ಶ್ರೀಮಂತಿಕೆ-ಬಡತನ ಶಾಶ್ವತವಲ್ಲ

ಹುಟ್ಟು -ಸಾವಿನ ನಡುವಿನ ಬದುಕಿನಲ್ಲಿ ಒಳ್ಳೆ ಕೆಲಸ ಮಾಡಿ: ಪಾಟೀಲ

Team Udayavani, Feb 7, 2020, 1:32 PM IST

7-February-13

ತಾಳಿಕೋಟೆ: ಪರರ ಉಪಕಾರಕ್ಕಾಗಿ ನಂಬಿ ಹಳ್ಳ ಕೊಳ್ಳಗಳು ಹರಿಯುತ್ತವೆ. ಅವುಗಳಂತೆ ಸಮಾಜದಲ್ಲಿ ಜನಜಾಗೃತಿಗಾಗಿ ಅಭಿವೃದ್ಧಿ ಪಡಿಸುವ ಕುರಿತು ಅನೇಕ ಶರಣರು ಮಹಾತ್ಮರು ಜನ್ಮ ತಾಳಿದ್ದಾರೆ. ಅವರಲ್ಲಿ ಸಿದ್ಧರಾಮೇಶ್ವರರು ಒಬ್ಬರಾಗಿದ್ದರೆಂದು ಸಮಾಜ ಸೇವಕ ಶಾಂತಗೌಡ ಪಾಟೀಲ (ನಡಹಳ್ಳಿ) ಹೇಳಿದರು.

ಅಖೀಲ ಕರ್ನಾಟಕ ಭೋವಿ ವಡ್ಡರ ಯುವ ವೇದಿಕೆ ಕ್ರಾಂತಿ ವತಿಯಿಂದ ವಿಠ್ಠಲ ಮಂದಿರದಲ್ಲಿ ನಡೆದ ಶಿವಯೋಗಿ ಸಿದ್ಧರಾಮೇಶ್ವರರ 848ನೇ ಜಯಂತಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಲ್ಲರೂ ಒಂದೇ ತಾಯಿ ಮಕ್ಕಳಂತೆ ನಾಡಿನಲ್ಲಿ ಬದುಕುತ್ತಿದ್ದೇವೆ. ಮನುಷ್ಯ ಹುಟ್ಟುತ್ತಾನೆ ಸಾಯುತ್ತಾನೆ ಎಂಬುದು ಗೊತ್ತಿದೆ. ಆದರೆ ಹುಟ್ಟು ಸಾವಿನ ನಡುವಿನ ಬದುಕಿನಲ್ಲಿ ಒಳ್ಳೆ ಕೆಲಸಗಳನ್ನು ಮಾಡಬೇಕೆಂದರು. ಶ್ರೀಮಂತಿಕೆ ಬಡತನವೆಂಬುದು ಶಾಶ್ವತವಲ್ಲ. ಶರಣರು ಹೇಳಿದಂತೆ ಎಲ್ಲರೂ ಒಂದೇ ತಾಯಿ ಮಕ್ಕಳೆಂಬ ಭಾವನೆಯಿಂದ ನಡೆದು ಕೊಳ್ಳಬೇಕು. ಸಮಾಜದಲ್ಲಿಯ ಮುಖಂಡರು ಬಡಜನರ ಬಗ್ಗೆ ಗಮನ ನೀಡಿ ಅವರಿಗೆ ನಿವೇಶನ ಹಾಗೂ ಮನೆಗಳನ್ನು ಕೊಡಿಸಲು ಮುಂದಾದರೆ ಸಮಾಜ ಬೆಳವಣಿಗೆಯಾಗಲು ಸಾಧ್ಯ ಎಂದರು.

ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಬೇಕು. ಶಿಕ್ಷಣದಿಂದಲೇ ದೇಶ ಉದ್ಧಾರವಾಗಲು ಸಾಧ್ಯ ಎಂದ ಅವರು, ಬಡತನವಿದ್ದರೂ ಮಕ್ಕಳಿಗೆ ಶಿಕ್ಷಣ ನೀಡಬೇಕು. ಇಂತಹದಕ್ಕೆ ಒಳ್ಳೆ ಸಂಸ್ಕಾರವೆನ್ನಲಾಗುತ್ತದೆ ಎಂದರು.

ಗಜೇಂದ್ರಗಡದ ಸಾಹಿತಿ ಎಫ್‌.ಎಸ್‌. ಕರಿದುರ್ಗನ್ನವರ ಮಾತನಾಡಿ, ಸಿದ್ಧರಾಮೇಶ್ವರರು ಚಿಕ್ಕವರಿರುವಾಗಲೇ ಹೊಲದ ಕೆಲಸಕ್ಕೆ ಹೋಗುತ್ತಾರೆ. ಸ್ವಾಮಿ ರೂಪತಾಳಿದ ಭಗವಂತ ಭೇಟಿಯಾಗುತ್ತಾನೆ. ಸ್ವಾಮಿಗಳ ಆಸೆಯಂತೆ ಅವರು ಹೇಳಿದ್ದನ್ನು ಸಿದ್ಧರಾಮರು ತಂದು ಕೊಡುತ್ತಾರೆ. ಶ್ರೀಗಳಿಂದ ಮೆಚ್ಚುಗೆ ಪಡೆದ ನಂತರ ಶ್ರೀಶೈಲದಿಂದ ಸೊಲ್ಲಾಪುರಕ್ಕೆ ತೆರಳಿ ಚನ್ನಮಲ್ಲಿಕಾರ್ಜು ದೇವಾಲಯ ಕಟ್ಟಿಸುತ್ತಾರೆ.

ರೈತರಿಗಾಗಿ ಕೆರೆಗಳನ್ನು ಕಟ್ಟಿಸುತ್ತಾರೆ. ಬಸವ ತತ್ವ ಉಳಿಸುವ ಶ್ರಮಿಸಿದ್ದಾರೆ ಎಂದರು. ಭೋವಿ ಯುವ ವೇದಿಕೆ ಕ್ರಾಂತಿ ರಾಜ್ಯಾಧ್ಯಕ್ಷ ವೈ.ಕೊಟ್ರೇಶ ಮಾತನಾಡಿ, ಬಸವಣ್ಣನವರು, ಅಕ್ಕಮಹಾದೇವಿ, ಸಿದ್ಧಾರೂಡರು, 12ನೇ ಶತಮಾನದ ಶರಣರು ಒಳ್ಳೆ ಸಂಸ್ಕೃತಿ, ಸಂಸ್ಕಾರ ನೀಡಿದ್ದಾರೆ. 68 ಸಾವಿರ ವಚನಗಳನ್ನು ಬರೆದು ಎಲ್ಲರಿಗೂ ಮಾರ್ಗ ತೋರಿಸಿದ್ದಾರೆ. ಕಾರಣ ಸಿದ್ಧರಾಮೇಶ್ವರರ ಇತಿಹಾಸವನ್ನು ಎಲ್ಲರೂ ಓದಿ ತಿಳಿದುಕೊಳ್ಳಬೇಕೆಂದರು.

ಸ್ಥಳೀಯ ಭೋವಿ ಸಮಾಜದ ಅಧ್ಯಕ್ಷ ಹುಲಿಗೆಪ್ಪ ಕಟ್ಟಿಮನಿ ಮಾತನಾಡಿದರು. ಸಂಗಯ್ಯ ವಿರಕ್ತಮಠ ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಸದಸ್ಯ ವಾಸುದೇವ ಹೆಬಸೂರ, ಫಾತಿಮಾ ಖಾಜಾಬಸರಿ, ಸಿದ್ದು ಚಿಂಚೋಳಿ, ನ್ಯಾಯವಾದಿ ಕಾರ್ತಿಕ ಕಟ್ಟಿಮನಿ, ಪತ್ರಕರ್ತ ಜಿ.ಟಿ. ಘೋರ್ಪಡೆ, ಸಂತೋಷ ಹಜೇರಿ, ಶಿವಶಂಕರ ಹಿರೇಮಠ,ಮಾರುತಿ ಬೇಕಿನಾಳ, ಭೀಮಣ್ಣ ವಡ್ಡರ, ಪ್ರಕಾಶ ಹಜೇರಿ, ನಾಗರಾಜ ಭೋವಿ, ದ್ಯಾವಪ್ಪ ಕಟ್ಟಿಮನಿ, ದೇವೇಂದ್ರ ಕೂಚಬಾಳ, ಫಯಾಜ್‌ ಉತ್ನಾಳ, ರಿಯಾಜ್‌ ಡೋಣಿ, ಲಾಳೇಮಶಾಕ ಖಾಜಾಬಸರಿ, ಜಿಲ್ಲಾಧ್ಯಕ್ಷ ದೇವು ಕೂಚಬಾಳ,
ಹನುಮಂತ ಕಟ್ಟಿಮನಿ ನಿರೂಪಿಸಿದರು.

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.