ನಿರಾಣಿ ಫೌಂಡೇಶನ್ನಿಂದ ಸ್ಯಾನಿಟೈಸರ್ ಪೂರೈಕೆ
Team Udayavani, May 26, 2021, 9:28 PM IST
ಮುದ್ದೇಬಿಹಾಳ: ಸಚಿವ ಮುರುಗೇಶ ನಿರಾಣಿ, ಎಂಎಲ್ಸಿ ಹನುಮಂತ ನಿರಾಣಿ ಮಾಲಿಕತ್ವದ ಬೀಳಗಿಯ ಎಂಆರ್ಎನ್ (ನಿರಾಣಿ) ಫೌಂಡೇಶನ್ ವತಿಯಿಂದ ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಸಿಂಪಡಿಸಲು ಉಚಿತವಾಗಿ ಪೂರೈಸಲ್ಪಟ್ಟ 500 ಲೀಟರ್ ಸ್ಯಾನಿಟೈಸರ್ ಕ್ಯಾನ್ಗಳನ್ನು ಮಂಗಳವಾರ ಪುರಸಭೆ ಮುಖ್ಯಾ ಧಿಕಾರಿ ಗೋಪಾಲ ಕಾಸೆಯವರಿಗೆ ಬಿಜೆಪಿ ಮುಖಂಡರು ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ಮುದ್ದೇಬಿಹಾಳ ಮಂಡಲ ಅಧ್ಯಕ್ಷ ಡಾ| ಪರಶುರಾಮ ಪವಾರ, ಕೊರೊನಾ ಮಹಾಮಾರಿ ಬೇಗ ನಿರ್ಮೂಲನೆ ಗೊಂಡು ಜನ ಮೊದಲಿನಂತೆ ಆರೋಗ್ಯವಂತ ರಾಗಿರ ಬೇಕು ಎಂದು ಆಶಿಸಿ ಅನೇಕರು ಸಹಾಯಕ್ಕೆ ಧಾವಿಸತೊಡಗಿದ್ದಾರೆ. ಅಂಥವರಲ್ಲಿ ಸಚಿವ ಮುರುಗೇಶ ನಿರಾಣಿಯವರೂ ಒಬ್ಬರು. ತಮ್ಮ ಮಾಲಿಕತ್ವದ ಸಕ್ಕರೆ ಕಾರ್ಖಾನೆಯಲ್ಲಿ ಉತ್ಪಾದನೆಯಾಗಿರುವ ರಾಸಾಯನಿಕವನ್ನು ಸ್ಯಾನಿಟೈಸರ್ ರೂಪದಲ್ಲಿ ಬಳಸಲು ಎಲ್ಲ ಪುರಸಭೆ, ಪಪಂ, ಗ್ರಾಪಂಗಳಿಗೆ ಉಚಿತವಾಗಿ ಒದಗಿಸತೊಡಗಿದ್ದಾರೆ ಎಂದರು.
ಸ್ಯಾನಿಟೈಸರ್ ಹಂಚಿಕೆ ಉಸ್ತುವಾರಿ ಬಸವರಾಜ ನಂದಿಕೇಶ್ವರಮಠ ಮಾತನಾಡಿ, 25 ಲೀ. ನೀರಿನಲ್ಲಿ 1 ಲೀ. ಸ್ಯಾನಿಟೈಸರ್ ಹಾಕಿ ತಯಾರಿಸಿದ ದ್ರಾವಣವನ್ನು ಸ್ಪ್ರೆàಯರ್ ಗಳ ಮೂಲಕ ಸಿಂಪಡಿಸಬೇಕು. ಅಗತ್ಯ ಬಿದ್ದರೆ ಇನ್ನೂ ಹೆಚ್ಚು ಸ್ಯಾನಿಟೈಸರ್ ಕೊಡಲು ಫೌಂಡೇಶನ್ ಸಿದ್ಧವಿದೆ ಎಂದರು. ಮುಖ್ಯಾ ಧಿಕಾರಿ ಗೋಪಾಲ ಕಾಸೆ ಕ್ಯಾನ್ ಸ್ವೀಕರಿಸಿ ಮಾತನಾಡಿ, ದಾನಿಗಳ ನೆರವಿನಿಂದ ಪಟ್ಟಣದಲ್ಲಿ ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗಟ್ಟುವುದು ಹೆಚ್ಚು ಪರಿಣಾಮಕಾರಿಯಾಗಲಿದೆ. ಇದನ್ನು ಅಗತ್ಯ ಇರುವೆಡೆ, ಸೋಂಕಿನ ಪಾಸಿಟಿವ್ ಇರುವ ಪ್ರದೇಶಗಳಲ್ಲಿ ಆದ್ಯತೆ ಮೇರೆಗೆ ಸಿಂಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಪುರಸಭೆ ನಾಮನಿರ್ದೇಶಿತ ಸದಸ್ಯ ರಾಜಶೇಖರ ಹೊಳಿ, ಪುರಸಭೆ ಮಾಜಿ ಸದಸ್ಯ ರಾಜು ಬಳ್ಳೊಳ್ಳಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪುನೀತ್ ಹಿಪ್ಪರಗಿ, ಪ್ರಕಾಶ ಮಠ, ಅಶೋಕ ರೇವಡಿ, ಸುಭಾಷ್ ಬಿದರಕುಂದಿ, ಶಿವಕುಮಾರ ಶಾರದಳ್ಳಿ, ನಿಂಗರಾಜ ಮಹಿಂದ್ರಕರ, ಪುರಸಭೆ ಕಂದಾಯ ನಿರೀಕ್ಷಕಿ ಎಂ.ಬಿ. ಮಾಡಗಿ ಸೇರಿ ಹಲವರು ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ
Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ
Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್
BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ
SSLC ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಗೆ ಎದೆನೋವು… ಆಸ್ಪತ್ರೆಗೆ ದಾಖಲು
MUST WATCH
ಹೊಸ ಸೇರ್ಪಡೆ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ