂ ಕಠಿಣ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಇಲ್ಲಿನ ಪೊಲೀಸರು ಸೋಮವಾರ ಹರಸಾಹಸ ಪಟ್ಟಿದ್ದಾರೆ.
ಬೆಳಗ್ಗೆಯಿಂದಲೇ ವಾಹನಗಳಲ್ಲಿ ಸಂಚರಿಸುತ್ತಿದ್ದ ಜನರಿಗೆ ಪೊಲೀಸರು ಕಂಡ ಕಂಡಲ್ಲಿ ಲಾಠಿ ರುಚಿ ತೋರಿಸಿದ್ದೂ ಅಲ್ಲದೆ ದ್ವಿಚಕ್ರ, ನಾಲ್ಕು ಚಕ್ರ ವಾಹನಗಳನ್ನು ಸೀಜ್ ಮಾಡಿದ್ದಾರೆ. ಕೆಲವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನೂ ದಾಖಲಿಸಿ ಬಿಸಿ ಮುಟ್ಟಿಸಿದ್ದಾರೆ. ಹಲವರಿಗೆ ದಂಡ ಹಾಕಿ ಎಚ್ಚರಿಕೆ ನೀಡಿ ಕಳಿಸಿದ್ದಾರೆ.
ಪೊಲೀಸರ ಲಾಠಿ ಏಟಿಗೆ ಹೆದರಿ ಬೆಳಗ್ಗೆ 10 ಗಂಟೆ ನಂತರ ಜನ, ವಾಹನಗಳ ಸಂಚಾರ ಇಲ್ಲದೆ ಪಟ್ಟಣದ ಬಹುತೇಕ ಪ್ರದೇಶಗಳು ಬಿಕೋ ಎನ್ನುವುದು ಕಂಡು ಬಂತು. ರವಿವಾರ ರಾತ್ರಿಯೇ ಪೊಲೀಸರು ಸೋಮವಾರದ ಕೊರೊನಾ ಕರ್ಫ್ಯೂ ವೇಳೆ ಏನು ಮಾಡಬೇಕು, ಮಾಡಬಾರದು ಎನ್ನುವ ಕುರಿತು ಪೊಲೀಸ್ ಜೀಪ್ನಲ್ಲಿರುವ ಧ್ವನಿವರ್ಧಕದ ಮೂಲಕ ಜನತೆಗೆ ಮಾಹಿತಿ ರವಾನಿಸಿದ್ದರು.
ಹೀಗಿದ್ದರೂ ಹಠಮಾರಿತನದಿಂದ ಮನೆ ಬಿಟ್ಟು ಅನವಶ್ಯಕವಾಗಿ ಹೊರಗೆ ಬಂದು ಸುತ್ತಾಡುತ್ತಿದ್ದವರಿಗೆ ಬಿಸಿ ಮುಟ್ಟಿಸುವುದು ಪೊಲೀಸರಿಗೆ ಅನಿವಾರ್ಯವಾಗಿತ್ತು. ಹೀಗಾಗಿ ಪ್ರಮುಖ ವೃತ್ತ, ರಸ್ತೆ, ಜನನಿಬಿಡ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರು ಸಿಪಿಐ ಆನಂದ ವಾಘೊ¾àಡೆ, ಪಿಎಸೈ ಮಡಿವಾಳಪ್ಪಗೌಡ ಬಿರಾದಾರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಸರ್ಕಾರ ವಿ ಧಿಸಿದ ನಿರ್ಬಂಧಗಳನ್ನು ಜಾರಿಗೊಳಿಸಲು ಸಾಕಷ್ಟು ಹೆಣಗಿದರು.
ಒಂದೇ ಕಡೆ ಕಾಯಿಪಲ್ಲೆ ಮಾರಾಟ: ಬೆಳಗ್ಗೆ 6ರಿಂದ 10ರವರೆಗೆ ಕಾಯಿಪಲ್ಲೆ, ದಿನಸಿ ಮಾರಾಟಕ್ಕೆ ಅವಕಾಶ ಇದ್ದುದರಿಂದ ವಿಬಿಸಿ ಪ್ರೌಢಶಾಲೆಯ ವಿಶಾಲವಾದ ಮೈದಾನದಲ್ಲಿ ಪುರಸಭೆಯವರು ಕಾಯಿಪಲ್ಲೆ ಹರಾಜು ಮತ್ತು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಿದ್ದರು. ಬಹಳಷ್ಟು ಜನ ಇಲ್ಲೇ ಬಂದು ಸಾಮಾಜಿಕ ಅಂತರ ಪಾಲಿಸಿ ಖರೀದಿಯಲ್ಲಿ ತೊಡಗಿದ್ದರು. ಗುಂಪುಗೂಡುತ್ತಿದ್ದವರನ್ನು ಆಗಾಗ ಪೊಲೀಸರು, ಹೋಮಗಾರ್ಡ್, ಪುರಸಭೆ ಸಿಬ್ಬಂದಿ ಚದರಿಸುತ್ತಿದ್ದರು. ಮಾಸ್ಕ್ ಹಾಕಿಕೊಳ್ಳುವಂತೆ ಎಚ್ಚರಿಕೆ ನೀಡುತ್ತಿದ್ದರು.
ಬೆಳಗ್ಗೆ 10 ಗಂಟೆ ಸಮಯ ಮುಗಿದ ಮೇಲೆ ಹಲವು ಮಾರಾಟಗಾರರು ತಳ್ಳು ಗಾಡಿಯಲ್ಲಿ ಕಾಯಿಪಲ್ಲೆ, ಹಣ್ಣು ಮುಂತಾದವುಗಳನ್ನು ಇಟ್ಟುಕೊಂಡು ಬಡಾವಣೆಗಳಲ್ಲಿ ಸಂಚರಿಸಿ ಸಂಜೆವರೆಗೂ ಮಾರುತ್ತಿರುವುದು ಹಲವೆಡೆ ಕಂಡು ಬಂತು. 10 ಗಂಟೆ ನಂತರ ಎಲ್ಲವೂ ಸ್ತಬ್ಧ: ಪೊಲೀಸರು ಪುರಸಭೆಯ ನೆರವಿನೊಂದಿಗೆ ಮುಖ್ಯ ರಸ್ತೆ ಸಂಪರ್ಕಿಸುವ ಕೆಲವು ಸಂಪರ್ಕ ರಸ್ತೆಗಳನ್ನು ಸಂಚಾರಕ್ಕೆ ಬಂದ್ ಮಾಡಿದ್ದರು. ಇದರಿಂದಾಗಿ ಅನವಶ್ಯಕವಾಗಿ ಸಂಚರಿಸುವವರಿಗೆ ಕಡಿವಾಣ ಹಾಕಿದಂತಾಗಿತ್ತು. ಬೆಳಗ್ಗೆ 10 ಗಂಟೆ ನಂತರ ಎಲ್ಲವೂ ಹೆಚ್ಚು ಕಡಿಮೆ ಸ್ಥಬ್ಧಗೊಂಡಂತಾಗಿತ್ತು.
ಹುಡ್ಕೊàದಲ್ಲಿ ಕೆಲ ಅಂಗಡಿಕಾರರು ಕದ್ದು ಮುಚ್ಚಿ ವ್ಯಾಪಾರ ಮಾಡುತ್ತಿರುವುದನ್ನು ಕಂಡು ಹಿಡಿದ ಪೊಲೀಸರು ಅಲ್ಲಿಗೆ ತೆರಳಿ ಅಂಗಡಿಕಾರರಿಗೆ ಬಿಸಿ ಮುಟ್ಟಿಸಿ ಬಂದ್ ಮಾಡಿಸಿದರು. ಅವಶ್ಯಕ ಸೇವೆ, ಚಿಕನ್, ಮಾಂಸ, ಹಾಲು ಮುಂತಾದವುಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಸ್ತಬ್ಧವಾಗಿತ್ತು. ಮುಖ್ಯ ರಸ್ತೆಯಿಂದ ದೂರ ಇರುವ ಬಡಾವಣೆಗಳಲ್ಲಿ ಮಾತ್ರ ಅಲ್ಲಲ್ಲಿ ಸಣ್ಣ ಪುಟ್ಟ ಅಂಗಡಿಕಾರರು ಅಂಗಡಿ ಓಪನ್ ಇಟ್ಟು ವ್ಯಾಪಾರ ನಡೆಸಿದರು.
ಗ್ರಾಮೀಣ ಭಾಗದಲ್ಲಿ ಮಿಶ್ರ ಪ್ರತಿಕ್ರಿಯೆ: ಪೊಲೀಸರು ಪಟ್ಟಣ ಪ್ರದೇಶದಲ್ಲಿ ನಿರ್ಬಂಧಗಳನ್ನು ಜಾರಿಗೊಳಿಸಲು ಹೆಚ್ಚು ಮುತುವರ್ಜಿ ವಹಿಸಿದ್ದರಿಂದ ಗ್ರಾಮೀಣ ಪ್ರದೇಶಗಳ ಕಡೆಗೆ ಲಕ್ಷé ಕಡಿಮೆ ಆಗಿತ್ತು. ಕೆಲವು ಪ್ರಜ್ಞಾವಂತರು ಸ್ವಯಂ ಪ್ರೇರಿತರಾಗಿ ಅಂಗಡಿ ಬಂದ್ ಮಾಡಿದ್ದರು. ಇನ್ನು ಕೆಲವರು ಒಳ ಒಳಗೆ ವ್ಯಾಪಾರ ನಡೆಸಿದರು. ಇದು ಮಿಶ್ರ ಪ್ರತಿಕ್ರಿಯೆಗೆ ಅವಕಾಶ ಮಾಡಿಕೊಟ್ಟಂತಾಗಿತ್ತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ
Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ
Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್
BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ
MUST WATCH
ಹೊಸ ಸೇರ್ಪಡೆ
Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್
Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್
Belthangady: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ
NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ