ಬಸ್ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ
ಹೀಗಾಗಿ ಸುಮಾರು 50 ವಿದ್ಯಾರ್ಥಿಗಳು ರಾತ್ರಿ 7 ಗಂಟೆಗೆ ತೆರಳುತ್ತಿದ್ದಾರೆ.
Team Udayavani, Mar 12, 2021, 6:37 PM IST
ಚಡಚಣ: ಪಟ್ಟಣದಿಂದ ದೇವರನಿಂಬರಗಿ, ಇಂಚಗೇರಿ ಹಾಗೂ ಕನ್ನೂರ ಮಾರ್ಗವಾಗಿ ವಿಜಯಪುರಕ್ಕೆ ತೆರಳುವ ಬಸ್ಗಳು ನಿಯಮಿತವಾಗಿ ಸಂಚರಿಸುತ್ತಿಲ್ಲ. ಇದರಿಂದ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾಲೇಜು ವಿದ್ಯಾರ್ಥಿಗಳು, ಬಸ್ ನಿಲ್ದಾಣದಲ್ಲಿ ಝಳಕಿ ಮಾರ್ಗವಾಗಿ ಸಂಚರಿಸುವ ಬಸ್ ತಡೆದು ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿ ಆಕಾಶ ಹೊನ್ನುಂಗರೆ ಮಾತನಾಡಿ, ಚಡಚಣದಿಂದ ಇಂಚಗೇರಿ ಹಾಗೂ ಕನ್ನೂರ ಮಾರ್ಗವಾಗಿ ಸಾಯಂಕಾಲ 4.30ಕ್ಕೆ ವಿಜಯಪುರಕ್ಕೆ ತೆರಳುವ ಬಸ್ ಕಳೆದ 3 ದಿನಗಳಿಂದ ಬಂದಿಲ್ಲ.ಹೀಗಾಗಿ ಸುಮಾರು 50 ವಿದ್ಯಾರ್ಥಿಗಳು ರಾತ್ರಿ 7 ಗಂಟೆಗೆ ತೆರಳುತ್ತಿದ್ದಾರೆ. ಈ ಬಗ್ಗೆ ಸಾರಿಗೆ ನಿಯಂತ್ರಕರನ್ನು ಕೇಳಿದರೆ ಬಸ್ ಬಂದಿಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ನಿಯಂತ್ರಣಾಧಿಕಾರಿ ಶ್ರೀಧರ ಕಟ್ಟಿಮನಿ ಮಾತನಾಡಿ, ಝಳಕಿ ಮಾರ್ಗವಾಗಿ ವಿಜಯಪುರಕ್ಕೆ ತೆರಳುವ ಬಸ್ನ್ನು ಇಂಚಗೇರಿ ಹಾಗೂ ಕನ್ನೂರ ಮಾರ್ಗವಾಗಿ ಓಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಈ ವೇಳೆ ಎಬಿವಿಪಿ ಕಾರ್ಯದರ್ಶಿ ಚೇತನ ನಿರಾಳೆ, ಕಾರ್ಯಕರ್ತರಾದ ಅನೀಲ ಹಿರೇಮಠ, ಪರಶುರಾಮ ಖೇಡಗಿ, ಸಂತೋಷ ಅವಟಿ, ಶಿವಾನಂದ ಮಾಳಿ, ಅರ್ಬಜ ವಾಲಿಕಾರ ಸೇರಿದಂತೆ ವಿದ್ಯರ್ಥಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ